Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಿಪಬ್ಲಿಕ್‌ ಟಿವಿಯ ಬಹುಕೋಟಿ ಹಗರಣವನ್ನು...

ರಿಪಬ್ಲಿಕ್‌ ಟಿವಿಯ ಬಹುಕೋಟಿ ಹಗರಣವನ್ನು ರಾಜ್ಯವರ್ಧನ್‌ ರಾಥೋಡ್‌ ಮುಚ್ಚಿ ಹಾಕಿದರೇ?

ಹಲವಾರು ಸಂಶಯಗಳನ್ನು ಹುಟ್ಟುಹಾಕುತ್ತಿರುವ ಅರ್ನಬ್‌ ವಾಟ್ಸ್ಯಾಪ್‌ ಚಾಟ್‌

ವಾರ್ತಾಭಾರತಿವಾರ್ತಾಭಾರತಿ16 Jan 2021 10:53 PM IST
share
ರಿಪಬ್ಲಿಕ್‌ ಟಿವಿಯ ಬಹುಕೋಟಿ ಹಗರಣವನ್ನು ರಾಜ್ಯವರ್ಧನ್‌ ರಾಥೋಡ್‌  ಮುಚ್ಚಿ ಹಾಕಿದರೇ?

ಹೊಸದಿಲ್ಲಿ,ಜ.16: ಅರ್ನಬ್‌ ಗೋಸ್ವಾಮಿ ಹಾಗೂ BARC ಸಿಇಒ ಪಾರ್ಥೋ ದಾಸಗುಪ್ತ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಯಾಪ್‌ ಚಾಟ್‌ ಸದ್ಯ ಹಲವಾರು ಸಂಶಯಗಳನ್ನು ಹುಟ್ಟು ಹಾಕುತ್ತಿದೆ. ಇದೀಗ ಅರ್ನಬ್‌ ಒಡೆತನದ ರಿಪಬ್ಲಿಕ್‌ ಟಿವಿಯು ತನ್ನ ಬಹುಕೋಟಿ ಹಗರಣವನ್ನು ಮುಚ್ಚಿ ಹಾಕಲು ಆಗಿನ ಸಚಿವ ರಾಜ್ಯವರ್ಧನ್‌ ರಾಥೋಡ್‌ ರೊಂದಿಗೆ ಒಪ್ಪಂದ ಮಾಡಿತ್ತೇ ಎನ್ನುವ ಪ್ರಶ್ನೆಯು ಕೇಳಿ ಬರುತ್ತಿದ್ದು, ಈ ಕುರಿತಾದಂತೆ newslaundry.com ವರದಿ ಮಾಡಿದೆ.

ಪ್ರಸಾರ ಭಾರತಿಯ ಅಧೀನದಲ್ಲಿ ʼಡಿಡಿ ಫ್ರೀ ಡಿಶ್‌ʼವ್ಯವಸ್ಥೆಯನ್ನು ಭಾರತ ಸರಕಾರವು 2017ರಲ್ಲಿ ಜಾರಿಗೆ ತಂದಿದ್ದು, ದೇಶಾದ್ಯಂತ ಇದು 22 ಮಿಲಿಯನ್‌ ಸಬ್‌ ಸ್ಕ್ರೈಬರ್‌ ಗಳನ್ನು ಹೊಂದಿತ್ತು. ಹಿಂದಿ ಮಾತನಾಡುವ ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚು ಜನಪ್ರಿಯತೆ ಗಳಿಸಿತ್ತು. ನಿಗದಿತ ಅವಧಿಯವರೆಗೆ ಈ ವ್ಯವಸ್ಥೆಯಡಿ ಪ್ರಸಾರ ಮಾಡಬೇಕಾದರೆ ಕೋಟಿಗಟ್ಟಲೆ ಹಣವನ್ನು ಚಾನೆಲ್‌ ಗಳು ಪಾವತಿಸಬೇಕಿತ್ತು.

ರಿಪಬ್ಲಿಕ್‌ ಟಿವಿ ಹಾಗೂ ಝೀ ಮೀಡಿಯಾ ಈ ಹಣವನ್ನು ಪಾವತಿಸಿರಲಿಲ್ಲ ಎನ್ನಲಾಗಿದೆ. ಒಟ್ಟು ಮೂರು ಕಂಪೆನಿಗಳು 52 ಕೋಟಿ ರೂ. ಪಾವತಿಸಬೇಕಿತ್ತು. ಈ ಕುರಿತಾದಂತೆ ಡಿಸೆಂಬರ್‌ 2020 ರಲ್ಲಿ  newslaundry.com ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿತ್ತು.

ಇದೀಗ ಅರ್ನಬ್‌ ಗೋಸ್ವಾಮಿಯ ವಾಟ್ಸಾಪ್‌ ಚಾಟ್‌ ವೈರಲ್‌ ಆದ ಬಳಿಕ ಹಲವಾರು ಪ್ರಕರಣಗಳು ಬೆಳಕಿಗೆ ಬಂದಂತೆ ರಾಜ್ಯವರ್ಧನ್‌ ರಾಥೋಡ್‌ ಕುರಿತಾದಂತ ಮಾಹಿತಿಯೂ ಉಲ್ಲೇಖವಾಗಿದೆ ಎಂದು ವರದಿ ತಿಳಿಸಿದೆ. 2017 ಜುಲೈ ಏಳರಂದು ರಿಪಬ್ಲಿಕ್‌ ಟಿವಿಯ ವಂಚನೆಯ ಕುರಿತಾದಂತೆ ದೂರದರ್ಶನವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ತಿಳಿಸಿತ್ತು. ಈ ವೇಳೆ ವಾಟ್ಸಾಪ್‌ ಚಾಟ್‌ ನಲ್ಲಿ ದಾಸ್‌ ಗುಪ್ತಾ, “ಇಲಾಖೆಯಲ್ಲಿ ರಿಪಬ್ಲಿಕ್‌ ಟಿವಿ ಕುರಿತಾದಂತೆ ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ನಮ್ಮಲ್ಲಿ ಇನ್ನೂ ಉಲ್ಲೇಖಿಸಿಲ್ಲ. ಈ ಕುರಿತು ಜೆಎಸ್‌ (ಜಾಯಿಂಟ್‌ ಸೆಕ್ರೆಟರಿ) ನನಗೆ ಮಾಹಿತಿ ನೀಡಿದ್ದಾರೆ. ನನ್ನ ಪ್ರಕಾರ ಈ ಪ್ರಕರಣ ನಮಗೆ ಬರಲು ಸಾಧ್ಯವಿಲ್ಲ” ಎಂದು ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.

ಈ ಸಂದೇಶಕ್ಕೆ ಉತ್ತರಿಸಿದ ಅರ್ನಬ್‌ “ಡಿಶ್‌ ಎಫ್‌ಟಿಎ ಕುರಿತ ವಿಚಾರವಾಗಿರಬಹುದು, ಅದು ನಾನು ಪಕ್ಕಕ್ಕಿಟ್ಟಿದ್ದೇನೆ ಎಂದು ರಾಥೋಡ್‌ ನನ್ನೊಂದಿಗೆ ಹೇಳಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾಗಿ ವರದಿ ತಿಳಿಸಿದೆ. ಇಲ್ಲಿ ರಾಥೋಡ್‌ ಅಂದಿದ್ದು, ಅಂದಿನ ಕೇಂದ್ರ ಮಾಹಿತಿಮತ್ತು ಪ್ರಸಾರ ಇಲಾಖೆಯ ಸಚಿವರಾಗಿದ್ದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಆಗಿರುವ ಸಾಧ್ಯತೆಯು ಹೆಚ್ಚಾಗಿದೆ ಎಂದು newslaundry.com ವರದಿ ತಿಳಿಸಿದೆ. ಬೇರೆ ಬೇರೆ ವಿಚಾರಗಳ ಕುರಿತು ಮಾತನಾಡುವಾಗಲೆಲ್ಲಾ ರಾಜ್ಯವರ್ಧನ್‌ ರನ್ನು ಅರ್ನಬ್‌ ರಾಥೋಡ್‌ ಎಂದೇ ಸಂಭೋದಿಸುತ್ತಿದ್ದದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬಹುಕೋಟಿ ಹಗರಣದ ಪ್ರಕರಣವನ್ನು ʼಪಕ್ಕಕ್ಕಿಟ್ಟಿದ್ದೇನೆʼಅನ್ನುವುದರ ಅರ್ಥವೇನು? ಅರ್ನಬ್‌ ಒಡೆತನದ ರಿಪಬ್ಲಿಕ್‌ ಟಿವಿಯು ಬಹುಕೋಟಿ ವಂಚನೆ ಮಾಡಿದ ವಿಚಾರವು ಸರಕಾರಕ್ಕೆ ತಿಳಿದಿದೆ ಎಂದು ಸ್ವತಃ ರಾಜ್ಯವರ್ಧನ್‌ ರಾಥೋಡ್‌ ಅರ್ನಬ್‌ ಗೆ ಮಾಹಿತಿ ನೀಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಲ್ಲದೇ ಪ್ರಮುಖವಾಗಿ ಸಚಿವರೇ ಈ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಅನ್ನುವ ಬಲವಾದ ಅನುಮಾನಗಳು ಮೂಡುತ್ತಿವೆ. ಈ ನಡುವೆ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆದರೂ ಇದುವರೆಗೂ ರಿಪಬ್ಲಿಕ್‌ ಟಿವಿ ಆಗಲಿ ಝೀ ಮೀಡಿಯಾ ವಿರುದ್ಧವಾಗಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸರಕಾರಕ್ಕೆ ಬಹುಕೋಟಿಗಳ ನಷ್ಟವೂ ಉಂಟಾಗಿದೆ ಎಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X