ಡಿ.20 : ಜಪ್ಪು ಸದ್ಭಾವನ ವೇದಿಕೆಯಿಂದ ಸೌಹಾರ್ದ ಕೂಟ
ಮಂಗಳೂರು, ಡಿ.16:ನಗರದ ಜಪ್ಪು ವರ್ತುಲದ ಸದ್ಭಾವನ ವೇದಿಕೆಯ ವತಿಯಿಂದ ಡಿ.20ರಂದು ಸಂಜೆ 4ರಿಂದ 6ಗಂಟೆಯವರೆಗೆ ದೀಪಾವಳಿ, ಕ್ರಿಸ್ಮಸ್ ಹಾಗೂ ಈದ್ ಸೌಹಾರ್ದ ಕೂಟವನ್ನು ಕಾಸಿಯಾ ಚರ್ಚ್ ಹಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ದಲ್ಲಿ ರಾಜ್ಯ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ,ಕಾಸಿಯಾ ಚರ್ಚ್ ನ ಧರ್ಮ ಗುರುಗಳಾದ ವಂ.ಎರಿಕ್ ಕ್ರಾಸ್ತಾ,ಶಾಂತಿ ಪ್ರಕಶಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞ ಭಾಗವಹಿಸಲಿದ್ದಾರೆ ಎಂದು ಸದ್ಭಾವನ ವೇದಿಕೆ ಪ್ರಕಟಣೆ ತಿಳಿಸಿದೆ.
Next Story