ಹಿದಾಯತ್ ನಗರ ಎಸ್ಸೆಸ್ಸೆಫ್ಗೆ ಆಯ್ಕೆ
ಕೋಟೆಕಾರ್, ಡಿ.18: ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖೆಯ ಮಹಾಸಭೆಯು ಹಿದಾಯತ್ ನಗರ ಮದ್ರಸ ಹಾಲ್ನಲ್ಲಿ ಜರುಗಿತು. ಅಬ್ದಲ್ ಅಝೀಝ್ ಸಖಾಫಿ ದುಆಗೈದರು. ಎಸ್ವೈಎಸ್ ಅಧ್ಯಕ್ಷ ಅಹ್ಮದ್ ಕಬೀರ್ ಸಅದಿ ಉಳ್ಳಾಲ ಮಾತನಾಡಿದರು.
ಸಬೀರ್ ಅಶ್ಅರಿ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಮುಸ್ತಫಾ, ಕಾರ್ಯದರ್ಶಿಯಾಗಿ ಹರ್ಷದ್, ಕೋಶಾಧಿಕಾರಿಯಾಗಿ ಸಿರಾಜ್ ಆಯ್ಕೆಯಾದರು.ಈ ಸಂದರ್ಭ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಕಾರ್ಯದರ್ಶಿ ಸಲೀಂ, ಝುಬೈರ್ ಝುಹ್ರಿ, ಮಸೀದಿಯ ಕಾರ್ಯದರ್ಶಿ ಜಾಬಿರ್ ಹುಸೈನ್, ಕೋಶಾಧಿಕಾರಿ ಮುನೀರ್ ಎಸ್ಎಚ್ ಉಪಸ್ತಿತರಿದ್ದರು.
Next Story