Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ18 Jan 2021 12:10 AM IST
share
ಓ ಮೆಣಸೇ...

ಗೋವುಗಳ ಸಂರಕ್ಷಣೆಗಾಗಿ ಪ್ರತೀ ತಾಲೂಕಿಗೆ 2 ಗೋಶಾಲೆಗಳನ್ನು ಮಂಜೂರು ಮಾಡಲು ಚಿಂತನೆ ನಡೆದಿದೆ - ಪ್ರಭು ಚೌಹಾಣ್, ಸಚಿವ
ಸರಕಾರಿ ಶಾಲೆಗಳನ್ನು ಮುಚ್ಚಿಸಿ ಅಲ್ಲೇ ಗೋಶಾಲೆ ತೆರೆಯುವ ಉದ್ದೇಶವಿದೆಯೇ?


ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರಿಂದ ಅಲ್ಲಿನ ನಾಯಕರು ಬಿಜೆಪಿ ನಾಯಕರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
ಆದರೆ ಸಿಡಿ ಕುರಿತಂತೆ ಆರೋಪ ಮಾಡಿರುವುದು ಬಿಜೆಪಿ ನಾಯಕರೇ ಅಲ್ಲವೇ?


ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಇನ್ನೊಂದು ಪರಿಣಾಮಕಾರಿ ಸಿಡಿ ಮುಂದಿಟ್ಟು ಮತ್ತೆ ಪ್ರಯತ್ನಿಸಿ.


ಅವಕಾಶ ಸಿಕ್ಕರೆ ನಾನೇ ಮೊದಲ (ಕೋವಿಡ್) ಲಸಿಕೆ ಪಡೆಯುವೆ - ಡಾ.ಕೆ.ಸುಧಾಕರ್, ಸಚಿವ
ನಿಮಗೆ ಯಾಕೆ ಅವಕಾಶ ಸಿಕ್ಕಿಲ್ಲ?


ಕಾಂಗ್ರೆಸ್ ಅವಸಾನಕ್ಕೆ ಗಾಂಧೀಜಿ, ಅಂಬೇಡ್ಕರ್, ಗೋಮಾತೆ ಹಾಗೂ ರಾಷ್ಟ್ರದ್ರೋಹ ಈ ನಾಲ್ಕು ಶಾಪಗಳು ಕಾರಣ - ನಳಿನ್‌ಕುಮಾರ್ ಕಟೀಲು, ಸಂಸದ
ದೇಶದ ಅವಸಾನಕ್ಕೆ ಮಾತ್ರ ಒಬ್ಬರನ್ನೇ ಹೊಣೆ ಮಾಡಬೇಕಾಗುತ್ತದೆ.


ಜಗತ್ತಿನಲ್ಲಿ ಎಲ್ಲಿಯಾದರೂ ಪ್ರಜಾಪ್ರಭುತ್ವ ಸದೃಢವಾಗಿದೆ ಎಂದಾದರೆ ಅದು ಭಾರತದಲ್ಲಿ ಮಾತ್ರ -ನರೇಂದ್ರ ಮೋದಿ, ಪ್ರಧಾನಿ
ಹೌದು, ನೀವು ಇಷ್ಟೆಲ್ಲ ಪ್ರಯತ್ನಿಸಿದರೂ ಅದನ್ನು ಪೂರ್ಣವಾಗಿ ಬೀಳಿಸಲಾಗಲಿಲ್ಲ ನೋಡಿ. 


ವಂಚಕ ಯುವರಾಜ್‌ಗೂ ಬಿಜೆಪಿ, ಆರೆಸ್ಸೆಸ್‌ಗೂ ಯಾವುದೇ ಸಂಬಂಧವಿಲ್ಲ - ಬಸವರಾಜ ಬೊಮ್ಮಾಯಿ, ಸಚಿವ
ನೂರಾರು ವಂಚಕ ರಾಜರನ್ನು ಹೊಂದಿರುವ ಪಕ್ಷ, ಸಂಘಟನೆಯಲ್ಲವೇ?


35 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಅಧಿಕಾರ ದಾಹಕ್ಕಾಗಿ ರಾಜಕೀಯ ಮಾಡಿಲ್ಲ - ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ
ಅಧಿಕಾರ ಮೋಹಕ್ಕಾಗಿ ರಾಜಕೀಯ ಮಾಡಿದ ಬಗ್ಗೆ ವದಂತಿಗಳಿವೆ.


ರಾಜ್ಯದ ಬಹುತೇಕ ಯೋಜನೆಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ - ಯಡಿಯೂರಪ್ಪ, ಮುಖ್ಯಮಂತ್ರಿ
ರಾಹುಲ್ ಇಟಲಿಗೆ ಪ್ರಯಾಣ ಮಾಡಿರುವುದು ಕಾರಣವಾಗಿರಬಹುದೇ?


ಅಮೆರಿಕ ಸಂಸತ್ ಒಳಗೆ ನುಗ್ಗಿದ ಟ್ರಂಪ್ ಬಂಟರು ಉಗ್ರರು - ಜೋ ಬೈಡನ್, ಅಮೆರಿಕದ ನಿಯೋಜಿತ ಅಧ್ಯಕ್ಷ
ಭಾರತದಲ್ಲಾದರೆ ಅವರು ದೇಶ ಭಕ್ತರು. 


ಪ್ರೀತಿ ಎಂದರೆ ದೇವರು ಇದ್ದ ಹಾಗೆ - ಪ್ರಜ್ಞಾಸಿಂಗ್ ಠಾಕೂರ್, ಸಂಸದೆ
ಈ ಜನ್ಮದಲ್ಲಿ ನಿಮಗೆ ದೇವರು ಒಲಿಯುವುದಿಲ್ಲ ಬಿಡಿ.


ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿa
ಮೊದಲು ನಿಮ್ಮನ್ನು ಡಿಟೆನ್ಶನ್ ಸೆಂಟರ್‌ಗೆ ಸೇರಿಸದಂತೆ ನೋಡಿಕೊಳ್ಳಿ.


ಸಿಎಂ ಯಾರೇ ಇರಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ಧ್ವಜ ಸದಾ ಹಾರುತ್ತಿರಲಿ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಬಿಜೆಪಿಯಲ್ಲಿರುವವರೆಲ್ಲರೂ ಮಾಜಿ ಕಾಂಗ್ರೆಸಿಗರಾಗಿರುವಾಗ ಸದಾ ಹಾರುತ್ತಲೇ ಇರುತ್ತದೆ ಬಿಡಿ.


ಜೆಡಿಎಸ್‌ಗೆ ಪೂರ್ಣ ಅಧಿಕಾರ ಕೊಟ್ಟರೆ ಕರ್ನಾಟಕವನ್ನು ನಿಜವಾದ ರಾಮರಾಜ್ಯವನ್ನಾಗಿ ಮಾಡಿ ತೋರಿಸುವೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕರ್ನಾಟಕವನ್ನೀಗ ಭೀಮ ರಾಜ್ಯವನ್ನಾಗಿಸುವ ಅಗತ್ಯವಿದೆ.


ಗೋಮಾತೆಯ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡಿದ್ದಾರೆ- ಕೆ.ಎಸ್.ಈಶ್ವರಪ್ಪ, ಸಚಿವ
ಗೋಸಾಕಿದ ರೈತರ ಶಾಪ ನಿಮ್ಮನ್ನು ಬೇಗನೇ ಸುಡಲಿದೆ.


ನಮ್ಮದು ವಿಶ್ವದಲ್ಲೇ ಅಗ್ಗದ ಕೊರೋನ ಲಸಿಕೆ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕೇ ಇರಬೇಕು ತಾವು ಅದನ್ನು ತೆಗೆದುಕೊಳ್ಳದೇ ಇದ್ದುದು.


ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಿ ಎಂದು ಜನರಿಗೆ ಹೇಳುವಷ್ಟು ‘ಧ್ಯೆರ್ಯ’ ನನಗಿಲ್ಲ - ಟಿ.ಎಸ್.ಸಿಂಗ್, ಛತ್ತೀಸ್‌ಗಡ ಸಚಿವ
ನಿಮಗೆ ತೆಗೆದುಕೊಳ್ಳುವ ಧೈರ್ಯ ಇದೆಯೇ, ಅದನ್ನು ಹೇಳಿ.


ಲಾಕ್‌ಡೌನ್‌ನಿಂದ ಎಲ್ಲವೂ ಕೆಟ್ಟದ್ದೇ ಆಗಿತ್ತು ಎನ್ನುವ ಹಾಗಿಲ್ಲ, ಪರಿಸರ(ಮಾಲಿನ್ಯ)ಕ್ಕೆ ತುಂಬಾ ಒಳ್ಳೆಯದಾಗಿತ್ತು - ಜೂಹಿಚಾವ್ಲಾ, ನಟಿ
ಹೌದು, ಕೆಟ್ಟ ಸಿನೆಮಾಗಳಿಂದ ಸಮಾಜ ಕೆಟ್ಟುಹೋಗುವುದಕ್ಕೆ ಕೆಲ ಕಾಲ ತಡೆ ಬಿತ್ತು. 


ಬಿಜೆಪಿ ಗಾಂಧೀಜಿಯ ಕನಸನ್ನು ನನಸು ಮಾಡಲಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಬಹುಶಃ ಗೋಡ್ಸೆಯ ಪಿಸ್ತೂಲಿನಿಂದ ಕೊಲ್ಲುವ ಮೂಲಕ ಇರಬಹುದು.


ಕರ್ನಾಟಕದ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಕನಿಷ್ಠ ಲಜ್ಜೆಯಾದರೂ ಇರಬೇಕಿತ್ತು, ನಿಮಗೆ.


ಯಡಿಯೂರಪ್ಪ ಯಾವತ್ತೂ ನಂಬಿದವರ ಕೈಬಿಡುವುದಿಲ್ಲ - ಶ್ರೀರಾಮುಲು, ಸಚಿವ
ಸಿಡಿಯನ್ನು ನಂಬಿದವರ ಬಗ್ಗೆ ಇರಬೇಕು.


ಯಡಿಯೂರಪ್ಪ ಇನ್ನು ಏಳು ಜನ್ಮ ಎತ್ತಿ ಬಂದರೂ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಾಧ್ಯವಿಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಅದಕ್ಕೆ ಕಾಂಗ್ರೆಸ್‌ನೊಳಗೇ ಜನರಿದ್ದಾರೆ.


ಕೆಲವರು ಹಾದಿ ಬೀದಿಯಲ್ಲಿ ನಿಂತು ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದಾರೆ - ಯಡಿಯೂರಪ್ಪ, ಮುಖ್ಯಮಂತ್ರಿ
ಅದನ್ನೇ ಸಿಡಿ ಮಾಡಿಕೊಂಡು ಬಂದಿದ್ದರೆ ಸ್ಥಾನ ಸಿಗುತ್ತಿತ್ತೇ?


ಕುದುರೆಯನ್ನು ನೀರಿರುವಲ್ಲಿಗೆ ಕೊಂಡಯ್ಯಬಹುದು, ನೀರು ಕುಡಿಸಲು ಸಾಧ್ಯವಿಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಆದರೆ ಬಿಜೆಪಿ ಕುದುರೆ ಅಲ್ಲ, ಕತ್ತೆ ಎನ್ನುವುದು ಜನರಿಗೆ ಮನವರಿಕೆಯಾಗಿದೆ.


ನನ್ನ ಮೂಲ ಕಾಂಗ್ರೆಸಲ್ಲ , ಜನಸಂಘ. ಅಲ್ಲಿದ್ದಾಗ ಹಾಫ್‌ಚಡ್ಡಿ, ಟೋಪಿ ಧರಿಸುತ್ತಿದ್ದೆ - ರಮೇಶ್ ಜಾರಕಿಹೊಳಿ, ಸಚಿವ
ಒಟ್ಟಿನಲ್ಲಿ ಕಾಂಗ್ರೆಸ್‌ಗೂ, ಜನಸಂಘಕ್ಕೂ ಒಟ್ಟಿಗೆ ಟೋಪಿ ಹಾಕುವ ಉದ್ದೇಶವಿದ್ದಂತಿದೆ.


ಕುಟುಂಬ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು - ನರೇಂದ್ರ ಮೋದಿ, ಪ್ರಧಾನಿ

ಈಗ ದೇಶದ ಪ್ರಧಾನಿ ಕುಟುಂಬ ರಾಜಕಾರಣದಿಂದ ಬಂದವರಲ್ಲ. ಆದರೂ ಪ್ರಜಾಪ್ರಭುತ್ವ ಯಾಕೆ ಅಪಾಯದಲ್ಲಿದೆ?

share
ಪಿ.ಎ.ರೈ
ಪಿ.ಎ.ರೈ
Next Story
X