ವಿಜಯಪುರ: ಮಾಜಿ ಪ್ರಧಾನಿ ವಾಜಪೇಯಿಯ ಮೂರ್ತಿ ಅನಾವರಣ

ವಿಜಯಪುರ, ಡಿ.25: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಇಂದು ವಿಜಯಪುರದಲ್ಲಿ ನಗರದಲ್ಲಿ ಅವರ ಹೆಸರಿನ ರಸ್ತೆಯನ್ನು ಸಿದ್ಧೇಶ್ವರಶ್ರೀ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ವಿಜಯಪುರ ನಗರದ ಗಾಂಧಿಚೌಕ್ ದಿಂದ ಹೊಸದಾಗಿ ನಿರ್ಮಾಣವಾದ 1.9 ಸಿಸಿ ರಸ್ತೆಗೆ ಅಟಲ್ ಬಿಹಾರಿ ವಾಜಪೇಯಿ ಎಂದು ನಾಮಕರಣ ಮಾಡಲಾಗಿದೆ.
ಇದೇ ಸಂದರ್ಭ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀ ಸಾನಿಧ್ಯದಲ್ಲಿ 6 ಅಡಿ ಎತ್ತರದ ಕಟ್ಟೆಯ ಮೇಲೆ 6 ಅಡಿ ಎತ್ತರದ 400 ಕೆಜಿ ತೂಕದ ವಾಜಪೇಯಿ ಅವರ ಕಂಚಿನ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು. ರಾಜಸ್ಥಾನದ ಜೈಪುರದಲ್ಲಿ ಈ ಮೂರ್ತಿ ನಿರ್ಮಾಣವಾಗಿದ್ದು, 6.50 ಲಕ್ಷ ರೂ. ವೆಚ್ಚವಾಗಿದೆ. ಮೂರ್ತಿ ಪ್ರತಿಷ್ಠಾಪಿಸಿರುವ ಕಟ್ಟೆ 2.80 ಲಕ್ಷ ರೂ. ಖರ್ಚಾಗಿದೆ. ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ, ಈಗ ವಿಜಯಪುರ ನಗರ ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಇದರ ಸಂಪೂರ್ಣ ವೆಚ್ಚವನ್ನು ಭರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚ್ಯೂವಲ್ ಕಾರ್ಯಕ್ರಮದ ಕಾರಣಾಂತರಗಳಿಂದ ರದ್ದಾಗಿದೆ.






