Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಅಮೃತ ವಾಹಿನಿ: ಸಂಸಾರದಲ್ಲಿನ ಅಪಸ್ವರ

ಅಮೃತ ವಾಹಿನಿ: ಸಂಸಾರದಲ್ಲಿನ ಅಪಸ್ವರ

ಶಶಿಕರ ಪಾತೂರುಶಶಿಕರ ಪಾತೂರು10 Jan 2021 12:10 AM IST
share
ಅಮೃತ ವಾಹಿನಿ: ಸಂಸಾರದಲ್ಲಿನ ಅಪಸ್ವರ

ಒಂದು ಕ್ಷೇತ್ರದ ಜನಪ್ರಿಯ ವ್ಯಕ್ತಿ ಮತ್ತೊಂದು ಕ್ಷೇತ್ರದಲ್ಲಿ ಜನಮನ ಸೆಳೆಯಬೇಕಾಗಿಲ್ಲ ಎನ್ನುವ ಮಾತು ಅಮೃತ ವಾಹಿನಿ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ! ಸಾಹಿತ್ಯ ಕೃಷಿಯಿಂದ ಹೆಸರು ಮಾಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಪ್ರಧಾನ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಅವರು ನೀಡಿರುವ ಅಭಿನಯವೇ ಅಂತಹ ಅಭಿಪ್ರಾಯ ಮೂಡಲು ಕಾರಣ.

ಕನ್ನಡದ ಭಾವಕವಿ ಎನ್ನುವ ಬಿರುದಾಂಕಿತ ಜನಪ್ರಿಯ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿಯವರು ಪ್ರಧಾನ ಪಾತ್ರದಲ್ಲಿದ್ದಾರೆ ಎನ್ನುವ ಕಾರಣದಿಂದಲೇ ಗಮನ ಸೆಳೆದ ಚಿತ್ರ ಅಮೃತ ವಾಹಿನಿ. ಚಿತ್ರದಲ್ಲಿ ಅವರು ಸಾಹಿತಿಯಾಗಿಯೇ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಮತ್ತಷ್ಟು ಕುತೂಹಲವನ್ನು ಮೂಡಿಸಿತ್ತು. ಆದರೆ ಅವರದು ಸಾಹಿತಿಯ ಪಾತ್ರವೇ ಆದರೂ ಅದು ಒಂದು ಸರಾಸರಿ ವ್ಯಕ್ತಿಯ ವೃದ್ಧಾಪ್ಯದಲ್ಲಿ ನಡೆಯುವ ಘಟನೆಗಳನ್ನು ಆಧಾರವಾಗಿಸಿರುವ ಚಿತ್ರವಾಗಿದೆ. ಹಾಗಾಗಿ ಕವಿಯಾಗಿ, ಸಾಹಿತಿಯಾಗಿ ಅವರಿಗೆ ವಿಶೇಷ ಅವಕಾಶವೇನೂ ಇಲ್ಲ ಎನ್ನುವುದು ಸತ್ಯ.

ಚಿತ್ರದಲ್ಲಿ ಎಚ್.ಎಸ್.ವಿ.ಯವರು ‘ಜಿ.ಕೆ.’ ಎಂದು ಕರೆಸಲ್ಪಡುವ ಸಾಹಿತಿ ಗೋಪಾಲ ಕೃಷ್ಣ ಎನ್ನುವ ಪಾತ್ರವನ್ನು ನಿಭಾಯಿಸಿದ್ದಾರೆ. ಜಿ.ಕೆ.ಗೆ ಇಳಿ ವಯಸ್ಸು. ತನಗಿರುವ ಒಬ್ಬನೇ ಒಬ್ಬ ಮಗ ಹೇಳದೆ ಕೇಳದೆ ಪ್ರೇಮ ವಿವಾಹವಾಗಿದ್ದಕ್ಕಾಗಿ ಆತನನ್ನು ಜಿ.ಕೆ. ತನ್ನ ಮನೆಯಿಂದ ಹೊರಗೆ ಹಾಕಿರುತ್ತಾರೆ. ಮಗನ ಕೊರಗಿನಲ್ಲಿ ಜಿ.ಕೆ.ಯ ಪತ್ನಿಯೂ ಅಸುನೀಗಿರುತ್ತಾಳೆ. ವರ್ಷಗಳು ಉರುಳಿದ ಬಳಿಕ ಏಕಾಂಗಿ ಜಿ.ಕೆ.ಗೆ ಕೆಮ್ಮಿನ ಕಾಯಿಲೆಯೂ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಜಿ.ಕೆ. ಮಗನ ಮನೆ ಹುಡುಕಿಕೊಂಡು ಹೋಗುತ್ತಾರೆ. ಆಗ ಅಲ್ಲಿ ಮಗ, ಆತನ ಪತ್ನಿ ಮತ್ತು ಮಗು ನೀಡುವ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಚಿತ್ರದ ಪ್ರಮುಖ ಎಳೆ.

ಅದರ ಜೊತೆಯಲ್ಲಿ ಜಿ.ಕೆ.ಯ ಸ್ನೇಹಿತರಲ್ಲೊಬ್ಬನಾದ ವೆಂಕೋಬರಾವ್ ಎನ್ನುವ ಹಿರಿಯ, ತನ್ನ ಏಕಾಂಗಿತನ ನೀಗಲು ಮತ್ತೊಂದು ಮದುವೆ ಬಗ್ಗೆ ಯೋಜನೆ ಹಾಕುತ್ತಾನೆ. ಅದಕ್ಕೆ ಆತನ ಮಕ್ಕಳಿಂದ ಸಿಗುವ ಪ್ರತಿಕ್ರಿಯೆ, ಅದೇ ರೀತಿ ಇನ್ನೊಂದು ಯುವ ಜೋಡಿಯ ದಾಂಪತ್ಯದಲ್ಲಿ ನಡೆಯುವ ತಳಮಳಗಳು ಎಲ್ಲವನ್ನೂ ತೋರಿಸಲಾಗಿದೆ. ಒಟ್ಟಿನಲ್ಲಿ ಪೂರ್ತಿ ಚಿತ್ರದಲ್ಲಿ ತಲೆಮಾರುಗಳ ನಡುವಿನ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯನ್ನು ಮನವರಿಕೆ ಮಾಡುವ ಪ್ರಯತ್ನ ನಡೆಸಲಾಗಿದೆ. ಚಿತ್ರದ ಕೊನೆಯಲ್ಲಿ ಒಂದು ಪುಸ್ತಕ ಬಿಡುಗಡೆಯ ದೃಶ್ಯದ ಮೂಲಕ ಸಾಹಿತಿಯ ಪಾತ್ರಕ್ಕೆ ಒಂದು ಸಮರ್ಥನೆ ನೀಡಲಾಗಿದೆ. ಜೊತೆಗೆ ಸಂಸಾರದ ಸಮಸ್ಯೆಗಳಿಗೆ ಒಂದು ಮಾಯೆಯಂತಹ ಪರಿಹಾರವನ್ನೂ ನೀಡಲಾಗಿದೆ! ಅದೇನು ಎನ್ನುವುದನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬಹುದು.

ಆರಂಭದಲ್ಲೇ ಹೇಳಿದಂತೆ ಎಚ್.ಎಸ್. ವೆಂಕಟೇಶ ಮೂರ್ತಿಯವರು ಕವಿಯಾಗಿ, ಉಪನ್ಯಾಸಕರಾಗಿ ಜನ ಮೆಚ್ಚುಗೆ ಪಡೆದವರು. ಆದರೆ ನಟನಾಗಿ ಅವರ ಅಭಿನಯದ ರೀತಿ ಮಕ್ಕಳಾಟದಂತೆ ಗೋಚರಿಸಿದೆ. ಒಂದು ಕೆಮ್ಮು ಕೂಡ ಅವರಿಂದ ಸಹಜವಾಗಿ ಹೊರಬಂದಿಲ್ಲ ಎಂದ ಮೇಲೆ, ನಟನೆಯ ಬಗ್ಗೆ ಇನ್ನು ಕೆಮ್ಮುವಂತಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶನದ ಬಗ್ಗೆ ಹೇಳಲೇಬೇಕು. ಬಹುಶಃ ನಿರ್ದೇಶಕರಾದರೂ ನೈಜ ನಟನೆಗೆ ಮಾರ್ಗದರ್ಶನ ನೀಡಿದ್ದರೆ ಪೂರ್ತಿ ಚಿತ್ರ ಈ ರೀತಿ ನಾಟಕೀಯವೆನಿಸುತ್ತಿರಲಿಲ್ಲ.

ಜಿ.ಕೆ.ಯ ಪುತ್ರ ವೇಣುವಿನ ಪಾತ್ರವನ್ನು ನಟ ಸಂತೋಷ್ ಎಸ್. ಕರ್ಕಿ ಆಕರ್ಷಕವಾಗಿ ನಿಭಾಯಿಸಿದ್ದಾರೆ. ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಸುಪ್ರಿಯಾ ಚಿತ್ರದಲ್ಲಿ ಅಮೂಲ್ಯ ಎನ್ನುವ ಗಯ್ಯಿಳಿ ಸೊಸೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂಕಿತ ಎನ್ನುವ ಮಗುವಿನ ಪಾತ್ರದಲ್ಲಿ ಬೇಬಿ ಋತ್ವಿ ನಟನೆ ಗಮನ ಸೆಳೆಯುವಂತಿದೆ. ಜಿ.ಕೆ.ಯ ಪತ್ನಿಯಾಗಿ ನಟಿ, ನಿರೂಪಕಿ ಡಾ.ವತ್ಸಲಾ ಮೋಹನ್ ಹಾಡೊಂದರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಕತೆಯೊಳಗೆ ಹಾಡುಗಳು ಧುತ್ತನೆ ಪ್ರತ್ಯಕ್ಷವಾಗುವುದಾದರೂ ಉಪಾಸನಾ ಮೋಹನ್ ಸಂಗೀತದಿಂದಾಗಿ ಸಹ್ಯವೆನಿಸುತ್ತದೆ.

ತಾರಾಗಣ: ಎಚ್. ಎಸ್. ವೆಂಕಟೇಶ ಮೂರ್ತಿ, ಸುಪ್ರಿಯಾ
ನಿರ್ದೇಶನ: ಕೆ. ನರೇಂದ್ರ ಬಾಬು
ನಿರ್ಮಾಣ: ಕೆ. ಸಂಪತ್ ಕುಮಾರ್, ಅಕ್ಷಯ್ ರಾವ್
 

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X