ಇಂಡಿಯನ್ ಬುಕ್ ಆಪ್ ರೆಕಾರ್ಡ್ ಸೇರಿ ಹಲವು ಸಾಧನೆಗಳ ಪಟ್ಟಿಗೆ 2.4 ವರ್ಷದ ತಾನೀಶ್

ಕೋಲಾರ, ಡಿ.24: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ 2 ವರ್ಷ 4 ತಿಂಗಳ ತಾನೀಶ್. ಎನ್ ಇಂಡಿಯನ್ ಬುಕ್ ಆಪ್ ರೆಕಾರ್ಡ್ ಜೊತೆಗೆ ಹಲವು ರೆಕಾರ್ಡ್ ಮಾಡುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ತಾನೀಶ್.ಎನ್ ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವಿಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಹಾಗೂ ಕಿಡ್ಸ್ ವರ್ಡ್ ರೆಕಾರ್ಡ್ ಮಾಡಿದ್ದಾನೆ ಎಂದು ಆತನ ತಂದೆ ಲಕ್ಕೂರು ನಾಗರಾಜ್ ತಿಳಿಸಿದ್ದಾರೆ.
ನಾಗರಾಜ್ ಅವರು ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ರಾಜ್ಯ ಅಧ್ಯಕ್ಷ ಹಾಗೂ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಯುವ ಕವಿ. ತಾನೀಶ್ ತಾಯಿ ಶ್ವೇತ ನಾಗರಾಜ್ ಅವರು ಶ್ವೇತಾಂಜಲಿ ಭರತನಾಟ್ಯ ಶಾಲೆ(ರಿ.) ಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ತಾನೀಶ್.ಎನ್ ದೇಶದ ಎಲ್ಲಾ ರಾಜ್ಯಗಳ ಹೆಸರು ಮತ್ತು ರಾಜಧಾನಿಗಳ ಹೆಸರು, 150 ಮಹಾನ್ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಂಪಚದ ವಿವಿಧ ದೇಶಗಳ ಹೆಸರು, 90 ಪ್ಲಾಷ್ ಕಾರ್ಡ್ಸ್ ಹೆಸರುಗಳು, ಪ್ರಚಲಿತ ವಿದ್ಯಮಾನದ ಸಾಮಾನ್ಯ ಜ್ಞಾನದ 80 ಪ್ರಶ್ನೆಗಳಿಗೆ ಪಟಪಟನೆ ಉತ್ತರ ನೀಡುತ್ತಾನೆ. ಹಣ್ಣುಗಳು, ತರಕಾರಿಗಳು, ಬಣ್ಣಗಳು, ವಾಹನಗಳು, ಮಾನವ ದೇಹದ ಅಂಗಾಗಗಳು, ಕನ್ನಡ ವರ್ಣಮಾಲೆ, ತಿಂಗಳುಗಳು, ಅಲ್ಪಬೇಟ್ಸ್, ಆಕ್ಷನ್ ವರ್ಡ್ಸ್ ಗಳನ್ನು ಬಹುಬೇಗನೆ ಹೇಳುತ್ತಾನೆ.
ತಾನೀಶ್.ಎನ್ ನ ಪ್ರತಿಭೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವೀಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಹಾಗೂ ಕಿಡ್ಸ್ ವರ್ಡ್ ರೆಕಾರ್ಡ್ಸ್ ಪದಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದೆ. ಈ ಪುಟ್ಟ ಸಾಧಕನ ಸಾಧನೆಗೆ ಚಿನ್ನದ ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ತಂದೆ ಲಕ್ಕೂರು ಎಂ.ನಾಗರಾಜ್ ತಿಳಿಸಿದರು.
ತಾನೀಶ್ ದೇಶದ ಮಹತ್ತರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಜೊತೆಗೆ 3 ರೆಕಾರ್ಡ್ಸ್ ಮಾಡಿದ್ದು, ನಮಗೆ ಬಹಳ ಹೆಮ್ಮೆ ಎನಿಸಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಭರತನಾಟ್ಯ ಕಲಿಕೆಯ ಜೊತೆಗೆ ಕರಾಟೆ, ತಬಲ, ಸ್ಕೇಟಿಂಗ್ ತರಗತಿಗಳ ತರಬೇತಿ ಪಡೆಯುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸುವ ಗುರಿಯತ್ತ ನಿರಂತರ ಅಭ್ಯಾಸವನ್ನು ಪಡೆಯುತ್ತಿದ್ದಾನೆ ಎಂದು ಅವರು ತಿಳಿಸಿದರು.
''ತಾನೀಶ್ ಗೆ ಯಾವುದೇ ವಿಷಯವನ್ನು ಒಮ್ಮೆ ಹೇಳಿದರೆ ಸಾಕು ಕೂಡಲೇ ಅರ್ಥೈಸಿಕೊಂಡು ಮರು ಕ್ಷಣದಲ್ಲಿಯೇ ನಮಗೆ ಹೇಳಿ ಕೊಡುವಷ್ಟು ಸಮರ್ಥವಾದ ಜ್ಞಾನವನ್ನು ಪಡೆದಿದ್ದಾನೆ. ಇವನು ಎಲ್ಲಾ ಕ್ಷೇತ್ರದಲ್ಲಿಯೂ ಅಪ್ರತಿಮ ಸಾಧನೆ ಮಾಡಿ ನಮ್ಮ ಜಿಲ್ಲೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸುವ ಮೂಲಕ ವಿಶ್ವಮಾನವ ಕುವೆಂಪು, ಅಂಬೇಡ್ಕರ್, ಬುದ್ಧ, ಬಸವ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ಸಾಗಲಿ ಎಂದು ಬಯಸುವೆ'' ಎಂದು ಆತನ ತಾಯಿ ಶ್ವೇತ ನಾಗರಾಜ್ ತಿಳಿಸಿದರು.







