Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಂಕಣ ರೈಲು ಮಾರ್ಗದಲ್ಲಿ ಎರಡು...

ಕೊಂಕಣ ರೈಲು ಮಾರ್ಗದಲ್ಲಿ ಎರಡು ಸಾಪ್ತಾಹಿಕ ವಿಶೇಷ ರೈಲು

ವಾರ್ತಾಭಾರತಿವಾರ್ತಾಭಾರತಿ26 Dec 2020 8:06 PM IST
share

ಉಡುಪಿ, ಡಿ.26: ಕೊಂಕಣ ರೈಲು ಮಾರ್ಗದಲ್ಲಿ ಕೊಯಮತ್ತೂರು ಹಾಗೂ ಹಿಸ್ಸಾರ್ ಜಂಕ್ಷನ್ ಮತ್ತು ಎರ್ನಾಕುಲಂ ಜಂಕ್ಷನ್ ಹಾಗೂ ಅಜ್ಮೀರ್ ನಡುವೆ ಎರಡು ಸಾಪ್ತಾಹಿಕ ವಿಶೇಷ ಎಸಿ ಸೂಪರ್‌ಫಾಸ್ಟ್ ರೈಲುಗಳು ಕ್ರಮವಾಗಿ ಜ.30 ಮತ್ತು ಜ.31ರವರೆಗೆ ಓಡಾಟ ನಡೆಸಲಿವೆ.

ರೈಲು ನಂ.02475 ಹಿಸ್ಸಾರ್ ಜಂಕ್ಷನ್-ಕೊಯಮತ್ತೂರು ಎಸಿ ಸೂಪರ್‌ಫಾಸ್ಟರ್ ಸಾಪ್ತಾಹಿಕ ರೈಲು ಜ.27ರವರೆಗೆ ಪ್ರತಿ ಬುಧವಾರ ಅಪರಾಹ್ನ 12:50ಕ್ಕೆ ಹಿಸ್ಸಾರ್ ಜಂಕ್ಷನ್‌ನಿಂದ ಹೊರಡಲಿದ್ದು, ಮೂರನೇ ದಿನ ಅಪರಾಹ್ನ 2:40ಕ್ಕೆ ಕೊಯಮತ್ತೂರನ್ನು ತಲುಪಲಿದೆ. ಅದೇ ರೀತಿ ರೈಲು ನಂ.02476 ಕೊಯಮತ್ತೂರು-ಹಿಸ್ಸಾರ್ ಜಂಕ್ಷನ್ ಎಸಿ ಸೂಪರ್‌ಫಾಸ್ಟ್ ರೈಲು ಡಿ.26ರಿಂದ 2021ರ ಜ.30ರವರೆಗೆ ಪ್ರತಿ ಶನಿವಾರ ಅಪರಾಹ್ನ 3 ಕ್ಕೆ ಕೊಯಮತ್ತೂರಿ ನಿಂದ ಹೊರಡಲಿದ್ದು, ಮೂರನೇ ದಿನ ಸಂಜೆ 4 ಗಂಟೆಗೆ ಹಿಸ್ಸಾರ್ ತಲುಪಲಿದೆ.

ಈ ರೈಲಿಗೆ ಕರ್ನಾಟಕ ಕರಾವಳಿಯ ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌ಗಳಲ್ಲದೇ ಮಡಗಾಂವ್ ಜಂಕ್ಷನ್, ರತ್ನಗಿರಿ, ಕಣ್ಣೂರುಗಳಲ್ಲಿ ನಿಲುಗಡೆ ಇರುತ್ತದೆ. ರೈಲು ಒಟ್ಟು 18 ಕೋಚ್‌ಗಳನ್ನು ಹೊಂದಿರುತ್ತದೆ. ಫಸ್ಟ್ ಎಸಿ- 1ಕೋಚ್, 2ಟಯರ್ ಎಸಿ-4ಕೋಚ್, 3ಟಯರ್‌ಎಸಿ-10 ಕೋಚ್, ಪ್ಯಾಂಟ್ರಿ ಕಾರ್-1, ಜನರೇಟರ್ ಕಾರ್-2 ಹೊಂದಿರಲಿದೆ.

ಅಜ್ಮೀರ್-ಎರ್ನಾಕುಲಂ: ರೈಲು ನಂ.02978 ಅಜ್ಮೀರ್-ಎರ್ನಾಕುಲಂ ಜಂಕ್ಷನ್ ಸೂಪರ್‌ಫಾಸ್ಟ್ ವಿಶೇಷ ಸಾಪ್ತಾಹಿಕ ರೈಲು ಡಿ.25ರಿಂದ 2021ರ ಜ.29ರವರೆಗೆ ಪ್ರತಿ ಶುಕ್ರವಾರ ಬೆಳಗ್ಗೆ 9:00ಕ್ಕೆ ಅಜ್ಮೀರ್‌ನಿಂದ ಹೊರಟು ಮೂರನೇ ದಿನ ಮುಂಜಾನೆ 4:25ಕ್ಕೆ ಎರ್ನಾಕುಲಂ ಜಂಕ್ಷನ್ ಮುಟ್ಟುತ್ತದೆ. ಅದೇ ರೀತಿ ರೈಲು ನಂ.02977 ಎರ್ನಾಕುಲಂ ಜಂಕ್ಷನ್-ಅಜ್ಮೀರ್ ಸೂಪರ್‌ಪಾಸ್ಟ್ ಸಾಪ್ತಾಹಿಕ ರೈಲು ಡಿ.27ರಿಂದ ಜ.31ರವರೆಗೆ ಪ್ರತಿ ರವಿವಾರ ಎರ್ನಾಕುಲಂನಿಂದ ರಾತ್ರಿ 8:25ಕ್ಕೆ ಹೊರಟು ಮೂರನೇ ದಿನ ಸಂಜೆ 4:35ಕ್ಕೆ ಅಜ್ಮೀರ್ ತಲುಪಲಿದೆ.

ಈ ರೈಲಿನ ಕರ್ನಾಟಕದಲ್ಲಿ ಕಾರವಾರ, ಗೋಕರ್ಣ ರೋಡ್, ಭಟ್ಕಳ್, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪು, ಉಡುಪಿ, ಮಂಗಳೂರು ಜಂಕ್ಷನ್ ಅಲ್ಲದೇ ಕಾಸರಗೋಡು, ಕಣ್ಣೂರು, ರತ್ನಗಿರಿ, ತೀವಂ, ಮಡಗಾಂವ್ ಜಂಕ್ಷನ್‌ಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿರುತ್ತದೆ. ಫಸ್ಟ್‌ಕ್ಲಾಸ್-2 ಟಯರ್ ಎಸಿ 1ಕೋಚ್, 2ಟಯರ್ ಎಸಿ-2ಕೋಚ್, 3ಟಯರ್ ಎಸಿ- 6 ಕೋಚ್, ಸ್ಲೀಪರ್-6 ಕೋಚ್, ಸೆಕೆಂಡ್ ಸೀಟಿಂಗ್-4ಕೋಚ್, ಪ್ಯಾಂಟ್ರಿ ಕಾರ್-1, ಜನರೇಟರ್ ಕಾರ್-2ಕೋಚ್‌ಗಳಿರುತ್ತದೆ. ಕೇಂದ್ರ ಸರಕಾ ರದ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ರೈಲು ಓಡಾಟ ನಡೆಸಲಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂರ್ಕ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X