ಕಾಳೆಕಾಟ್ ಉತ್ಸವಕ್ಕೆ ಕೊರೋನ ಅಡ್ಡಿ

ಮಂಗಳೂರು : ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿಗೆ ಸಮೀಪದ ಕಾಳೆಕಾಟ್ ನಲ್ಲಿ ಜ. 10 ಮತ್ತು 11 ರಂದು ನಡೆಯಲಿರುವ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಯಾರೂ ಬರಬಾರದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನೇಕ ಶತಮಾನಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಮಲಬಾರ್ ನ ಈ ಪ್ರತಿಷ್ಠಿತ ಥೆಯ್ಯಮ್ ನಲ್ಲಿ ಕೊಡಗು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಿಂದ ನೂರಾರು ಮಂದಿ ಭಾಗವಹಿಸುತ್ತಾರೆ. ಮೂರು ದಿನಗಳ ಈ ಸಂಭ್ರಮದಲ್ಲಿ ದೇಶ ವಿದೇಶಗಳ ಜಾನಪದ ಸಂಶೋಧಕರೂ ಪಾಲುಗೊಳ್ಳುತ್ತಾರೆ. ಆದರೆ ಕೋವಿಡ್ ಕಾರಣದಿಂದಾಗಿ ಇಂತಹ ಉತ್ಸವದಲ್ಲಿ ಜನ ಸೇರಲೇ ಬಾರದೆಂದು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಹೀಗಾಗಿ ಈ ಉತ್ಸವ ಸ್ಥಳಕ್ಕೆ ಯಾರೂ ಬರಬಾರದೆಂದು ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.
Next Story





