ಅಕ್ರಮ ಮರಳು ಸಾಗಾಟ: ಐದು ಟಿಪ್ಪರ್ಗಳು ವಶ
![ಅಕ್ರಮ ಮರಳು ಸಾಗಾಟ: ಐದು ಟಿಪ್ಪರ್ಗಳು ವಶ ಅಕ್ರಮ ಮರಳು ಸಾಗಾಟ: ಐದು ಟಿಪ್ಪರ್ಗಳು ವಶ](https://www.varthabharati.in/sites/default/files/images/articles/2020/12/30/273250-1609348742.jpg)
ಉಡುಪಿ, ಡಿ.30: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಐದು ಟಿಪ್ಪರ್ಗಳನ್ನು ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಗಳು ಇಂದು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಂಪಳ್ಳಿಯಲ್ಲಿ ಮರಳು ತುಂಬಿದ ಎರಡು ಮಿನಿ ಟಿಪ್ಪರ್ಗಳನ್ನು ಮತ್ತು ಅದರಲ್ಲಿದ್ದ ಒಟ್ಟು ಆರು ಟನ್ ಮರಳನ್ನು ವಶಪಡಿಸಿಕೊಂಡು, ಮುಂದಿನ ಕ್ರಮದವರೆಗೆ ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದೆ.
ಅದೇ ರೀತಿ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂರು ಟಿಪ್ಪರ್ಗಳನ್ನು ವಶಕ್ಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಂಡಿದ್ದಾರೆ. ಇದರಲ್ಲಿದ್ದ ಒಟ್ಟು 30ಟನ್ ಮರಳನ್ನು ವಶಪಡಿಸಿ ಮುಂದಿನ ಕ್ರಮದರೆಗೆ ನಗರ ಠಾಣೆಗೆ ಒಪ್ಪಿಸಲಾಗಿದೆ.
Next Story