ಜ.10ರಂದು ಎಸ್ವೈಎಸ್ ಉಡುಪಿ ಜಿಲ್ಲಾ ‘ಕೌಂಟ್-20 ಕ್ಯಾಂಪ್’
ಉಡುಪಿ, ಜ.6: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ವೈಎಸ್ ಉಡುಪಿ ಜಿಲ್ಲಾ ಸಮಿತಿಯ ಕೌಂಟ್-20 ಜಿಲ್ಲಾ ಕ್ಯಾಂಪ್ ಜ.10ರಂದು ಕುಂದಾಪುರ ಮಾವಿನಕಟ್ಟೆ ಮಸೀದಿಯ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಎಸ್ವೈಎಸ್ ಬ್ರಾಂಚ್, ಸೆಂಟರ್ ಹಾಗೂ ಜಿಲ್ಲಾ ಸಮಿತಿಯ ಆಯ್ದ ಪ್ರತಿನಿಧಿಗಳ ಈ ಕ್ಯಾಂಪ್ನ ಧ್ವಜಾರೋಹಣವನ್ನು ಬೆಳಗ್ಗೆ 9ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಚೆರಿಯಬ್ಬ ಮಾವಿನಕಟ್ಟೆ ನೆರವೇರಿಸಲಿರುವರು. ನಂತರ ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಅಧ್ಯಕ್ಷತೆಯಲ್ಲಿ ಮುನ್ನುಡಿ ಸಮಾರಂಭ ನಡೆಯಲಿದೆ.
ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬಳಿಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ರಾಜ್ಯ ಉಪಾಧ್ಯಕ್ಷೆ ಜಿಎಂ.ಮುಹಮ್ಮದ್ ಕಾಮಿಲ್ ಸಖಾಫಿ, ರಾಜ್ಯ ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವಕೆಟ್ ಹಂಝತ್ ಹೆಜಮಾಡಿ, ಕ್ಯಾಂಪ್ ಕ್ಯಾಪ್ಟನ್ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿರುವರು.
ಸಂಜೆ ಗಂಟೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಹಾಜಿ ಕೆ.ಮೊಯ್ದಿನ್ ಗುಡ್ವಿಲ್ ವಹಿಸಲಿದ್ದು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮತ್ತು ಆಶೀರ್ವಚನ ನೀಡಲಿರುವರು.
ಕಾಪು ಉಸ್ತಾದ್ ಅಹ್ಮದ್ ಖಾಸಿಮಿ, ಜಿಲ್ಲಾ ಸಹಾಯಕ ಖಾಝಿ ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು, ಜಿಲ್ಲಾ ಉಲಮಾ ಸಂಘಟನೆಯ ಅಧ್ಯಕ್ಷ ಅಶ್ರಫ್ ಸಖಾಫಿ ಕನ್ನಂಗಾರ್, ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಎಸ್.ಎಫ್.ರಫೀಕ್ ಗಂಗೊಳ್ಳಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು, ಎಸ್ಜೆಎಮ್ ಅಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ, ಎಸ್ಎಂಎ ಅಧ್ಯಕ್ಷ ಮನ್ಸೂರ್ ಕೋಡಿ, ಎಸ್ಡಿಐ ಅಧ್ಯಕ್ಷ ಸಯ್ಯದ್ ಫರೀದ್ ಉಡುಪಿ ಭಾಗವಹಿಸಲಿರುವರು.
ಜ.9ರಂದು ಸಂಜೆ ಕುಂದಾಪುರ ಅಸ್ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ (ಖ.ಸಿ)ರವರ ಮಖಾಂ ಝಿಯಾರತ್ ನಡೆಯಲಿದೆ ಎಂದು ಕ್ಯಾಂಪ್ ಉಸ್ತುವಾರಿ ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







