Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮೊಟ್ಟೆಯ ಬಿಳಿಭಾಗವನ್ನು ತಿನ್ನಬಾರದು...

ಮೊಟ್ಟೆಯ ಬಿಳಿಭಾಗವನ್ನು ತಿನ್ನಬಾರದು ಎನ್ನುವುದಕ್ಕೆ ಕಾರಣಗಳಿಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ19 Jan 2021 12:08 AM IST
share
ಮೊಟ್ಟೆಯ ಬಿಳಿಭಾಗವನ್ನು ತಿನ್ನಬಾರದು ಎನ್ನುವುದಕ್ಕೆ ಕಾರಣಗಳಿಲ್ಲಿವೆ

ಮೊಟ್ಟೆಯಲ್ಲಿಯ ಹಳದಿ ಭಾಗ ಕೆಟ್ಟದ್ದು ಮತ್ತು ಬಿಳಿಯ ಭಾಗ ಒಳ್ಳೆಯದು ಎನ್ನುವುದನ್ನು ಹಲವರು ಗಟ್ಟಿಯಾಗಿ ನಂಬಿದ್ದಾರೆ. ಬಿಳಿಯ ಭಾಗ ನಿಜಕ್ಕೂ ಆರೋಗ್ಯಕರವೇ? ಪ್ರತಿದಿನ ಕೇವಲ ಮೊಟ್ಟೆಯ ಬಿಳಿಯ ಭಾಗವನ್ನಷ್ಟೇ ಸೇವಿಸುವುದು ತನ್ನದೇ ಆದ ಹಿನ್ನಡೆಗಳನ್ನು ಹೊಂದಿದೆ. ಮೊಟ್ಟೆಯ ಬಿಳಿಯ ಭಾಗವು ಅಧಿಕ ಪ್ರೋಟಿನ್ ಹೊಂದಿರುತ್ತದೆ,ಆದರೆ ಇಡಿಯ ಮೊಟ್ಟೆಗೆ ಹೋಲಿಸಿದರೆ ಅದರ ಪೌಷ್ಟಿಕಾಂಶ ವೌಲ್ಯ ಕಡಿಮೆಯಿರುತ್ತದೆ. ಅಲರ್ಜಿ,ಸೋಂಕು ಮತ್ತು ನ್ಯೂನತೆಗಳಂತಹ ಅಡ್ಡ ಪರಿಣಾಮಗಳು ಮೊಟ್ಟೆಯ ಬಿಳಿ ಭಾಗದೊಂದಿಗೆ ಗುರುತಿಸಿಕೊಂಡಿವೆ. ಪ್ರತಿಯೊಬ್ಬರಿಗೂ ಈ ಅಡ್ಡಪರಿಣಾಮಗಳು ಉಂಟಾಗದಿರಬಹುದು,ಆದರೆ ಇವುಗಳ ಬಗ್ಗೆ ಮಾಹಿತಿ ಹೊಂದಿರುವುದು ಒಳ್ಳೆಯದು. ಮೊಟ್ಟೆಯಲ್ಲಿ ಪ್ರೋಟಿನ್,ಸೋಡಿಯಂ,ಸಿಲೆನಿಯಂ,ಫಾಲೇಟ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುತ್ತವೆ. ಬಿಳಿಯ ಭಾಗವು ಸುಮಾರು 16 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಮೊಟ್ಟೆಯ ಬಿಳಿ ಭಾಗವು ಯಾವುದೇ ಸ್ಯಾಚ್ಯುರೇಟೆಡ್ ಫ್ಯಾಟ್‌ಗಳನ್ನಾಗಲೀ ಕ್ಝೊಛಿಸ್ಟ್ರಾಲ್‌ನ್ನಾಗಲೀ ಹೊಂದಿರುವುದಿಲ್ಲ,ಆದರೂ ಪ್ರತಿದಿನ ಅದರ ಸೇವನೆಯು ವಿವಿಧ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ. ಇಂತಹ ನಾಲ್ಕು ಹೆಚ್ಚು ಸಾಮಾನ್ಯವಾಗಿರುವ ಅಡ್ಡಪರಿಣಾಮಗಳು ಇಲ್ಲಿವೆ......

* ಅಲರ್ಜಿ ಪ್ರತಿವರ್ತನೆಗಳು

ಕೆಲವು ಜನರು ಮೊಟ್ಟೆಯ ಬಿಳಿಭಾಗ ಮತ್ತು ಅಲ್ಬುಮಿನ್ ಪ್ರೋಟಿನ್‌ಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಮೊಟ್ಟೆಯ ಬಿಳಿ ಭಾಗದ ಸೇವನೆಯು ದದ್ದುಗಳು, ಊತ, ವಾಕರಿಕೆ, ಬೇಧಿ, ವಾಂತಿ, ಉಬ್ಬಸ,ಕೆಮ್ಮು ಮತ್ತು ಸೀನುಗಳಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ಬಿಳಿಯ ಭಾಗವನ್ನು  ತಿಂದಾಗ ಉಸಿರಾಡಲು ಕಷ್ಟ,ರಕ್ತದೊತ್ತಡ ಕುಸಿತ, ಗಂಟಲು ಅಥವಾ ಬಾಯಿಯಲ್ಲಿ ಉರಿಯೂತ ಮತ್ತು ಪ್ರಜ್ಞಾಹೀನತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊಟ್ಟೆಗಳಿಗೆ ಅಲರ್ಜಿ ಹೊಂದಿರುವವರು ಬಿಳಿಯ ಭಾಗಕ್ಕೂ ಅಲರ್ಜಿಯನ್ನು ಹೊಂದಿರುವ ಸಾಧ್ಯತೆಯಿರುತ್ತದೆ.

* ಆಹಾರ ವಿಷವಾಗುವಿಕೆ

ಹಸಿ ಮೊಟ್ಟೆಯ ಬಿಳಿಯ ಭಾಗವು ಕೋಳಿಗಳ ಕರುಳುಗಳಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿರುವ ಸಾಧ್ಯತೆಯಿರುತ್ತದೆ ಮತ್ತು ಇದನ್ನು ಸೇವಿಸಿದಾಗ ಫುಡ್ ಪಾಯ್ಸನಿಂಗ್ ಉಂಟಾಗುತ್ತದೆ ಅಥವಾ ಸೇವಿಸಿದ ಆಹಾರವೇ ವಿಷವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಮೊಟ್ಟೆಯ ಕವಚದ ಒಳಭಾಗ ಮತ್ತು ಹೊರ ಮೇಲ್ಮೈನಲ್ಲಿಯೂ ಇರುತ್ತವೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳ ಅಪಾಯದಿಂದ ಪಾರಾಗಲು ಪ್ರತಿ ದಿನ ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸುವುದನ್ನು ಸಾಧ್ಯವಾದಷ್ಟು ನಿವಾರಿಸಬೇಕು. ಮೊಟ್ಟೆಯನ್ನು ಹೆಚ್ಚಿನ ಉಷ್ಣತೆಯಲ್ಲಿ ಹೆಚ್ಚು ಸಮಯ ಬೇಯಿಸಬೇಕು. ಸೂಕ್ತವಾಗಿ ಬೇಯಿಸಿದ ಅಥವಾ ಫ್ರೈ ಮಾಡಲಾದ ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸುವುದು ಒಳ್ಳೆಯದು.

*ಬಯಾಟಿನ್ ಮಟ್ಟವು ಕುಸಿಯುತ್ತದೆ

 ವಿಟಾಮಿನ್ ಎಚ್ ಅಥವಾ ವಿಟಾಮಿನ್ ಬಿ7 ಎಂದೂ ಕರೆಯಲಾಗುವ ಬಯಾಟಿನ್ ಕೊರತೆಯು ಕ್ರಾಡಲ್ ಕ್ಯಾಪ್ ಅಥವಾ ಶಿಶುಗಳಲ್ಲಿ ತಲೆಹೊಟ್ಟು,ಸೆಬೊರಿಕ್ ಡರ್ಮಟೈಟಿಸ್ ಅಥವಾ ಚರ್ಮದಲ್ಲಿ ಅತಿ ಮೇದಸ್ರಾವ,ಸ್ನಾಯುಗಳಲ್ಲಿ ಸಮನ್ವಯತೆ ಕೊರತೆ,ಸ್ನಾಯು ನೋವು ಮತ್ತು ಸೆಳೆತಗಳು,ತಲೆಗೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಮೊಟ್ಟೆಯ ಬಿಳಿಯ ಭಾಗವನ್ನು ತಿನ್ನುವುದರಿಂದ ಬಯಾಟಿನ್ ಕೊರತೆಯು ಹೆಚ್ಚಬಹುದು. ಮೊಟ್ಟೆಯ ಬಿಳಿಯ ಭಾಗದಲ್ಲಿರುವ ಅವಿಡಿನ್ ಎಂಬ ಪ್ರೋಟಿನ್ ಶರೀರದಲ್ಲಿಯ ಬಯಾಟಿನ್ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ ಮತ್ತು ಬಯಾಟಿನ್ ಕೊರತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಸಂಭಾವ್ಯ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ.

* ಶರೀರದಲ್ಲಿ ಹೆಚ್ಚುವರಿ ಪ್ರೋಟಿನ್

ಮೊಟ್ಟೆಯ ಬಿಳಿಯ ಭಾಗದಲ್ಲಿ ಪ್ರೋಟಿನ್ ಹೆಚ್ಚು ಪ್ರಮಾಣದಲ್ಲಿರುತ್ತದೆ ಮತ್ತು ವ್ಯಕ್ತಿಯು ಮೂತ್ರಪಿಂಡ ಸಮಸ್ಯೆಗಳಿಂದ ನರಳುತ್ತಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಸೇವನೆಯು ಅಪಾಯವನ್ನುಂಟು ಮಾಡಬಲ್ಲದು.

ಇಷ್ಟೆಲ್ಲ ಇದ್ದರೂ ನಮಗೆ ಅಗತ್ಯವಿರುವ ಶೇ.60ರಷ್ಟು ಪ್ರೋಟಿನ್ ಮೊಟ್ಟೆಗಳಿಂದಲೇ ದೊರೆಯುತ್ತದೆ. ಪ್ರತಿದಿನ ಎರಡು ಮೊಟ್ಟೆಗಳಿಗಿಂತ ಹೆಚ್ಚು ಸೇವಿಸಬಾರದು ಎನ್ನುತ್ತಾರೆ ತಜ್ಞರು. ತೀವ್ರ ಯಕೃತ್ತು ತೊಂದರೆಗಳನ್ನು ಹೊಂದಿರುವವರು ಮೊಟ್ಟೆಯ ಬಿಳಿಭಾಗವನ್ನೊಳಗೊಂಡ ಆಹಾರ ಸೇವನೆಯನ್ನು ಆರಂಭಿಸುವ ಮುನ್ನ ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X