‘ಮೇಲ್ತೆನೆ’ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ
![‘ಮೇಲ್ತೆನೆ’ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ ‘ಮೇಲ್ತೆನೆ’ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ](https://www.varthabharati.in/sites/default/files/images/articles/2021/01/1/273482-1609522720.jpg)
ಮನ್ಸೂರ್ ಅಹ್ಮದ್ ಸಾಮಣಿಗೆ, ಅಶೀರುದ್ದೀನ್ ಮಂಜನಾಡಿ
ಮಂಗಳೂರು,ಜ.1: ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆಯ ವಾರ್ಷಿಕ ಸಭೆಯು ಶುಕ್ರವಾರ ಉಳ್ಳಾಲ ಮದನಿ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸಂಘಟನೆಯ ವತಿಯಿಂದ 2021ರಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
2021ನೆ ಸಾಲಿನ ಗೌರವಾಧ್ಯಕ್ಷರಾಗಿ ಆಲಿಕುಂಞಿ ಪಾರೆ, ಅಧ್ಯಕ್ಷರಾಗಿ ಮನ್ಸೂರ್ ಅಹ್ಮದ್ ಸಾಮಣಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಅಶೀರುದ್ದೀನ್ ಮಂಜನಾಡಿ, ಕೋಶಾಧಿಕಾರಿಯಾಗಿ ಬಶೀರ್ ಕಲ್ಕಟ್ಟ, ಸಂಚಾಲಕರಾಗಿ ಮುಹಮ್ಮದ್ ಬಾಷಾ ನಾಟೆಕಲ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಖಲೀಲ್ ಕಲ್ಲಾಪು, ಜೊತೆ ಕಾರ್ಯದರ್ಶಿಯಾಗಿ ರಫೀಕ್ ಕಲ್ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯೀಲ್ ಟಿ., ಹಂಝ ಮಲಾರ್, ಬಶೀರ್ ಅಹ್ಮದ್ ಕಿನ್ಯ, ಆಸಿಫ್ ಬಬ್ಬುಕಟ್ಟೆ, ರಿಯಾಝ್ ಮಂಗಳೂರು, ಮುತ್ತಲಿಫ್ ಕಿನ್ಯ ಆಯ್ಕೆಯಾಗಿದ್ದಾರೆ.
ಮೇಲ್ತೆನೆ ಬ್ಲಾಗ್ನ ಸಂಪಾದಕರಾಗಿ ಬಶೀರ್ ಅಹ್ಮದ್ ಕಿನ್ಯ ಮತ್ತು ಉಪ ಸಂಪಾದಕರಾಗಿ ರಿಯಾಝ್ ಮಂಗಳೂರು ಅವರಿಗೆ ಜವಾಬ್ದಾರಿ ವಹಿಸಲಾಯಿತು.