Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಡಯಲಿಸಿಸ್ ಕುರಿತು ನಿಮಗೆಷ್ಟು ಗೊತ್ತು?

ಡಯಲಿಸಿಸ್ ಕುರಿತು ನಿಮಗೆಷ್ಟು ಗೊತ್ತು?

ವಾರ್ತಾಭಾರತಿವಾರ್ತಾಭಾರತಿ9 Jan 2021 12:19 AM IST
share
ಡಯಲಿಸಿಸ್ ಕುರಿತು ನಿಮಗೆಷ್ಟು ಗೊತ್ತು?

ಡಯಲಿಸಿಸ್ ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಕೆಲವು ವೈದ್ಯಕೀಯ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಡಯಲಿಸಿಸ್ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗುತ್ತದೆ ಎನ್ನುವುದು ನಮಗೆ ಗೊತ್ತು,ಆದರೆ ವಾಸ್ತವದಲ್ಲಿ ಈ ಪ್ರಕ್ರಿಯೆ ಏನು,ಹೇಗೆ ಅದನ್ನು ನಡೆಸಲಾಗುತ್ತದೆ ಮತ್ತು ಸಂಭಾವ್ಯ ಅಪಾಯಗಳೇನು ಇತ್ಯಾದಿ ಅಂಶಗಳ ಬಗ್ಗೆ ಹೆಚ್ಚಿನವರಿಗೆ ಸರಿಯಾದ ಮಾಹಿತಿಗಳಿಲ್ಲ. ಡಯಲಿಸಿಸ್ ಕುರಿತು ಸಂಪೂರ್ಣ ಮಾಹಿತಿಗಳು ಇಲ್ಲಿವೆ....

ಏನಿದು ಡಯಲಿಸಿಸ್?

ಡಯಲಿಸಿಸ್ ಮೂತ್ರಪಿಂಡಗಳು ವಿಫಲಗೊಂಡಾಗ ಅಥವಾ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ಧಾಗ ಯಂತ್ರದ ಮೂಲಕ ಅವುಗಳ ಕಾರ್ಯವನ್ನು ಮಾಡುವ ಚಿಕಿತ್ಸೆಯಾಗಿದೆ. ಮೂತ್ರಪಿಂಡಗಳು ಹೆಚ್ಚುವರಿ ದ್ರವ ಮತ್ತು ತ್ಯಾಜ್ಯವನ್ನು ಮೂತ್ರ ಮತ್ತು ಮಲಗಳ ರೂಪದಲ್ಲಿ ಹೊರಹಾಕುವ ಮೂಲಕ ಶರೀರವನ್ನು ನಂಜುಮುಕ್ತಗೊಳಿಸುವ ಕೆಲಸವನ್ನು ಮಾಡುತ್ತವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಬಹುದು. ಅವು ತ್ಯಾಜ್ಯವನ್ನು ಮೂತ್ರಕೋಶಕ್ಕೆ ರವಾನಿಸುತ್ತವೆ ಮತ್ತು ಅದು ಅಲ್ಲಿಂದ ವಿಸರ್ಜಿಸಲ್ಪಡುತ್ತದೆ. ಮೂತ್ರಪಿಂಡಗಳು ವಿಫಲಗೊಂಡಿದ್ದರೆ ಅಥವಾ ಅವು ಕೇವಲ ಶೇ.15-ಶೇ.20ರಷ್ಟು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ ಡಯಲಿಸಿಸ್‌ಗೆ ವೈದ್ಯರು ಸೂಚಿಸುತ್ತಾರೆ. ರಕ್ತವನ್ನು ಶುದ್ಧೀಕರಿಸುವ ಮತ್ತು ತ್ಯಾಜ್ಯಗಳನ್ನು ಸೋಸುವ ಯಂತ್ರವನ್ನು ಬಳಸಿ ಡಯಲಿಸಿಸ್ ಅನ್ನು ನಡೆಸಲಾಗುತ್ತದೆ. 1940ರ ದಶಕದಿಂದಲೇ ಮೂತ್ರಪಿಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಡಯಲಿಸಿಸ್ ಬಳಕೆಯಾಗುತ್ತಿದೆ. ಅದು ವಿದ್ಯುದ್ವಿಚ್ಛೇದ್ಯಗಳು ಮತ್ತು ದ್ರವಗಳನ್ನು ಸಮತೋಲನಗೊಳಿಸಲು ನೆರವಾಗುವ ಮೂಲಕ ಮೂತ್ರಪಿಂಡಗಳ ಕಾರ್ಯಗಳನ್ನು ನಿರ್ವಹಿಸುತ್ತದೆ.

ಡಯಲಿಸಿಸ್‌ನ ಅಗತ್ಯವೇನು?

ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂತ್ರಪಿಂಡಗಳು ಹೆಚ್ಚುವರಿ ನೀರು ಮತ್ತು ವಿಷವಸ್ತುಗಳನ್ನು ಹೊರಗೆ ಹಾಕುವ ಮೂಲಕ ಅವು ನಮ್ಮ ಶರೀರದಲ್ಲಿ ಶೇಖರಗೊಳ್ಳುವುದನ್ನು ತಡೆಯುತ್ತವೆ. ಅಲ್ಲದೆ ಮೂತ್ರಪಿಂಡಗಳು ಸೋಡಿಯಂ ಮತ್ತು ಪೊಟ್ಯಾಷಿಯಂ ಸೇರಿದಂತೆ ರಾಸಾಯನಿಕಗಳ ಮಟ್ಟಗಳನ್ನು ನಿಯಂತ್ರಿಸುತ್ತವೆ,ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತವೆ ಮತ್ತು ಶರೀರವು ವಿಟಾಮಿನ್‌ಗಳು ಮತ್ತು ಖನಿಜಗಳನ್ನು ತ್ವರಿತವಾಗಿ ಹೀರಿಕೊಳ್ಳಲು ಅವಕಾಶ ಕಲ್ಪಿಸುತ್ತವೆ. ಯಾವುದೇ ಪೆಟ್ಟು,ಗಾಯ ಅಥವಾ ಮೂತ್ರಪಿಂಡ ರೋಗಗಳಿಂದಾಗಿ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಾಗ ಗರಿಷ್ಠ ಮಟ್ಟದಲ್ಲಿ ಅವುಗಳ ಕಾರ್ಯವನ್ನು ಮುಂದುವರಿಸಲು ಡಯಲಿಸಿಸ್ ನೆರವಾಗುತ್ತದೆ. ರೋಗಿಗಳು ನಿಯಮಿತವಾಗಿ ಡಯಲಿಸಿಸ್ ಅನ್ನು ಮಾಡಿಸಿಕೊಳ್ಳದಿದ್ದರೆ ರಕ್ತದಲ್ಲಿ ಉಪ್ಪು ಸಂಗ್ರಹಗೊಳ್ಳಬಹುದು ಮತ್ತು ಇದು ಇತರ ಅಂಗಗಳಿಗೂ ಹಾನಿಯನ್ನುಂಟು ಮಾಡುವ ಮೂಲಕ ಮಾರಣಾಂತಿಕವಾಗಬಹುದು.

ಡಯಲಿಸಿಸ್ ವಿಧಗಳು

 ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳನ್ನು ಅವಲಂಬಿಸಿ ಡಯಲಿಸಿಸ್ ಅನ್ನು ಹೆಮೊಡಯಲಿಸಿಸ್,ಪೆರಿಟೋನಿಯಲ್ ಡಯಲಿಸಿಸ್ ಮತ್ತು ಕಂಟಿನ್ಯೂಯಸ್ ರೇನಲ್ ರಿಪ್ಲೇಸ್‌ಮೆಂಟ್ ಥೆರಪಿ (ಸಿಆರ್‌ಆರ್‌ಟಿ) ಅಥವಾ ಹೆಮೊಫಿಲ್ಟ್ರೇಷನ್ ಎಂಬ ಮೂರು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ.

ಡಯಲಿಸಿಸ್‌ನ ಅಪಾಯಗಳು ಮತ್ತು ಅಡ್ಡಪರಿಣಾಮಗಳು

ಡಯಲಿಸಿಸ್ ಹಲವಾರು ರೀತಿಗಳಲ್ಲಿ ಜೀವರಕ್ಷಕ ಪ್ರಕ್ರಿಯೆಯಾಗಿದೆ ನಿಜ,ಆದರೆ ಅದು ಕೆಲವು ಅನಾನುಕೂಲತೆಗಳನ್ನೂ ಉಂಟು ಮಾಡುತ್ತದೆ.

ಡಯಲಿಸಿಸ್‌ನ ವಿಧಗಳನ್ನು ಅವಲಂಬಿಸಿ ರಕ್ತಹೀನತೆ,ಕಡಿಮೆ ರಕ್ತದೊತ್ತಡ,ತುರಿಕೆ,ಸ್ನಾಯುಸೆಳೆತ,ನಿದ್ರಾಹೀನತೆ,ರಕ್ತದಲ್ಲಿ ಪೊಟ್ಯಾಷಿಯಂ ಮಟ್ಟ ಏರಿಕೆ,ಸೆಪ್ಸಿಸ್,ಅನಿಯಮಿತ ಹೃದಯ ಬಡಿತ,ಪೆರಿಕಾರ್ಡೈಟಿಸ್ ಅಥವಾ ಹೃದಯದ ಉರಿಯೂತ,ರಕ್ತ ಸೋಂಕು,ಹೃದಯ ಸ್ತಂಭನದಿಂದ ಸಾವು,ಹೊಟ್ಟೆಸೋಂಕುಗಳು, ಮಧುಮೇಹ,ಹರ್ನಿಯಾ,ದುರ್ಬಲ ಹೊಟ್ಟೆ ಸ್ನಾಯು, ಕಾರಣವಿಲ್ಲದ ತೂಕ ಇಳಿಕೆ, ಜ್ವರ, ಹೊಟ್ಟೆನೋವು, ರಕ್ತಸ್ರಾವ, ವಿದ್ಯುದ್ವಿಚ್ಛೇದ್ಯ ಅಸಮತೋಲನ,ಅನಫೈಲಾಕ್ಸಿಸ್,ಮೂಳೆಗಳ ದೌರ್ಬಲ್ಯ ಇತ್ಯಾದಿ ಅಪಾಯಗಳು ಎದುರಾಗಬಹುದು. ಇವೆಲ್ಲ ಸಾಮಾನ್ಯ ಅಪಾಯಗಳಾಗಿದ್ದು,ಡಯಲಿಸಿಸ್‌ನ ವಿಧವನ್ನು ಅವಲಂಬಿಸಿ ಇವುಗಳ ಪೈಕಿ ಕೆಲವು ಅಡ್ಡಪರಿಣಾಮಗಳನ್ನು ರೋಗಿಯು ಅನುಭವಿಸಬಹುದು. ರೋಗಿಯ ಪಾಲಿಗೆ ಮಾರಣಾಂತಿಕವಾಗಬಹುದಾದ ಅಮಿಲಾಯ್ಡಾಸಿಸ್‌ನಂತಹ ಇತರ ಕೆಲವು ಅಪಾಯಗಳೂ ಇವೆ. ಡಯಲಿಸಿಸ್ ಖಿನ್ನತೆಗೂ ಕಾರಣವಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X