ಉಡುಪಿ ನಗರಸಭೆಗೆ ಐವರ ನಾಮನಿರ್ದೇಶನ
ಉಡುಪಿ, ಜ.18: ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ11(1) (ಬಿ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಸರಕಾರವು ಉಡುಪಿ ನಗರಸಭೆಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಮಲ್ಪೆ ವಡಬಾಂಡೇಶ್ವರದ ವಿಜಯ ಕುಂದರ್, ನ್ಯಾಯವಾದಿ ಕಿನ್ನಿಮುಲ್ಕಿಯ ದೇವದಾಸ್ ವಿ ಶೆಟ್ಟಿಗಾರ್, ಪುತ್ತೂರು ಸುಬ್ರಹ್ಮಣ್ಯ ನಗರದ ದಿನೇಶ್ ಪೈ, ಪುತ್ತೂರು ಗ್ರಾಮ ಕುದ್ಮಲ್ ರಂಗರಾವ್ ನಗರದ ಸುಬೇದಾ ಹಾಗೂ ಶಿವಳ್ಳಿ ಗ್ರಾಮ ಮೂಡುಪೆರಂಪಳ್ಳಿಯ ಅರುಣಾ ಎಸ್. ಪೂಜಾರಿ ಉಡುಪಿ ನಗರಸಭೆಗೆ ನಾಮನಿರ್ದೇಶನಗೊಂಡ ಸದಸ್ಯರಾಗಿದ್ದಾರೆ.
ನಗರಸಭೆಗೆ ನಾಮನಿರ್ದೇಶಿತ ಸದಸ್ಯರ ನೇಮಕಕ್ಕಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Next Story