ಜ.6, 7ರಂದು ‘ಆಳ್ವಾಸ್’ನಲ್ಲಿ 'ಸಾಹೇಬ್ರು ಬಂದವೇ' ಅರೆಭಾಷೆ ಕನ್ನಡ ನಾಟಕ
![ಜ.6, 7ರಂದು ‘ಆಳ್ವಾಸ್’ನಲ್ಲಿ ಸಾಹೇಬ್ರು ಬಂದವೇ ಅರೆಭಾಷೆ ಕನ್ನಡ ನಾಟಕ ಜ.6, 7ರಂದು ‘ಆಳ್ವಾಸ್’ನಲ್ಲಿ ಸಾಹೇಬ್ರು ಬಂದವೇ ಅರೆಭಾಷೆ ಕನ್ನಡ ನಾಟಕ](https://www.varthabharati.in/sites/default/files/images/articles/2021/01/5/273928-1609833277.gif)
ಮೂಡುಬಿದಿರೆ, ಜ.5: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅರೆಭಾಷೆ ರಂಗಪಯಣದ ಪ್ರಸ್ತುತಿಯಲ್ಲಿ ಜೀವನ್ ರಾಂ ಸುಳ್ಯ ನಿರ್ದೇಶನದ ‘ಸಾಹೇಬ್ರು ಬಂದವೇ’ ಅರೆಭಾಷೆ ಕನ್ನಡ ನಾಟಕವು ಜ.6 ಹಾಗೂ 7ರಂದು ಸಂಜೆ 6:30ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಆಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಪ್ರೇಕ್ಷಕರು ಮಾಸ್ಕ್ ಧರಿಸಿ ನಾಟಕ ವೀಕ್ಷಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story