Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನೀವೀಗ ಮನೆಗೆ ಹೋಗಬೇಕು: ಟ್ರಂಪ್

ನೀವೀಗ ಮನೆಗೆ ಹೋಗಬೇಕು: ಟ್ರಂಪ್

ವಾರ್ತಾಭಾರತಿವಾರ್ತಾಭಾರತಿ7 Jan 2021 10:41 PM IST
share
ನೀವೀಗ ಮನೆಗೆ ಹೋಗಬೇಕು: ಟ್ರಂಪ್

ವಾಶಿಂಗ್ಟನ್, ಜ. 7: ಅಮೆರಿಕದ ಸಂಸತ್ ಕಟ್ಟಡದಲ್ಲಿ ತನ್ನ ಬೆಂಬಲಿಗರು ನಡೆಸುತ್ತಿದ್ದ ದಾಂಧಲೆ ಮತ್ತು ದೊಂಬಿಯನ್ನು ಶ್ವೇತಭವನದ ತನ್ನ ಓವಲ್ ಕಚೇರಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಕ್ಷಿಸುತ್ತಿದ್ದರು. ಸಂಸತ್ ಕಟ್ಟಡದಲ್ಲಿ ಜನರ ಓಡಾಟವನ್ನು ನಿಷೇಧಿಸಿದ ಒಂದು ಗಂಟೆಯ ಬಳಿಕ, ‘‘ಪ್ರತಿಭಟನಕಾರರು ಶಾಂತಿಯುತವಾಗಿ ವರ್ತಿಸಬೇಕು’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದರು.

ಅಧ್ಯಕ್ಷರು ದೊಂಬಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಟೀಕೆ ಹರಡುತ್ತಿದ್ದಂತೆಯೇ, ಹೌಸ್ ರಿಪಬ್ಲಿಕನ್ ನಾಯಕ ಹಾಗೂ ಟ್ರಂಪ್ ಬೆಂಬಲಿಗ ಕೆವಿನ್ ಮೆಕಾರ್ಥಿ ಮತ್ತು ಶ್ವೇತಭವನದಲ್ಲಿರುವ ಟ್ರಂಪ್ ಸಲಹೆಗಾರರು, ದೊಂಬಿನಿರತರನ್ನು ಸಮಾಧಾನಪಡಿಸಲು ಟ್ರಂಪ್ ಇನ್ನೂ ಹೆಚ್ಚು ಮಾತಾಡಬೇಕು ಎಂದು ಹೇಳಿದರು.

ಟೆಲಿವಿಶನ್ ನೇರಪ್ರಸಾರದಲ್ಲಿ ಮಾತನಾಡಿದ ನಿಯೋಜಿತ ಅಧ್ಯಕ್ಷ ಜೋ ಬೈಡನ್, ‘‘ಇದು ಪ್ರತಿಭಟನೆಯಲ್ಲ, ಬಹಿರಂಗ ಬಂಡಾಯ’’ ಎಂದು ಬಣ್ಣಿಸಿದರು. ಈ ಮುತ್ತಿಗೆಯನ್ನು ಕೊನೆಗೊಳಿಸುವಂತೆ ಅವರು ಟ್ರಂಪ್‌ರನ್ನು ಒತ್ತಾಯಿಸಿದರು.

ಬಳಿಕ, ಟ್ರಂಪ್ ಟ್ವಿಟರ್‌ನಲ್ಲಿ ಮುದ್ರಿತ ವೀಡಿಯೊವೊಂದನ್ನು ಹಾಕಿದರು. ‘‘ನಿಮಗೆ ನೋವಾಗಿದೆ ಎನ್ನುವುದು ನನಗೆ ಗೊತ್ತು. ಚುನಾವಣೆಯನ್ನು ನಮ್ಮಿಂದ ಕದಿಯಲಾಗಿದೆ’’ ಎಂಬ ತನ್ನ ಹಳೆಯ ಸುಳ್ಳುಗಳನ್ನೇ ಅವರು ಅಲ್ಲಿ ಮತ್ತೆ ಹೇಳಿದರು. ‘‘ಆದರೆ, ಈಗ ನೀವು ಮನೆಗೆ ಹೋಗಬೇಕು. ನಮಗೆ ಶಾಂತಿ ಬೇಕು. ನಮಗೆ ಕಾನೂನು ಮತ್ತು ವ್ಯವಸ್ಥೆ ಬೇಕು’’ ಎಂದರು.

ಶ್ರೇಷ್ಠ ದೇಶಭಕ್ತರು

ಬಳಿಕ ಟ್ರಂಪ್ ಇನ್ನೊಂದು ಟ್ವೀಟ್ ಮಾಡಿ, ಗಲಭೆಕೋರರನ್ನು ‘ಶ್ರೇಷ್ಠ ದೇಶಭಕ್ತರು’ ಎಂಬುದಾಗಿ ಬಣ್ಣಿಸಿದರು. ‘‘ನಮ್ಮಿಂದ ದುಷ್ಟತನದಿಂದ ಕಸಿದುಕೊಂಡ ಚುನಾವಣಾ ವಿಜಯವೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು’’ ಎಂದೂ ಅವರು ಹೇಳಿದರು.

ಭೂಗತ ಸುರಂಗ ಮಾರ್ಗದಲ್ಲಿ ಆಶ್ರಯ ಪಡೆದ ಸಂಸದರು

ಸಂಸತ್ ಕಟ್ಟಡ ‘ಕ್ಯಾಪಿಟಲ್’ನ ಒಳಗೆ ಮತ್ತು ಹೊರಗೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬಾಗಿಲುಗಳನ್ನು ಮುರಿಯುತ್ತಾ, ಕಿಟಿಕಿ ಗಾಜುಗಳನ್ನು ಒಡೆಯುತ್ತಾ ದಾಂಧಲೆಯಲ್ಲಿ ನಿರತರಾಗಿದ್ದಾಗ, ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಒಳಗಿನ ಕೋಣೆಯೊಂದರಲ್ಲಿ ಆಶ್ರಯ ಪಡೆದರು.

ಆದರೆ, ಅದರ ಬಾಗಿಲುಗಳನ್ನೂ ಪ್ರತಿಭಟನಕಾರರು ಜೋರಾಗಿ ಬಡಿಯುತ್ತಿದ್ದಾಗ, ಆ ಕೋಣೆ ಸುರಕ್ಷಿತವೆಂದು ಸಂಸದರಿಗೆ ಅನಿಸಲಿಲ್ಲ. ಬಳಿಕ ಅವರನ್ನು ಸಂಸತ್ ಭವನದ ಭೂಗತ ಸುರಂಗ ಮಾರ್ಗಕ್ಕೆ ಕರೆದೊಯ್ಯಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X