ಬಸ್ ನಿರ್ವಾಹಕನಿಗೆ ಹಲ್ಲೆ : ದೂರು
ಕಾರ್ಕಳ : ಬಸ್ಸಿನಲ್ಲಿ ಪ್ರಯಾಣಿಸುವ ಹುಡುಗಿಯರೊಂದಿಗೆ ಅಸಭ್ಯ ವಾಗಿ ವರ್ತಿಸುವುದಾಗಿ ಆರೋಪಿಸಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ಜ.15ರಂದು ಬೆಳಗ್ಗೆ ಕಲ್ಯಾ ಗ್ರಾಮದ ಕುಂಟಾಡಿ ಅಶೋಕ ನಗರ ಎಂಬಲ್ಲಿ ನಡೆದಿದೆ.
ಉಡುಪಿಯಿಂದ ಮೂಡುಬೆಳ್ಳೆ- ಪಳ್ಳಿ- ಕಲ್ಯಾ ಮಾರ್ಗವಾಗಿ ಹೋಗುತ್ತಿದ್ದ ‘ಕೃಷ್ಣ ಪ್ರಸಾದ್’ ಬಸ್ನ್ನು ತಡೆದ ಅಶೋಕ್ ಹಾಗೂ ಮಾವಿನಕಟ್ಟೆ ಸಂತೋಷ್ ಮತ್ತು ಇತರ ಇಬ್ಬರು ತಡೆದು, ನಿರ್ವಾಹಕ ಕೋಟ ವಡ್ಡರ್ಸೆ ಎಂಜಿ ಕಾಲೋನಿ ನಿವಾಸಿ ಶಮೀರ್ ಪರಾಶ್ (20) ಎಂಬವರನ್ನು ಹೊರಕ್ಕೆ ಎಳೆದು ಬಸ್ಸಿನಲ್ಲಿ ಪ್ರಯಾಣಿಸುವ ಹುಡುಗಿರೊಂದಿಗೆ ಅಸಭ್ಯವಾಗಿ ಮಾತನಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story