ಶ್ರೀನಿವಾಸ್ ವಿವಿಯಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ

ಮಂಗಳೂರು, ಜ.18: ನಗರದ ಶ್ರೀನಿವಾಸ್ ವಿವಿಯ 2020-21ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವು ಸೋಮವಾರ ಶ್ರಿನಿವಾಸ್ ವಿವಿಯ ಸಿಟಿ ಕ್ಯಾಂಪಸ್ನ ಗ್ಯಾಲರಿ ಹಾಲ್ನಲ್ಲಿ ನಡೆಯಿತು.
ಶ್ರೀನಿವಾಸ್ ವಿವಿ ಕುಲಪತಿ ಡಾ. ಪಿ. ಎಸ್. ಐತಾಳ್ ಮಾತನಾಡಿ ಕಾಲ ಕಾಲಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತಿವೆ. ವ್ಯಕ್ತಿಯೊಬ್ಬನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಜ್ಞಾನ, ಕೌಶಲ, ಅನುಭವದ ಜೊತೆಗೆ ಸಮಸ್ಯೆ ಹಾಗೂ ಸವಾಲುಗಳನ್ನು ಮೆಟ್ಟಿ ನಿಲ್ಲಲು ಉನ್ನತ ಶಿಕ್ಷಣವು ಸಹಕರಿಸುತ್ತದೆ ಎಂದರು.
ವಿವಿಯ ಕುಲಸಚಿವ ಡಾ ಅನಿಲ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಡೀನ್ ಲವೀನ ಡಿಮೆಲ್ಲೊ, ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಡೀನ್ ಡಾ. ಥಾಮಸ್ ಪಿಂಟೋ, ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಕಾಮರ್ಸ್ನ ಡೀನ್ ಪ್ರೊ. ಕೀರ್ತನ್ ರಾಜ್, ಕಾಲೇಜ್ ಆಫ್ ಕಂಪ್ಯೂಟರ್ ಆ್ಯಂಡ್ ಇನ್ಫಾರ್ಮೇಶನ್ ಸೈನ್ಸ್ನ ಡೀನ್ ಪ್ರೊ. ಶ್ರೀಧರ ಆಚಾರ್ಯ, ಕಾಲೇಜ್ ಆಫ್ ಏವಿಯೇಶನ್ ಸ್ಟಡೀಸ್ನ ಡೀನ್ ಪ್ರೊ. ಪವಿತ್ರಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಎಂಬಿಎ ವಿಭಾಗದ ಸಂಯೋಜಕ ಪ್ರೊ. ಅಮಿತ್ ಡೊನಾಲ್ಡ್ ಮಿನೇಜ್ಹಸ್ ಸ್ವಾಗತಿಸಿದರು. ಎಂಸಿಎ ವಿಭಾಗದ ಸಂಯೋಜಕ ಪ್ರೊ. ವೈಕುಂಟ ಪೈ ವಂದಿಸಿದರು. ಡಾ. ವಿದ್ಯಾ ಎನ್. ಕಾರ್ಯಕ್ರಮ ನಿರೂಪಿಸಿದರು.







