ಪ್ರತಿಭಟನಾನಿರತ ರೈತರ ಫೇಸ್ಬುಕ್, ಇನ್ಸ್ಟಾಗ್ರಾಮ್ ಪೇಜ್ ಬ್ಲಾಕ್: ಆರೋಪ
ನೇರಪ್ರಸಾರದ ಬಳಿಕ ನಡೆದ ಬೆಳವಣಿಗೆ
ಹೊಸದಿಲ್ಲಿ: ಕೇಂದ್ರ ಸರಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬಳಸುತ್ತಿರುವ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಪೇಜ್ ಗಳನ್ನು ರವಿವಾರ ನೇರ ಪ್ರಸಾರದ ಕಾರ್ಯಕ್ರಮದ ಬಳಿಕ ನಿರ್ಬಂಧಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಸಾವಿರಾರು ರೈತರು ಕಳೆದ ಮೂರು ವಾರಗಳಿಂದ ದಿಲ್ಲಿ ಗಡಿಭಾಗಗಳಲ್ಲಿ ಜಮಾಯಿಸಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
Next Story