ಕೋಟತಟ್ಟು ಮತಗಟ್ಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತದಾನ
![ಕೋಟತಟ್ಟು ಮತಗಟ್ಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತದಾನ ಕೋಟತಟ್ಟು ಮತಗಟ್ಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತದಾನ](https://www.varthabharati.in/sites/default/files/images/articles/2020/12/22/272167-1608624148.gif)
ಉಡುಪಿ, ಡಿ.22: ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಬೆಳಗ್ಗೆ ಕೋಟತಟ್ಟು ಗ್ರಾಪಂ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಸಚಿವರು ಪತ್ನಿ, ಮಕ್ಕಳೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು,ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಶ್ರಮಿಸಲು ಈ ಚುನಾವಣೆ ಒಂದು ಅಪೂರ್ವ ಅವಕಾಶ. ಪಂಚಾಯತ್ರಾಜ್ ಅಂದರೆ ಆಳಿಸಿಕೊಳ್ಳುವ ಆಡಳಿತ. ಕರ್ನಾಟಕ ರಾಜ್ಯದಲ್ಲಿ 99ಸಾವಿರ ಜನಪ್ರತಿನಿಧಿಗಳು ಆಯ್ಕೆಯಾಗುವ ಪ್ರಕ್ರಿಯೆ ಇದಾಗಿದೆ ಎಂದರು.
ಮತದಾರರು ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಸಮಷ್ಠಿಯ ಗ್ರಾಮಾಡಳಿತ ಹಾಗೂ ಗ್ರಾಮ ಸರಕಾರ ಸ್ಥಾಪನೆಗೆ ಕೈಜೋಡಿಸಬೇಕು. ಅಪೂರ್ವ ಅವಕಾಶವನ್ನು ಎಲ್ಲರು ಬಳಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ತಾನು ಮತ ಹಾಕಿದ್ದೇನೆ. ನೀವು ಕೂಡ ಬಂದು ಮತದಾನ ಮಾಡಿ ಎಂದು ಅವರು ಮತದಾರರಿಗೆ ಮನವಿ ಮಾಡಿದರು.
Next Story