Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಪಿಎಂಸಿ ಕಾಯ್ದೆಯನ್ನು 14 ವರ್ಷಗಳ...

ಎಪಿಎಂಸಿ ಕಾಯ್ದೆಯನ್ನು 14 ವರ್ಷಗಳ ಹಿಂದೆಯೇ ರದ್ದುಪಡಿಸಿದ್ದ ಬಿಹಾರ: ಅಲ್ಲಿನ ರೈತರಿಗಾದ ಪ್ರಯೋಜನವೇನು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ3 Jan 2021 2:20 PM IST
share
ಎಪಿಎಂಸಿ ಕಾಯ್ದೆಯನ್ನು 14 ವರ್ಷಗಳ ಹಿಂದೆಯೇ ರದ್ದುಪಡಿಸಿದ್ದ ಬಿಹಾರ: ಅಲ್ಲಿನ ರೈತರಿಗಾದ ಪ್ರಯೋಜನವೇನು ಗೊತ್ತೇ?

ಹೊಸದಿಲ್ಲಿ,ಜ.03: ಬಿಹಾರ ರೈತರಿಗೆ ಹದಿನಾಲ್ಕು ವರ್ಷ ಮೊದಲೇ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಆಯ್ಕೆಯ ಸ್ವಾತಂತ್ರ ದೊರಕಿತ್ತು. 2006ರಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿದ್ದರೂ, ಇದರಿಂದ ರೈತರಿಗೆ ಆಗಿರುವ ಪ್ರಯೋಜನ ಶೂನ್ಯ ಎನ್ನುವುದು ಎಪಿಎಂಸಿ ಕಾಯ್ದೆ ಜಾರಿಯಲ್ಲಿದ್ದಾಗ ಮತ್ತು ಆ ಬಳಿಕದ ಬೆಲೆ ಪ್ರವೃತ್ತಿಯನ್ನು ವಿಶ್ಲೇಷಿಸಿದಾಗ ತಿಳಿದುಬರುತ್ತದೆ ಎಂದು timesofindia.com ವರದಿ ಮಾಡಿದೆ. ರಾಜ್ಯದ ಪ್ರಮುಖ ಮೂರು ಬೆಳೆಗಳಾದ ಬತ್ತ, ಗೋಧಿ ಮತ್ತು ಮೆಕ್ಕೆಜೋಳದ ಬೆಲೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ಅಂತರ ಹೆಚ್ಚಿರುವುದು ಅಥವಾ ಅದೇ ಮಟ್ಟದಲ್ಲಿ ಉಳಿದಿರುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ವರದಿ ತಿಳಿಸಿದೆ.

ಬೆಳೆಗಳ ಬೆಲೆ ಕಡಿಮೆ ಇದ್ದ ಕಾರಣದಿಂದಾಗಿ ಕೃಷಿ ಕೂಲಿ ಕಾರ್ಮಿಕರ ವೇತನ ಪಂಜಾಬ್ ಹಾಗೂ ಹರ್ಯಾಣಕ್ಕೆ ಹೋಲಿಸಿದರೆ ತೀರಾ ಕಡಿಮೆ ಇರುವುದು ಕೂಡಾ ಗಮನಾರ್ಹ. ಇದರ ಪರಿಣಾಮವಾಗಿ ಕೂಲಿಗಳು ರಾಜ್ಯದಿಂದ ವಲಸೆ ಹೋಗಿದ್ದಾರೆ. 1998-99ರಿಂದ 2016-07ರವರೆಗಿನ ಕೊಯ್ಲು ಬೆಲೆಯನ್ನು ವಿಶ್ಲೇಷಿಸಿದಾಗ ತಿಳಿದುಬರುವ ಅಂಶವೆಂದರೆ ಮೂರು ವರ್ಷಗಳಲ್ಲಿ ಕೊಯ್ಲು ಸಂದರ್ಭದ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಅಧಿಕ ಇದ್ದರೆ, ಮತ್ತೆ ಮೂರು ವರ್ಷಗಳಲ್ಲಿ ಇದು ಕನಿಷ್ಠ ಬೆಂಬಲಬೆಲೆಯ ಶೇಕಡ 90ರಿಂದ 100ರ ಆಸುಪಾಸಿನಲ್ಲಿತ್ತು. 

ಮೂರು ವರ್ಷ ಶೇಕಡ 90ಕ್ಕಿಂತ ಕಡಿಮೆ ಇತ್ತು. ಇದೇ ಅವಧಿಯಲ್ಲಿ ಪಂಜಾಬ್‍ನಲ್ಲಿ ಮೂರು ವರ್ಷ ಎಂಎಸ್‍ಪಿಗಿಂತ ಅಧಿಕ ಬೆಲೆ ಇದ್ದರೆ, ಉಳಿದ ಆರು ವರ್ಷಗಳಲ್ಲಿ ಕೊಯ್ಲು ಸಂದರ್ಭದ ಬೆಲೆ ಎಂಎಸ್‍ಪಿಯ ಶೇಕಡ 90 ಅಥವಾ ಅದಕ್ಕಿಂತ ಅಧಿಕ ಇತ್ತು. ಹರ್ಯಾಣದಲ್ಲಿ ಐದು ವರ್ಷ ಎಂಎಸ್‍ಪಿಗಿಂತ ಅಧಿಕ ಬೆಲೆ ರೈತರಿಗೆ ಸಿಕ್ಕಿದ್ದರೆ, ಉಳಿದ ನಾಲ್ಕು ವರ್ಷಗಳಲ್ಲಿ ಎಂಎಸ್‍ಪಿಯ ಶೇಕಡ 90ರಷ್ಟು ಬೆಲೆ ಇತ್ತು.

ಕೃಷಿ ಕೊಯ್ಲು ಬೆಲೆ ಎಂದರೆ ಕೃಷಿಕರು ಗ್ರಾಮಮಟ್ಟದಲ್ಲಿ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಗಟು ಬೆಲೆಯಾಗಿದ್ದು, ಕೃಷಿ ಸಚಿವಾಲಯ ಇದನ್ನು ಸಂಗ್ರಹಿಸುತ್ತದೆ.

2007-08ರ ಬಳಿಕ ಅಂದರೆ ಎಪಿಎಂಸಿ ಕಾಯ್ದೆ ರದ್ದುಪಡಿಸಿದ ಬಳಿಕ ಒಂದು ಬಾರಿಯೂ ಬಿಹಾರದಲ್ಲಿ ಈ ಆಹಾರಧಾನ್ಯಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಅಧಿಕವಾಗಿಲ್ಲ. ನಾಲ್ಕು ಹಂಗಾಮುಗಳಲ್ಲಿ ಎಂಎಸ್‍ಪಿ ಅಥವಾ ಎಂಎಸ್‍ಪಿಯ ಶೇಕಡ 90ರಷ್ಟು ಕೊಯ್ಲು ಬೆಲೆ ಇದ್ದರೆ, ಉಳಿದ ಆರು ವರ್ಷಗಳಲ್ಲಿ ಅದಕ್ಕಿಂತಲೂ ಕಡಿಮೆ ಇತ್ತು. ಪಂಜಾಬ್‍ನಲ್ಲಿ ಎರಡು ಬಾರಿ ಕನಿಷ್ಠ ಬೆಂಬಲಬೆಲೆಗಿಂತ ಅಧಿಕ ಮಾರುಕಟ್ಟೆ ಬೆಲೆ ಇದ್ದರೆ, ಒಂದು ಬಾರಿ ಮಾತ್ರ ಎಂಎಸ್‍ಪಿಯ ಶೇಕಡ 90ಕ್ಕಿಂತ ಕಡಿಮೆಯಾಗಿತ್ತು. ಅಂತೆಯೇ ಹರ್ಯಾಣದಲ್ಲಿ ಏಳು ಹಂಗಾಮುಗಳಲ್ಲಿ ರೈತರು ಕನಿಷ್ಠ ಬೆಂಬಲಬೆಲೆಗಿಂತ ಅಧಿಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಉಳಿದ ಎರಡು ಅವಧಿಯಲ್ಲಿ ಮಾತ್ರ ಕೊಯ್ಲು ಅವಧಿಯ ಬೆಲೆ ಕನಿಷ್ಠಬೆಂಬಲಬೆಲೆಯ ಶೇಕಡ 90ರಿಂದ ಶೇಡಕ 100ರ ನಡುವೆ ಇತ್ತು ಎಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X