Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: 155 ಗ್ರಾಪಂಗಳ ಅಧ್ಯಕ್ಷ,...

ಉಡುಪಿ: 155 ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಮಾರ್ಗಸೂಚಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ3 Jan 2021 9:50 PM IST
share

ಉಡುಪಿ, ಜ.3: ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಮಾರ್ಗಸೂಚಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಉಡುಪಿ ಜಿಲ್ಲೆಯ ಒಟ್ಟು ಏಳು ತಾಲೂಕು ಒಟ್ಟು 155 ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ತಲಾ 80 ಮಹಿಳೆ ಯರು ಅಲಂಕರಿಸಲಿದ್ದಾರೆ.

ಜಿಲ್ಲಾಧಿಕಾರಿಗಳು ತಾಲೂಕಿನಲ್ಲಿರುವ ಎಲ್ಲ ಗ್ರಾಪಂಗಳನ್ನು ಗಣನೆಗೆ ತೆಗೆದು ಕೊಂಡು ಆಯೋಗವು ವರ್ಗಾವಾರು ನಿಗದಿಪಡಿಸಿರುವ ಎಲ್ಲ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಲಿದ್ದಾರೆ.

ಕುಂದಾಪುರ ತಾಲೂಕಿನ ಹೊಸಾಡು ಗ್ರಾಪಂ, ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನದಲ್ಲಿ ಚುನಾವಣೆ ನಡೆಯದಿದ್ದರೂ ಈ ಮೀಸಲಾತಿ ಇಲ್ಲಿಗೂ ನಿಗದಿಯಾಗಲಿದೆ. ಮುಂದೆ ಚುನಾವಣೆ ನಡೆದರೆ ಇದೇ ಮೀಸಲಾತಿ ಮುಂದು ವರಿಯಲಿದೆ.

ಉಡುಪಿ ತಾಲೂಕಿನ 16 ಗ್ರಾ.ಪಂ.ಗಳಲ್ಲಿ ಎಂಟು ಗ್ರಾಪಂಗಳಲ್ಲಿ ಅಧ್ಯಕ್ಷರು ಮತ್ತು ಎಂಟು ಉಪಾಧ್ಯಕ್ಷರು ಮಹಿಳೆಯರಾಗಲಿದ್ದಾರೆ. ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ ವರ್ಗದ ನಾಲ್ಕರಲ್ಲಿ ಎರಡು ಮಹಿಳೆಯರು, ಹಿಂದುಳಿದ ವರ್ಗ ಬ ವರ್ಗ ದಲ್ಲಿ ಒಬ್ಬರು ಮಹಿಳೆಯರು, 9 ಸಾಮಾನ್ಯದಲ್ಲಿ ಮೂವರು ಮಹಿಳೆಯರು.

ಕಾಪು ತಾಲೂಕಿನ 16 ಗ್ರಾಪಂಗಳಲ್ಲಿ ಎಂಟು ಅಧ್ಯಕ್ಷ, ಎಂಟು ಉಪಾಧ್ಯಕ್ಷರ ಸ್ಥಾನ ಮಹಿಳೆಯರ ಪಾಲಾಗಲಿದೆ. ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಹಿಂದುಳಿದ ವರ್ಗ ಬ ವರ್ಗ ಮಹಿಳೆ, ನಾಲ್ಕು ಹಿಂದುಳಿದ ವರ್ಗ ಅ ವರ್ಗದಲ್ಲಿ ಎರಡು ಮಹಿಳೆ, ಸಾಮಾನ್ಯ 10ರಲ್ಲಿ ನಾಲ್ಕು ಮಹಿಳೆಯರು.

ಬ್ರಹ್ಮಾವರದ 27ರಲ್ಲಿ 14 ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಮಹಿಳೆಯರ ಏರ ಲಿದ್ದಾರೆ. ಇಲ್ಲಿ ತಲಾ ಒಂದು ಅನುಸೂಚಿತ ಜಾತಿ, ಪಂಗಡಕ್ಕೆ ಮಹಿಳೆಯರು, ಹಿಂದುಳಿದ ವರ್ಗ ಅ ಏಳರಲ್ಲಿ ನಾಲ್ಕು, ಹಿಂದುಳಿದ ವರ್ಗ ಬ ಎರಡರಲ್ಲಿ ಒಂದು, ಸಾಮಾನ್ಯ 16ರಲ್ಲಿ ಏಳು ಮಹಿಳೆ.

ಕುಂದಾಪುರದ 45 ಗ್ರಾಪಂಗಳಲ್ಲಿ 23 ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿರುವರು. ಅನುಸೂಚಿತ ಜಾತಿ ಮೂರು ಸ್ಥಾನಗಳಲ್ಲಿ ಎರಡು ಮಹಿಳೆ, ಅನುಸೂಚಿತ ಪಂಗಡದ ಒಂದು ಮಹಿಳೆ, ಹಿಂ. ವರ್ಗ ಅ 12ರಲ್ಲಿ ಆರು ಮಹಿಳೆ, ಹಿಂ. ವರ್ಗ ಬ ಮೂರರಲ್ಲಿ ಎರಡು ಮಹಿಳೆ, ಸಾಮಾನ್ಯ 26ರಲ್ಲಿ 12 ಮಹಿಳೆ.

ಬೈಂದೂರಿನ 15 ಗ್ರಾಪಂಗಳಲ್ಲಿ 8 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅನುಸೂಚಿತ ಜಾತಿ ಒಂದು ಮಹಿಳೆ, ಅನುಸೂಚಿತ ಪಂಗಡ ಒಂದು ಮಹಿಳೆ, ಹಿಂ.ವರ್ಗ ಬ ವರ್ಗದಲ್ಲಿ ಒಂದು ಮಹಿಳೆ, ಹಿಂ. ವರ್ಗ ಅ ನಾಲ್ಕರಲ್ಲಿ ಎರಡು ಮಹಿಳೆ, ಸಾಮಾನ್ಯದ ಎಂಟರಲ್ಲಿ ಮೂರು ಸ್ಥಾನ ಮಹಿಳೆ.

ಕಾರ್ಕಳದ 27 ಗ್ರಾಪಂಗಳಲ್ಲಿ 14 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ಪಾಲಾಗಲಿದೆ. ಅನುಸೂಚಿತ ಜಾತಿಯ ಮೂರರಲ್ಲಿ ಎರಡು ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಹಿಂ.ವರ್ಗ ಅ 7ರಲ್ಲಿ ನಾಲ್ಕು ಮಹಿಳೆ, ಹಿಂ. ವರ್ಗ ಬ ಎರಡರಲ್ಲಿ ಒಂದು ಮಹಿಳೆ, ಸಾಮಾನ್ಯ 14ರಲ್ಲಿ ಆರು ಮಹಿಳೆ.

ಹೆಬ್ರಿಯ 9 ಗ್ರಾಪಂಗಳಲ್ಲಿ ಐದು ಅಧ್ಯಕ್ಷ ಸ್ಥಾನ, ಐದು ಉಪಾಧ್ಯಕ್ಷ ಸ್ಥಾನ ಮಹಿಳೆಯರ ಪಾಲಾಗಲಿದೆ. ಒಂದು ಅನುಸೂಚಿತ ಪಂಗಡ ಮಹಿಳೆ, ಎರಡು ಹಿಂ. ವರ್ಗ ಅ ಮಹಿಳೆ, ಸಾಮಾನ್ಯ 5ರಲ್ಲಿ ಎರಡು ಮಹಿಳೆಯರು, ಹಿಂ. ವರ್ಗ ಬ ಒಂದು ಸ್ಥಾನ ಪುರುಷರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X