Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಠಾಕೂರ್‌ ಎಂದು ಬರೆದ ಶೂ ತಯಾರಕರನ್ನು...

"ಠಾಕೂರ್‌ ಎಂದು ಬರೆದ ಶೂ ತಯಾರಕರನ್ನು ಪೊಲೀಸರು ಏನೂ ಮಾಡಲಿಲ್ಲ, ಮಾರಿದ ನನ್ನನ್ನು ಮಾತ್ರ ಜೈಲಿನಲ್ಲಿಟ್ಟರು"

ಅಳಲು ತೋಡಿಕೊಂಡ ಬಡ ಶೂ ಮಾರಾಟಗಾರ

ವಾರ್ತಾಭಾರತಿವಾರ್ತಾಭಾರತಿ8 Jan 2021 5:04 PM IST
share
ಠಾಕೂರ್‌ ಎಂದು ಬರೆದ ಶೂ ತಯಾರಕರನ್ನು ಪೊಲೀಸರು ಏನೂ ಮಾಡಲಿಲ್ಲ, ಮಾರಿದ ನನ್ನನ್ನು ಮಾತ್ರ ಜೈಲಿನಲ್ಲಿಟ್ಟರು

ಲಕ್ನೋ, ಜ.08:  "ಠಾಕೂರ್ʼ‌ ಎಂದು ಹಿಂಬದಿಯಲ್ಲಿ ಬರೆಯಲಾಗಿದ್ದ ಶೂ ಮಾರಾಟ ಮಾಡುತ್ತಿದ್ದ ತಪ್ಪಿಗೆ ಉತ್ತರ ಪ್ರದೇಶದ ಬುಲಂದ್‍ಶಹರ್‍ನ  ಚಪ್ಪಲಿ ವ್ಯಾಪಾರಿ ನಾಸಿರ್ ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆಯುವಂತಾಯಿತಲ್ಲದೆ ಸಾರ್ವಜನಿಕವಾಗಿ ಸಾಕಷ್ಟು ಅವಮಾನವನ್ನೂ ಎದುರಿಸುವಂತಾಯಿತು ಎಂದು thequint.com ವರದಿ ಮಾಡಿದೆ.

"ಈ ಶೂ ಮಾರಾಟದಿಂದ ಇಷ್ಟು ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ತಿಳಿದಿದ್ದರೆ ನಾನು ಅವುಗಳನ್ನು ಮಾರಾಟ ಮಾಡುತ್ತಲೇ ಇರಲಿಲ್ಲ," ಎಂದು ಆತ ಹೇಳುತ್ತಾನೆ.

"ಠಾಕೂರ್ʼ‌ ಮೇಲ್ಜಾತಿಗೆ ಸೇರಿದ ಹಿಂದುಗಳಾಗಿದ್ದು ಬಹಳ ಪ್ರಭಾವಿಗಳು ಎಂದೇ ತಿಳಿಯಲ್ಪಡುತ್ತಾರೆ.  ಠಾಕುರ್ ಎಂದು ಬರೆದಿರುವ ಶೂ ಮಾರಾಟ ಮಾಡಿ ಸಮುದಾಯವೊಂದರ ಭಾವನೆಗೆ ಧಕ್ಕೆ ತಂದಿದ್ದಾನೆಂದು ಆರೋಪಿಸಿ ಆತನ ವಿರುದ್ಧ ಬಜರಂಗದಳ ನಾಯಕನೊಬ್ಬ ದೂರು ನೀಡಿದ್ದ. ದೂರಿನಲ್ಲಿ  ಬರಯಲಾದಂತೆ `ಗಲಭೆ ಪ್ರಚೋದನೆ' ಆರೋಪವನ್ನು ಎಫ್‍ಐಆರ್‍ನಿಂದ ಪೊಲೀಸರು ತೆಗೆದು ಹಾಕಿದ್ದರೂ ಆತನನ್ನು ವಶಪಡಿಸಿಕೊಂಡು ಎರಡು ದಿನ ಕಸ್ಟಡಿಯಲ್ಲಿರಿಸಿದ್ದರು ಎಂದು ವರದಿ ತಿಳಿಸಿದೆ.

"ಗಝಿಯಾಬಾದ್‍ನ ಸಂಜಯ್ ಗೋಯೆಲ್ ಎಂಬ ಪೂರೈಕೆದಾರರೊಬ್ಬರಿಂದ ಈ ಶೂಗಳನ್ನು  ಖರೀದಿಸಿದ್ದೆ. ನಾನು ಕಳೆದ 25-30 ದಿನಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ತನಿಖೆಯ ಭಾಗವಾಗಿ ಪೊಲೀಸರು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ "ಠಾಕೂರ್ʼ‌ ಬ್ರ್ಯಾಂಡ್‍ನ 16 ಜತೆ ಶೂಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಶೂ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ನನ್ನನ್ನು ಎರಡು ದಿನಗಳ ಕಾಲ ಕಸ್ಟಡಿಯಲ್ಲಿರಿಸಿದ್ದರು," ಎಂದು ಆತ ಬೇಸರ ವ್ಯಕ್ತಪಡಿಸುತ್ತಾನೆ.

"ಅವರು ನನ್ನ ಜತೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಆದರೆ ಶೂ ಪೂರೈಕೆದಾರನ ಬಳಿ ತೆರಳಲೆಂದು ಗಾಝಿಯಾಬಾದ್‍ಗೆ ನನ್ನನ್ನು ಕರೆದುಕೊಂಡು ಹೋಗುವ ವೇಳೆ ಒಂದೆರಡು ಬಾರಿ ಕೆನ್ನೆಗೆ ಬಾರಿಸಿದ್ದಾರೆ," ಎಂದು ಆತ ಹೇಳುತ್ತಾನೆ.

ಈ ನಿರ್ದಿಷ್ಟ ಶೂ ಯಾವ ಕಂಪೆನಿ  ತಯಾರಿಸಿದೆ ಎಂದು ತಿಳಿದಿಲ್ಲವಾದರೂ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಾದ "ಠಾಕೂರ್ʼ‌ ಫೂಟ್ವೇರ್ ಕಂಪೆನಿ  ತಯಾರಿಕಾ ಸಂಸ್ಥೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಕಂಪೆನಿಯ ಮಾಲಿಕ ನರೇಂದರ್ ತ್ರಿಲೋಕನಿ ಅವರು ದಿ ಖ್ವಿಂಟ್ ಜತೆ ಮಾತನಾಡುತ್ತಾ "ನಾವು 40 ವರ್ಷ ಹಳೆಯ ಕಂಪೆನಿ. ನಮ್ಮ ಲಾಂಛನ ಟಿಎಫ್‍ಸಿ ಆಗಿದೆ ಹಾಗೂ ನಾವು "ಠಾಕೂರ್ʼ‌ ಎಂದು ಶೂಗಳಲ್ಲಿ ಬರೆಯುವುದಿಲ್ಲ. ಬುಲಂದ್‍ಶಹರ್‍ನ ಮಾರಾಟಗಾರ ಮಾರಾಟ ಮಾಡಿದ್ದ ಶೂ ನಮ್ಮ ಬ್ರ್ಯಾಂಡ್‍ನದ್ದಲ್ಲ," ಎಂದು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X