Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಒಂದೇ ವ್ಯಕ್ತಿಗೆ ಕಡಿಮೆ ರಕ್ತದೊತ್ತಡ...

ಒಂದೇ ವ್ಯಕ್ತಿಗೆ ಕಡಿಮೆ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡ ಎರಡೂ ಇರಲು ಸಾಧ್ಯವೇ?

ವಾರ್ತಾಭಾರತಿವಾರ್ತಾಭಾರತಿ16 Dec 2020 6:40 PM IST
share
ಒಂದೇ ವ್ಯಕ್ತಿಗೆ ಕಡಿಮೆ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡ ಎರಡೂ ಇರಲು ಸಾಧ್ಯವೇ?

ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ನಾವು ಪ್ರತ್ಯೇಕವಾಗಿ ಕೇಳಿದ್ದೇವೆ. ಆದರೆ ಯಾರಾದರೂ ತನಗೆ ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಇವೆರಡೂ ಇವೆ ಎಂದು ದೂರುವುದನ್ನು ಕೇಳಿದ್ದೀರಾ? ಹೌದು,ಇಂತಹ ಸಮಸ್ಯೆ ಇರುವುದು ನಿಜ,ಆದರೆ ಇದು ಅಪರೂಪವಾಗಿದೆ. ರಕ್ತದೊತ್ತಡದ ಇಂತಹ ಏರಿಳಿತಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ,ಆದರೆ ಒತ್ತಡ,ಮದ್ಯಪಾನ,ಔಷಧಿ ಇತ್ಯಾದಿಗಳು ಇಂತಹ ಸಮಸ್ಯೆಗೆ ಸಾಮಾನ್ಯ ಕಾರಣಗಳಾಗಿವೆ. ನಿಮ್ಮ ರಕ್ತದೊತ್ತಡದ ಅಂಕಿಗಳು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳಬಲ್ಲವು. ರಕ್ತದೊತ್ತಡದಲ್ಲಿ ದಿಢೀರ್ ಏರಿಕೆ ಅಥವಾ ಕುಸಿತ ಉಂಟಾದರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಬೇಕು.

 ರಕ್ತಸಂಚಾರದ ಗತಿಯ ಮೂಲಕ ರಕ್ತದೊತ್ತಡವನ್ನು ಅಳೆಯಲಾಗುತ್ತದೆ. ರಕ್ತದೊತ್ತಡವು ದಿನವಿಡೀ ಬದಲಾಗುತ್ತಲೇ ಇರುತ್ತದೆ ಮತ್ತು ಹೆಚ್ಚಿನ ಸಮಯದಲ್ಲಿ ಅದು ಗೊತ್ತಾಗುತ್ತದೆ. ಉದಾಹರಣೆಗೆ ನೀವು ವ್ಯಾಯಾಮ ಮಾಡುವಾಗ ರಕ್ತದೊತ್ತಡವು ಅಧಿಕವಾಗಿರುತ್ತದೆ,ಆದರೆ ವಿಶ್ರಾಂತಿಯ ಸಮಯದಲ್ಲಿ ಅದು ಕಡಿಮೆಯಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ರಕ್ತದೊತ್ತಡದ ಏರಿಳಿತಗಳ ಯಾವುದೇ ಪ್ರಮುಖ ಲಕ್ಷಣಗಳು ಅನುಭವವಾಗುವುದಿಲ್ಲ.

ನೀವು ರಕ್ತದೊತ್ತಡದಲ್ಲಿ ಏರಿಳಿತಗಳ ಲಕ್ಷಣಗಳನ್ನು ಗಮನಿಸಿದರೆ ಮತ್ತು ತಪಾಸಣೆಯ ಬಳಿಕ ರಕ್ತದೊತ್ತಡ ಅಸಾಮಾನ್ಯವಾಗಿ ಹೆಚ್ಚಾಗಿದ್ದರೆ ಅಥವಾ ಕಡಿಮೆಯಾಗಿದ್ದರೆ ಅದು ಕಳವಳದ ವಿಷಯವಾಗಬಹುದು. ಕೆಲವರು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಎರಡನ್ನೂ ಅನುಭವಿಸುತ್ತಾರೆ,ಆದರೆ ಅವರಿಗೆ ವೈದ್ಯರ ಸಲಹೆಯ ಅಗತ್ಯವಿದೆಯೇ ಎನ್ನುವುದು ರಕ್ತದೊತ್ತಡದ ಅಂಕಿಗಳನ್ನು ಅವಲಂಬಿಸಿರುತ್ತದೆ.

ರಕ್ತದೊತ್ತಡದಲ್ಲಿ ಏರಿಳಿತಗಳಿಗೆ ಹಲವಾರು ಕಾರಣಗಳಿವೆ

* ಒತ್ತಡ: ಒತ್ತಡವು ನಿಮ್ಮ ರಕ್ತದೊತ್ತಡದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಬಲ್ಲದು. ಅದು ಭಾವನಾತ್ಮಕ ಒತ್ತಡವಾಗಿರಲಿ ಅಥವಾ ಆತಂಕವಾಗಿರಲಿ,ರಕ್ತದೊತ್ತಡದಲ್ಲಿ ಏರಿಕೆ ಅಥವಾ ಕುಸಿತವನ್ನುಂಟು ಮಾಡುತ್ತದೆ. ಒತ್ತಡಪೂರ್ಣ ಉದ್ಯೋಗಗಳನ್ನು ಮಾಡುವವರು ರಕ್ತದೊತ್ತಡ ಸೇರಿದಂತೆ ಹೃದಯನಾಳೀಯ ಸಮಸ್ಯೆಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಕ್ರಮೇಣ ಅದು ತೀವ್ರ ರಕ್ತದೊತ್ತಡ ಏರಿಳಿತಗಳಿಗೆ ಕಾರಣವಾಗಬಹುದು.

* ಔಷಧಿಗಳು: ಹಾಲಿ ಇರುವ ಅನಾರೋಗ್ಯಕ್ಕಾಗಿ ನೀವು ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮ್ಮ ರಕ್ತದೊತ್ತಡದಲ್ಲಿ ಏರಿಳಿತಗಳಾಗಬಹುದು. ವೈದ್ಯರು ಸೂಚಿಸುವ ಅಥವಾ ನೀವೇ ಸ್ವಯಂ ವೈದ್ಯರಾಗಿ ಔಷಧಿ ಅಂಗಡಿಗಳಲ್ಲಿ ಖರೀದಿಸುವ ಔಷಧಿಗಳು ರಕ್ತದೊತ್ತಡದ ಮೇಲೆ ಪರಿಣಾಮವನ್ನು ಬೀರಬಲ್ಲವು. ರಕ್ತದೊತ್ತಡದ ಮಾತ್ರೆಗಳು ಮತ್ತು ಮೂತ್ರವರ್ಧಕಗಳು ರಕ್ತದೊತ್ತಡವನ್ನು ಕಡಿಮೆ ಮಾಡಿದರೆ ಅಲರ್ಜಿ ಮತ್ತು ಶೀತದ ಔಷಧಿಗಳನ್ನು ಅದನ್ನು ಹೆಚ್ಚಿಸಬಹುದು.

* ದೈಹಿಕ ಚಟುವಟಿಕೆಗಳು: ನಿಮ್ಮ ರಕ್ತದೊತ್ತಡವು ನಿಮ್ಮ ದೈಹಿಕ ಕ್ರಿಯಾಶೀಲತೆಯನ್ನೂ ಅವಲಂಬಿಸಿರುತ್ತದೆ. ಮಾತನಾಡುವಾಗ, ನಗುವಾಗ,ವ್ಯಾಯಾಮ ಮಾಡುವಾಗ, ಓಡುವಾಗ ಇತ್ಯಾದಿ ಸಂದರ್ಭಗಳಲ್ಲಿ ರಕ್ತದೊತ್ತಡದಲ್ಲಿ ಏರಿಳಿತಗಳು ಆಗುತ್ತಿರುತ್ತವೆ.

* ಆಹಾರ ಮತ್ತು ಪಾನೀಯಗಳು

ದೈಹಿಕ ಚಟುವಟಿಕೆಗಳಂತೆ ಅನಾರೋಗ್ಯಕರ ಅಥವಾ ಹೆಚ್ಚಿನ ಟೈರಾಮಿನ್ ಅನ್ನು ಒಳಗೊಂಡಿರುವ ಸಂಸ್ಕರಿತ ಆಹಾರಗಳು ರಕ್ತದೊತ್ತಡದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಟೈರಾಮಿನ್ ಒಂದು ಅಮಿನೋ ಆಮ್ಲವಾಗಿದ್ದು ರಕ್ತದೊತ್ತಡ ನಿಯಂತ್ರಣದೊಂದಿಗೆ ಗುರುತಿಸಿಕೊಂಡಿದೆ. ಅತಿಯಾದ ಟೈರಾಮಿನ್ ಇರುವ ಆಹಾರವನ್ನು ಸೇವಿಸಿದಾಗ ರಕ್ತದೊತ್ತಡದಲ್ಲಿ ಏರಿಕೆಯಾಗುತ್ತದೆ. ಇದೇ ರೀತಿ ಶರೀರದಲ್ಲಿ ಕಡಿಮೆ ಟೈರಾಮಿನ್ ಮಟ್ಟ ರಕ್ತದೊತ್ತಡ ಕುಸಿಯುವಂತೆ ಮಾಡುತ್ತದೆ. ಟೈರಾಮಿನ್ ನಮ್ಮ ಶರೀರದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ,ಹೀಗಾಗಿ ನಾವು ಅದನ್ನು ಆಹಾರದ ಮೂಲಕ ತೆಗೆದುಕೊಳ್ಳಬೇಕಿಲ್ಲ.

  * ವೈಟ್ ಕೋಟ್ ಸಿಂಡ್ರೋಮ್: ವೈದ್ಯರನ್ನು ಭೇಟಿಯಾಗುವ ಬಗ್ಗೆ ಯೋಚಿಸಿದರೆ ನಿಮಗೆ ಅಳುಕು ಉಂಟಾಗುತ್ತದೆಯೇ? ಈ ಸ್ಥಿತಿಯನ್ನು ವೈಟ್ ಕೋಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿದೆ. ಬಹಳಷ್ಟು ಜನರು ವೈದ್ಯರನ್ನು ಭೇಟಿಯಾಗುವ ಮುನ್ನ ಒತ್ತಡ ಮತ್ತು ಚಿಂತೆಗೊಳಗಾಗುತ್ತಾರೆ. ಇದು ಅವರ ರಕ್ತದೊತ್ತಡ ಏರುವಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಅವರ ರಕ್ತದೊತ್ತಡವು ಹೆಚ್ಚಿನ ಅಂಕಿಗಳನ್ನು ತೋರಿಸಬಹುದು,ಆದರೆ ಅವರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ ಎನ್ನುವುದು ಇದರ ಅರ್ಥವಲ್ಲ. ಆದರೆ ಪದೇ ಪದೇ ವೈದ್ಯರನ್ನು ಭೇಟಿಯಾಗುವವರು ಕಾಲಕ್ರಮೇಣ ಅಧಿಕ ರಕ್ತದೊತ್ತಡ ಸಮಸ್ಯೆಗೆ ಗುರಿಯಾಗಬಹುದು.

 * ಅಡ್ರಿನಾಲ್ ಸಮಸ್ಯೆಗಳು: ಹಾರ್ಮೋನ್ ಏರಿಳಿತಗಳೂ ರಕ್ತದೊತ್ತಡ ಏರಿಳಿತಗಳಿಗೆ ಕಾರಣವಾಗುತ್ತವೆ. ನಿಮ್ಮ ಶರೀರವು ಅಗತ್ಯ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತಿಲ್ಲವಾದರೆ ಅಡ್ರಿನಲ್ ನಿಷ್ಕ್ರಿಯತೆಯು ನಿಮ್ಮ ರಕ್ತದೊತ್ತಡ ಕುಸಿಯಲು ಕಾರಣವಾಗಬಹುದು. ಇದೇ ರೀತಿ ಅಡ್ರಿನಲ್ ವ್ಯವಸ್ಥೆಯು ಅತಿ ಕ್ರಿಯಾಶೀಲವಾಗಿದ್ದರೆ ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X