ಮ್ಯುಟೇಷನ್ ವಿಲೇವಾರಿ ಸಾಧನೆ; ಉಸ್ತುವಾರಿ ಕಾರ್ಯದರ್ಶಿ ಅಭಿನಂದನೆ
![ಮ್ಯುಟೇಷನ್ ವಿಲೇವಾರಿ ಸಾಧನೆ; ಉಸ್ತುವಾರಿ ಕಾರ್ಯದರ್ಶಿ ಅಭಿನಂದನೆ ಮ್ಯುಟೇಷನ್ ವಿಲೇವಾರಿ ಸಾಧನೆ; ಉಸ್ತುವಾರಿ ಕಾರ್ಯದರ್ಶಿ ಅಭಿನಂದನೆ](https://www.varthabharati.in/sites/default/files/images/articles/2021/01/5/273980-1609858373.jpg)
ಉಡುಪಿ, ಜ.5: ಕಾರ್ಕಳ ತಾಲೂಕು ಭೂಮಿ ಶಾಖೆಯು ಕಳೆದ ಡಿಸೆಂಬರ್ ತಿಂಗಳಲ್ಲಿ ಮ್ಯುಟೇಷನ್ ವಿಲೇವಾರಿಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದ್ದು, ಇತ್ತೀಚೆಗೆ ಕಾರ್ಕಳ ತಾಲೂಕು ಕಛೇರಿಗೆ ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು ಇದಕ್ಕಾಗಿ ತಾಲೂಕಿನ ಭೂಮಿ ಶಾಖೆಯ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಕುಂದಾಪುರ ಸಹಾಯಕ ಕಮಿಷನರ್ ರಾಜು ಹಾಗೂ ಕಾರ್ಕಳ ತಹಶೀಲ್ದಾರ್ ಪುರಂದರ ಮತ್ತಿತರರು ಉಪಸ್ಥಿತರಿದ್ದರು.
Next Story