Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಜೈನರಿಗೂ ಮನುವಾದಿಗಳ ಕಾಟ

ಜೈನರಿಗೂ ಮನುವಾದಿಗಳ ಕಾಟ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ4 Jan 2021 12:10 AM IST
share
ಜೈನರಿಗೂ ಮನುವಾದಿಗಳ ಕಾಟ

ಗೌತಮ ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ಬಿಂಬಿಸಲು ಹೊರಟವರೇ ಜೈನ ತೀರ್ಥಂಕರ ಆದಿನಾಥರನ್ನು ಶಿವನ ಅವತಾರ ಎಂದು ಬದಲಿಸಲು ಹೊರಟಿದ್ದಾರೆ. ಇದೇ ಘಾತುಕರು ಭಗವಾನ್ ಬಾಹುಬಲಿಯನ್ನು ವಿಷ್ಣುವಿನ ಅವತಾರ ಎಂದು ಕರೆಯಲಾರಂಭಿಸಿದ್ದಾರೆ. ಇದು ಇಲ್ಲಿಗೆ ಮುಗಿದಿಲ್ಲ. ನೇಮಿನಾಥ ತೀರ್ಥಂಕರರು ಮುಕ್ತಿ ಹೊಂದಿದರೆನ್ನಲಾದ ಗಿರಿನಾರ್ ಕ್ಷೇತ್ರವನ್ನು ಜೈನರಿಂದ ಕಿತ್ತುಕೊಳ್ಳಲು ಹೊರಟಿದ್ದಾರೆ. ಜೈನ ತೀರ್ಥಂಕರರಾದ ನೇಮಿನಾಥರನ್ನು ದತ್ತಾವತಾರ ಎಂದು ಕರೆದು ಹೈಜಾಕ್ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ.


ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದ ಘಟನೆ ನಡೆದು ಎರಡೂವರೆ ದಶಕಗಳೇ ಗತಿಸಿದವು. ನ್ಯಾಯಾಲಯದಲ್ಲಿ ಈ ಪ್ರಕರಣದ ಇತ್ಯರ್ಥ ಹೇಗಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಇಲ್ಲಿಗೆ ಮುಗಿಯುವ ಸೂಚನೆಗಳೂ ಇಲ್ಲ. ಮಥುರಾ ಮತ್ತು ಕಾಶಿ ಎಂಬ ಇನ್ನೆರಡು ಕಡೆ ಹೊಸ ವಿವಾದದ ಮಸಲತ್ತು ನಡೆದಿದೆ. ಹಿಂದೆ ಯಾವುದೋ ಶತಮಾನದಲ್ಲಿ ಚರಿತ್ರೆಯಲ್ಲಿ ನಡೆದು ಹೋದ ತಪ್ಪುಗಳನ್ನು ಈ ಶತಮಾನದಲ್ಲಿ ಸರಿ ಪಡಿಸುವ ಸಮರ್ಥನೆಯೂ ಧ್ವಂಸ ಕಾರ್ಯಾಚರಣೆ ನಂತರ ಕೇಳಿ ಬಂತು.

ಈಗ ಮಾಡಬೇಕಾದ ಕೆಲಸಗಳನ್ನು ಬಿಟ್ಟು ಚರಿತ್ರೆಯ ಪ್ರಮಾದಗಳೆಂದು ಕರೆಯಲಾಗಿರುವ ಕೃತ್ಯಗಳಿಗೆ ಸೇಡು ತೀರಿಸಿಕೊಳ್ಳುತ್ತಾ ಹೋದರೆ ಈ ದೇಶ ತಲುಪುವುದೆಲ್ಲಿಗೆ? ಬರೀ ಮಂದಿರಗಳನ್ನು ಮಾತ್ರ ಧ್ವಂಸಗೊಳಿಸಲಾಗಿದೆಯೇ? ಈ ದೇಶದಲ್ಲಿ ಮೊಗಲರು ಬರುವ ಎಷ್ಟೋ ವರ್ಷಗಳ ಮೊದಲು ಸಾವಿರಾರು ಬೌದ್ಧ ವಿಹಾರಗಳನ್ನು, ಜೈನ ಬಸದಿಗಳನ್ನು ಧ್ವಂಸಗೊಳಿಸಿಲ್ಲವೇ? ಜೈನರ, ಬೌದ್ಧರ ಅನೇಕ ಕ್ಷೇತ್ರಗಳನ್ನು ಬಲತ್ಕಾರದಿಂದ ಕಿತ್ತು ಕೊಂಡಿಲ್ಲವೇ? ಎಷ್ಟೋ ತೀರ್ಥಂಕರರ ಮೂರ್ತಿಗಳನ್ನು ನೆಲದಲ್ಲಿ ಹೂತು ಹಾಕಿಲ್ಲವೇ? ಇವುಗಳನ್ನು ಮಾಡಿದವರು ಯಾರು? ಚರಿತ್ರೆಯ ಈ ತಪ್ಪುಗಳನ್ನು ಸರಿ ಪಡಿಸಲು ಹೊರಟರೆ ತಿರುಪತಿ, ಹೊರನಾಡು, ಸವದತ್ತಿ ಮುಂತಾದ ದೇವಾಲಯಗಳ ಈಗಿನ ಸ್ವರೂಪವೇ ಬದಲಾಗಿಬಿಡುತ್ತದೆ.

ಜೈನ, ಬೌದ್ಧ, ಸಿಖ್, ಲಿಂಗಾಯತ, ಮುಂತಾದ ಅವೈದಿಕ ಧರ್ಮಗಳನ್ನು ಹಿಂದೂ ಧರ್ಮದ ಭಾಗಗಳೆಂದು ಕರೆದು ಅವುಗಳ ಅಸ್ತಿತ್ವವನ್ನೇ ಅಳಿಸಿ ಹಾಕುವ ಸಂಚು ಅತ್ಯಂತ ನಾಜೂಕಾಗಿ ಮತ್ತು ವ್ಯಾಪಕವಾಗಿ ನಡೆದಿದೆ. ಇವುಗಳನ್ನೆಲ್ಲ ನಾಶ ಮಾಡಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಹೇರುವ ಹುನ್ನಾರ ನಡೆದಿದೆ.

ಗೌತಮ ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ಬಿಂಬಿಸಲು ಹೊರಟವರೇ ಜೈನ ತೀರ್ಥಂಕರ ಆದಿನಾಥರನ್ನು ಶಿವನ ಅವತಾರ ಎಂದು ಬದಲಿಸಲು ಹೊರಟಿದ್ದಾರೆ. ಇದೇ ಘಾತುಕರು ಭಗವಾನ್‌ಬಾಹುಬಲಿಯನ್ನು ವಿಷ್ಣುವಿನ ಅವತಾರ ಎಂದು ಕರೆಯಲಾರಂಭಿಸಿದ್ದಾರೆ. ಇದು ಇಲ್ಲಿಗೆ ಮುಗಿದಿಲ್ಲ. ನೇಮಿನಾಥ ತೀರ್ಥಂಕರರು ಮುಕ್ತಿ ಹೊಂದಿದರೆನ್ನಲಾದ ಗಿರಿನಾರ್ ಕ್ಷೇತ್ರವನ್ನು ಜೈನರಿಂದ ಕಿತ್ತುಕೊಳ್ಳಲು ಹೊರಟಿದ್ದಾರೆ. ಜೈನ ತೀರ್ಥಂಕರರಾದ ನೇಮಿನಾಥರನ್ನು ದತ್ತಾವತಾರ ಎಂದು ಕರೆದು ಹೈಜಾಕ್ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ.

ಹೆಸರಾಂತ ಮಾರ್ಕ್ಸ್‌ವಾದಿ ಇತಿಹಾಸಕಾರರಾದ ಧರ್ಮಾನಂದ ಕೊಸಾಂಬಿ, ರಾಹುಲ ಸಾಂಕೃತ್ಯಾಯನರು ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ಅವರು ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಅಧ್ಯಯನ ಮಾಡಿ ಹೊಸ ಬೆಳಕನ್ನು ಚೆಲ್ಲಿರದಿದ್ದರೆ ಇಷ್ಟೊತ್ತಿಗೆ ಬುದ್ಧ್ದನನ್ನು ವಿಷ್ಣುವಿನ ಅವತಾರ ಮಾಡಿ ಧರ್ಮೋದ್ಯಮ ಆರಂಭಿಸುತ್ತಿದ್ದರು.

ಬಾಬಾ ಸಾಹೇಬರು ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ನಂತರ ಇವರು ಬೌದ್ಧ ಧರ್ಮದ ತಂಟೆಗೆ ಹೋಗುವುದು ಕಡಿಮೆಯಾಯಿತು. ಇಲ್ಲಿಯ ವರೆಗೆ ಜೈನರ ಉಸಾಬರಿಗೂ ಹೋಗಿರಲಿಲ್ಲ. ಈಗ ಕೇಂದ್ರದಲ್ಲಿ ರಾಜಕೀಯ ಅಧಿಕಾರ ಭದ್ರವಾದ ನಂತರ ಇಡೀ ಭಾರತವನ್ನು ತಮ್ಮ ಪರಿಕಲ್ಪನೆಯ ಹಿಂದೂ ರಾಷ್ಟ್ರ ಮಾಡುವ ಯೋಜನೆಯ ಭಾಗವಾಗಿ ಜೈನರ ಮೇಲೆ ಆಕ್ರಮಣ ಆರಂಭವಾಗಿದೆ.

ಇತ್ತೀಚೆಗೆ ಕಾರ್ಕಳದಲ್ಲಿ 1545ರಲ್ಲಿ ಪಾಂಡ್ಯನಾಥ ಕಟ್ಟಿಸಿದ ಆನೆಕೆರೆ ಬಸದಿ ಜೈನರದ್ದಲ್ಲ ಅದು ಹನುಮಂತನ ದೇವಾಲಯ ಎಂದು ಕತೆ ಹೆಣೆದು ವಿವಾದ ಎಬ್ಬಿಸಲಾಗಿತ್ತು.

 ಕರ್ನಾಟಕದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಜೊತೆ ಒಮ್ಮೆ ಮಾತಾಡುತ್ತಿದ್ದಾಗ ಜೈನ ಧರ್ಮದ ಬಸದಿಗಳನ್ನು ಹೇಗೆ ಆಕ್ರಮಿಸಿ ತಮ್ಮ ದೇವಾಲಯಗಳನ್ನಾಗಿ ಮಾಡಲಾಯಿತು ಎಂಬ ಬಗ್ಗೆ ಉದಾಹರಣೆಗಳ ಸಹಿತ ಹೇಳಿದ್ದರು. ಈಗ ಅವುಗಳ ಬಗ್ಗೆ ವಿವಾದ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಲ್ಪಸಂಖ್ಯಾತ ಜೈನರು ತಮ್ಮ ಪಾಡಿಗೆ ತಾವಿದ್ದಾರೆ.ಅದನ್ನು ಸಹಿಸಿಕೊಳ್ಳಲು ಆಗದವರು ಯುಟ್ಯೂಬ್‌ಗಳನ್ನು ಬಳಸಿಕೊಂಡು ಬಾಹುಬಲಿ ವಿಷ್ಣುವಿನ ಅವತಾರ, ನೇಮಿನಾಥ ಶಿವನ ಅವತಾರ ಎಂದೆಲ್ಲ ರೈಲು ಬಿಡುತ್ತಿದ್ದಾರೆ. ಈ ಬಗ್ಗೆ ವಿದ್ವಾಂಸ ಪ್ರೊ. ಅಜಿತ್ ಪ್ರಸಾದ್ ಆಕ್ಷೇಪಿಸಿದ ನಂತರ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸುಮ್ಮನೆ ಕತೆ ಕಟ್ಟುತ್ತಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶ ಎಂಬ ಆದಿತ್ಯನಾಥರ ರಾಜ್ಯದ ಭಾಗಪತ್ ಜಿಲ್ಲೆಯ ಬರೌತ್‌ನಲ್ಲಿ ದಿಗಂಬರ ಜೈನ ಸಮಾಜಕ್ಕೆ ಸೇರಿದ ಕಾಲೇಜಿನಲ್ಲಿ ಜೈನ ಧರ್ಮದ ಶ್ರುತಿದೇವಿಯ ಮೂರ್ತಿಯನ್ನು ತೆರವುಗೊಳಿಸುವಂತೆ ಎಬಿವಿಪಿ ಕಾರ್ಯಕರ್ತರು ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ಗಲಾಟೆ ಮಾಡಿದ ಘಟನೆ ವರದಿಯಾಗಿತ್ತು.ಅದೇ ಉತ್ತರ ಪ್ರದೇಶದಲ್ಲಿ ಜೈನರ ಎರಡು ಸಾವಿರ ವರ್ಷದ ಹಿಂದಿನ ಶ್ರುತಿ ದೇವಿಯ ಮೂರ್ತಿಯನ್ನು ಭಗ್ನಗೊಳಿಸಿದ ಬಗ್ಗೆ ಹೆಸರಾಂತ ವಿದ್ವಾಂಸ, ಲೇಖಕ ದೇವದತ್ತ ಪಟ್ಟನಾಯಕ್ ಟ್ವೀಟ್ ಮಾಡಿದ್ದರು.

ಇದ್ಯಾವುದೂ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವೆಂದು ತಳ್ಳಿ ಹಾಕಲಾಗುವುದಿಲ್ಲ. ಇದು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ದುಷ್ಕೃತ್ಯದ ಸಂಚು. ಬಾಬರಿ ಮಸೀದಿಯನ್ನು ಕೆಡವಿದವರು, ಚರ್ಚ್ ಗಳ ಮೇಲೆ ದಾಳಿ ಮಾಡಿ ಏಸು ಪ್ರತಿಮೆಯನ್ನು ಭಗ್ನಗೊಳಿಸುವವರು, ಹೋರಾಡುತ್ತಿರುವ ರೈತರನ್ನು ಖಾಲಿಸ್ತಾನಿಗಳೆಂದು ಅವಹೇಳನ ಮಾಡುವ ಸೈದ್ಧಾಂತಿಕ ಹಿನ್ನೆಲೆ ಹೊಂದಿದವರೇ ಜೈನ ಧರ್ಮವನ್ನು ಆಪೋಶನ ಮಾಡಿಕೊಳ್ಳುವ ಪಿತೂರಿಯ ಭಾಗವಾಗಿ ಇಂತಹ ಗೊಬೆಲ್ಸ್ ಮಾದರಿ ಪ್ರಚಾರ ಮಾಡುತ್ತಾರೆ. ಹೀಗೊಂದು ಕಡೆ ಮಾಡಿ ಅದರ ಬಗ್ಗೆ ಜೈನರ ಪ್ರತಿಕ್ರಿಯೆ ಏನು ಬರುತ್ತದೆ ಎಂದು ನೋಡಿ ಮುಂದಿನ ಕಾರ್ಯಯೋಜನೆಯನ್ನು ರೂಪಿಸುತ್ತಾರೆ.

ಜೈನರು ಬಿಜೆಪಿ ಬೆಂಬಲಿಗರು. ಅಮಿತ್ ಶಾ ಹಾಗೂ ಬಿಜೆಪಿಯವರ ಮೇಲೇಕೆ ದಾಳಿ ನಡೆಯುತ್ತದೆ ಎಂಬ ಮಾತು ಆಗಾಗ ಕೇಳಿ ಬರುತ್ತದೆ. ಆದರೆ ಎಲ್ಲ ಜೈನರೂ ಬಿಜೆಪಿ ಬೆಂಬಲಿಗರಲ್ಲ. ವಿಶೇಷವಾಗಿ ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಾರವಾಡಿ ಜೈನರಲ್ಲಿ ಬಹುತೇಕ ಬಿಜೆಪಿ ಬೆಂಬಲಿಗರು ಇರಬಹುದು. ಆದರೆ ಸ್ಥಳೀಯ ಜೈನರಲ್ಲಿ ರೈತಾಪಿ ಜನರಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುವವರು ಇದ್ದಾರೆ. ಅವರಾರು ಕೋಮುವಾದಿ ರಾಜಕಾರಣದ ಉಸಾಬರಿಗೆ ಹೋಗುವುದಿಲ್ಲ. ಇತರ ರಾಜ್ಯಗಳಿಂದ ಬರುವ ಮಾರವಾಡಿ ಜೈನರಿಗೆ ತಮ್ಮ ವ್ಯಾಪಾರದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರಾಷ್ಟ್ರೀಯವಾದ ಪ್ರತಿಪಾದನೆ ಮಾಡುವ ದೊಡ್ಡ ಪಕ್ಷವೊಂದರ ಅಗತ್ಯವಿರುತ್ತದೆ. ಪ್ರಾದೇಶಿಕ ಅಸ್ಮಿತೆಯ ಮುಲಾಜಿಲ್ಲದೆ ರಾಷ್ಟ್ರೀಯತೆಯ ರಕ್ಷಾ ಕವಚದಲ್ಲಿ ಅವರು ರಕ್ಷಣೆ ಪಡೆಯುತ್ತಾರೆ. ಇನ್ನು ಅಮಿತ್ ಶಾ ಜೈನರಾಗಿರಬಹುದು. ಆದರೆ ಅವರು ಒಂದು ಸಿದ್ಧಾಂತಕ್ಕೆ ಬದ್ದವಾಗಿ ಒಂದು ಪಕ್ಷ ಸೇರಿದವರು. ಸಹಜವಾಗಿ ರಾಜಕೀಯವಾಗಿ ಆ ಸಿದ್ಧಾಂತಕ್ಕೆ ಬದ್ಧರಾಗಿ ನಡೆಯುತ್ತಾರೆ. ಜೈನರೆಲ್ಲ ಒಂದೇ ಪಕ್ಷಕ್ಕೆ ಸೇರಬೇಕೆಂದೇನಿಲ್ಲವಲ್ಲ. ಆದರೂ ತಮ್ಮ ಧಾರ್ಮಿಕ ಅಸ್ಮಿತೆಗೆ ಅಪಾಯ ಬಂದಾಗ ಜೈನರು ಅನಿವಾರ್ಯವಾಗಿ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ.

ಈಗ ಆಚರಣೆಯಲ್ಲಿರುವ ಜೈನ ಧರ್ಮ ಆ ಧರ್ಮದ ನಿಜವಾದ ಆಶಯಗಳಿಗೆ ಪೂರಕವಾಗಿಲ್ಲ. ಇತಿಹಾಸದಲ್ಲಿ ಶೈವರ, ವೈಷ್ಣವರ ಹೊಡೆತಕ್ಕೆ ಸಿಲುಕಿ ಬದುಕಿ ಉಳಿದ ಅತ್ಯಂತ ಅಲ್ಪಸಂಖ್ಯಾತ ವೆನಿಸಿರುವ ಜೈನ ಧರ್ಮೀಯರು ವೈದಿಕಶಾಹಿ ಆಚರಣೆಗಳನ್ನು ರೂಢಿಸಿಕೊಂಡಿದ್ದಾರೆ. ಅನೇಕಾಂತವಾದ ಸಿದ್ಧಾಂತವಾಗಿ ಮಾತ್ರ ಅದು ಉಳಿದಿದೆ. ಜೈನರಲ್ಲಿ ಇಂದಿಗೂ ಶ್ರೇಣೀಕೃತ ಜಾತಿ ಪದ್ಧ್ದತಿ ಇಲ್ಲವೆಂಬುದು ನಿಜ. ಆದರೆ ಪೂಜಾದಿ ವಿಧಿ ವಿಧಾನಗಳ ಸ್ವರೂಪ ವೈದಿಕಶಾಹಿಗಿಂತ ಭಿನ್ನವಾಗಿಲ್ಲ. ವೀರಶೈವರ ಸಹವಾಸದಿಂದ ಲಿಂಗಾಯತರಲ್ಲೂ ಇದು ಪ್ರವೇಶಿಸಿದೆ. ಬಾಬಾ ಸಾಹೇಬರು ದೀಕ್ಷೆ ಪಡೆದ ಇಂದಿನ ಬೌದ್ಧ ಧರ್ಮದ ಬಗೆಗೂ ವಿಮರ್ಶೆಗಳಿವೆ. ಈ ಬಿರುಕುಗಳಲ್ಲೇ ಪುರೋಹಿತಶಾಹಿ ಪ್ರವೇಶಿಸಿ ಆಯಾ ಧರ್ಮದ ನೈಜ ಸ್ವರೂಪಕ್ಕೆ ಚ್ಯುತಿ ತರುತ್ತದೆ. ಪುರೋಹಿತಶಾಹಿ ಅಂದ ತಕ್ಷಣ ಬ್ರಾಹ್ಮಣರೆಂದು ಪರಿಗಣಿಸಬೇಕಾಗಿಲ್ಲ. ಎಲ್ಲ ಧರ್ಮಗಳಲ್ಲೂ ಇದು ಪ್ರವೇಶಿಸಿದೆ.

ಜೈನ ಧರ್ಮೀಯರ ವಿರುದ್ಧ ಈಗ ನಡೆದಿರುವ ಮಸಲತ್ತಿಗೆ ಯಾವುದೇ ಧರ್ಮೀಯರನ್ನು ಹೆಸರಿಸಿ ದೂಷಿಸಬೇಕಾಗಿಲ್ಲ. ಇದಕ್ಕೆಲ್ಲ ಬಹುತ್ವ ಭಾರತವನ್ನು ನುಚ್ಚು ನೂರು ಮಾಡಿ ಹಿಟ್ಲರ್ ಮಾದರಿಯ ಏಕಧರ್ಮೀಯ ಮನುವಾದಿ ಪರಮಾಧಿಕಾರದ ರಾಷ್ಟ್ರ ಕಟ್ಟಲು ಹೊರಟಿದ್ದಾರಲ್ಲ ಅವರ ಸಿದ್ಧಾಂತ ಕಾರಣ. ಈ ಫ್ಯಾಶಿಸ್ಟ್ ಸಿದ್ಧಾಂತ ಮುಸಲ್ಮಾನರು, ಕ್ರೈಸ್ತರು, ದಲಿತರು, ಹಿಂದುಳಿದವರಿಗೆ ಮಾತ್ರವಲ್ಲ ಜೈನರು, ಬೌದ್ಧರು ಬ್ರಾಹ್ಮಣರು, ಲಿಂಗಾಯತರು, ಸಿಖ್ಖರು, ಮರಾಠರೂ ಸೇರಿದಂತೆ ಎಲ್ಲ ಭಾರತೀಯರಿಗೂ ಅಪಾಯಕಾರಿ. ಎಲ್ಲ ಸಮುದಾಯಗಳಜನರನ್ನು ಬಾಧಿಸುತ್ತಿರುವ ನೈಜ ಸಮಸ್ಯೆಗಳಿಂದ ಅವರನ್ನು ವಿಮುಖರನ್ನಾಗಿ ಮಾಡಿ ಕೋಮು ಕಲಹದ ದಳ್ಳುರಿಯಲ್ಲಿ ಅವರನ್ನು ತಳ್ಳುತ್ತದೆ.

ಜೈನ, ಬೌದ್ಧ, ಸಿಖ್, ಲಿಂಗಾಯತ ಇವೆಲ್ಲ ಧರ್ಮಗಳಿಗೆ ಈಗ ಅಪಾಯ ಇರುವುದು ಮನುವಾದಿ ಶಕ್ತಿಗಳಿಂದ. ಸಿಖ್ಖರೇನೋ ಅದನ್ನು ಎದುರಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು. ಬೌದ್ಧ ಧರ್ಮವನ್ನು ಬಾಬಾಸಾಹೇಬರು ಬಚಾವ್ ಮಾಡಿದ್ದಾರೆ. ಆದರೆ ಅಪಾಯಕಾರಿ ಸಿದ್ಧಾಂತ ಹೊಂದಿದ ಶಕ್ತಿಗಳ ಜೊತೆ ಸರಸ ವಿರಸದ ಸಂಬಂಧವಿಟ್ಟುಕೊಂಡಿರುವ ಲಿಂಗಾಯತರು, ಜೈನರು ವೈದಿಕಶಾಹಿಯ ಹುನ್ನಾರ ಎದುರಿಸಿ ತಮ್ಮ ಉಳಿವಿನ ದಾರಿ ಕಂಡುಕೊಳ್ಳಬೇಕಾಗಿದೆ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X