ತಂಡದಿಂದ ಮನೆಗೆ ನುಗ್ಗಿ ದಾಂಧಲೆ: ದೂರು
ಗಂಗೊಳ್ಳಿ, ಜ.7: ಮನೆಗೆ ನುಗ್ಗಿದ ತಂಡವೊಂದು ದಾಂಧಲೆ ನಡೆಸಿ ಸಾವಿರಾರು ರೂ. ವೌಲ್ಯದ ಸೊತ್ತುಗಳಿಗೆ ಹಾನಿ ಉಂಟು ಮಾಡಿರುವ ಘಟನೆ ಜ.6ರಂದು ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ವರ್ಷ ಪೈ ಎಂಬವರ ಮನೆಗೆ ಸಂಬಂಧಿಕ ರಿತೇಶ್ ಪೈ ಹಾಗೂ ಅವರ ಸ್ನೇಹಿತ ಪ್ರದೀಪ ಖಾರ್ವಿ ಊಟಕ್ಕೆ ಬಂದಿದ್ದು, ಈ ವೇಳೆ ಉದಯ ಪೂಜಾರಿ, ಅಭಿಜಿತ್ ಅವಭೃತ, ಶ್ರೀಕಾಂತ ದೇವಾಡಿಗ ಎಂಬವರು ಮನೆಗೆ ನುಗ್ಗಿ, ಪ್ರದೀಪ್ ಖಾರ್ವಿ ಹಾಗೂ ರಿತೇಶ್ ಪೈ ಹಲ್ಲೆ ನಡೆಸಿದರು. ಇದನ್ನು ತಪ್ಪಿಸಲು ಹೋದ ವರ್ಷ ಪೈ ಅವರನ್ನು ದೂಡಿ ಹಾಕಿದರೆನ್ನಲಾಗಿದೆ.
ನಂತರ ಹೊರಗೆ ಬಂದ ಪ್ರದೀಪ್ಗೆ ಬಾಟಲಿಯಿಂದ ಹಲ್ಲೆ ನಡೆಸ ಲಾಯಿತು. ಮನೆಯಲ್ಲಿದ್ದ ಮೊಬೈಲ್ನ್ನು ಒಡೆದು ಹಾಕಿದ ಆರೋಪಿಗಳು, ಟಿವಿ, ಕುರ್ಚಿ, ಬಾಗಿಲು ಒಡೆದು ಜಖಂಗೊಳಿಸಿದ್ದಾರೆ. ಗಲಾಟೆ ತಪ್ಪಿಸಲು ಬಂದ ವಿನಯ ಹಾಗೂ ಸುಬ್ರಹ್ಮಣ್ಯರಿಗೂ ಹೊಡೆದಿದ್ದಾರೆ. ಗಾಯಗೊಂಡ ಪ್ರದೀಪ್ ಖಾರ್ವಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಇದರಿಂದ 80,000ರೂ. ಸೊತ್ತುಗಳಿಗೆ ಹಾನಿ ಉಂಟಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.