Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎ.1ರಿಂದ ಕೇಂದ್ರ ಸರಕಾರದ ನೂತನ ಮಸೂದೆ...

ಎ.1ರಿಂದ ಕೇಂದ್ರ ಸರಕಾರದ ನೂತನ ಮಸೂದೆ ಜಾರಿ: ಕೆಲಸದ ಅವಧಿ 12 ಗಂಟೆಗೆ ಏರಿಕೆ, ಸಂಬಳದಲ್ಲಿ ಕಡಿತ

2019ರಲ್ಲಿ ಅನುಮೋದನೆಗೊಂಡಿದ್ದ ವೇತನ ಸಂಹಿತೆ ಮಸೂದೆ

ವಾರ್ತಾಭಾರತಿವಾರ್ತಾಭಾರತಿ12 Jan 2021 11:50 AM IST
share
ಎ.1ರಿಂದ ಕೇಂದ್ರ ಸರಕಾರದ ನೂತನ ಮಸೂದೆ ಜಾರಿ: ಕೆಲಸದ ಅವಧಿ 12 ಗಂಟೆಗೆ ಏರಿಕೆ, ಸಂಬಳದಲ್ಲಿ ಕಡಿತ

ಹೊಸದಿಲ್ಲಿ,ಜ.12:  ಎಪ್ರಿಲ್ 1, 2021ರಿಂದ  ದೇಶದ ಉದ್ಯೋಗಿಗಳ ಕೆಲಸದ  ಅವಧಿ, ಗ್ರಾಚುವಿಟಿ, ಪ್ರಾವಿಡೆಂಟ್ ಫಂಡ್ ಇವುಗಳಲ್ಲಿ ಮಹತ್ತರ ಬದಲಾವಣೆಗಳಾಗಬಹುದು. ಕಂಪೆನಿಗಳ ಬ್ಯಾಲೆನ್ಸ್ ಶೀಟ್‍ಗಳನ್ನೂ ಇದು ಬಾಧಿಸಬಹುದು. ಕಳೆದ ವರ್ಷ ಸಂಸತ್ತಿನಲ್ಲಿ ಅನುಮೋದನೆ ಪಡೆದ ಮೂರು ವೇಜಸ್ ಕೋಡ್ ಬಿಲ್ (ವೇತನ ಸಂಹಿತೆ ಮಸೂದೆ) ಇದಕ್ಕೆ ಕಾರಣ. ಈ ಮಸೂದೆಗಳು ಈ ವರ್ಷದ ಎಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಮೂಲಗಳಿಂದ ವರದಿಯಾಗಿದೆ.

ಈ ಮಸೂದೆಯಂತೆ ಒಟ್ಟು ವೇತನದ ಶೇ 50ರಷ್ಟು ಭತ್ಯೆಗಳಿರಬೇಕಿದೆ. ಇದರರ್ಥ ಮೂಲ ವೇತನ (ಸರಕಾರಿ ನೌಕರಿಯಲ್ಲಿ ಮೂಲ ವೇತನ ಮತ್ತು ತುಟ್ಟಿ ಭತ್ಯೆ)  ಒಟ್ಟು ವೇತನದ ಶೇ 50ರಷ್ಟು ಅಥವಾ ಅದಕ್ಕಿಂತ ಹೆಚ್ಚು ಆಗಿರಬೇಕಿದೆ.

ಸಾಮಾನ್ಯವಾಗಿ ವೇತನದಲ್ಲಿ  ಭತ್ಯೆ ಒಟ್ಟು ವೇತನದ ಶೇ 50ಕ್ಕಿಂತ ಕಡಿಮೆಯಾಗಿರುವುದರಿಂದ ಹೊಸ ಕಾನೂನು ಜಾರಿಗೆ ಬರುತ್ತಲೇ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ. ಅದೇ ಸಮಯ ಒಟ್ಟು ವೇತನದಲ್ಲಿ ಭತ್ಯೆಗಳು ಹೆಚ್ಚಾಗಲಿವೆ. ಮೂಲ ವೇತನ ಹೆಚ್ಚಳದಿಂದಾಗಿ ಪಿಎಫ್ ಕೂಡ ಹೆಚ್ಚಾಗಲಿರುವುದರಿಂದ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ.

ಅದೇ ಸಮಯ ಗ್ರಾಚುವಿಟಿ ಹಾಗೂ ಪಿಎಫ್‍ಗೆ ಕೊಡುಗೆ ಹೆಚ್ಚಾದಾಗ ನಿವೃತ್ತಿ ನಂತರ ದೊರೆಯುವ ಮೊತ್ತ ಹೆಚ್ಚಾಗಲಿದೆ. ಹೆಚ್ಚು ವೇತನ ಪಡೆಯುವವರು ಈ ಹೊಸ ನಿಯಮದಿಂದ ಹೆಚ್ಚು ಬಾಧಿತರಾಗಲಿದ್ದಾರೆ ಹಾಗೂ   ಹೆಚ್ಚು ಹಣ ಪಿಎಫ್ ಹಾಗೂ ಗ್ರಾಚುವಿಟಿಗೆ ಹೋಗಲಿರುವುದರಿಂದ ಮತ್ತು ಕಂಪೆನಿಗಳೂ ತಮ್ಮ ಪಾಲಿನ ಪಿಎಫ್ ನೀಡಬೇಕಿರುವುದರಿಂದ ಅವುಗಳ ಮೇಲಿನ ಹೊರೆಯೂ ಅಧಿಕವಾಗಲಿದೆ.

ಅಷ್ಟೇ ಅಲ್ಲದೆ ಗರಿಷ್ಠ ಕೆಲಸದ ಗಂಟೆಗಳು ಕೂಡ 12 ಗಂಟೆಗಳಿಗೆ ಏರಿಕೆಯಾಗಲಿದೆ. ಇದರನ್ವಯ 15ರಿಂದ 30 ನಿಮಿಷ ಹೆಚ್ಚುವರಿ ಕೆಲಸ ಮಾಡುವುದು ಓವರ್ ಟೈಮ್ ಎಂದು ಪರಿಗಣಿಸಲಾಗುವುದು ಹಾಗೂ ಹೆಚ್ಚುವರಿ ಕೆಲಸ  30 ನಿಮಿಷಕ್ಕಿಂತ ಕಡಿಮೆ ಆಗಿದ್ದರೆ ಓವರ್ ಟೈಮ್ ಎಂದು ಪರಿಗಣಿತವಾಗುವುದಿಲ್ಲ.  ಮೇಲಾಗಿ ಉದ್ಯೋಗಿಗಳು ಸತತ 5 ಗಂಟೆ ಮೇಲ್ಪಟ್ಟು ಕೆಲಸ ಮಾಡುವುದನ್ನೂ ಅದು ನಿಷೇಧಿಸುತ್ತದೆ. ಐದು ಗಂಟೆಗಳಿಗೊಮ್ಮೆ ಉದ್ಯೋಗಿಗಳಿಗೆ ವಿರಾಮ ನೀಡಬೇಕೆಂದು ನಿಯಮ ಸೂಚಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X