ಜ. 27ರಂದು ಎಸ್.ವೈ.ಎಸ್ ದ.ಕ. ಜಿಲ್ಲಾ ಮಟ್ಟದ ಸಮಾವೇಶ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ರಾಜ್ಯಾದ್ಯಂತ ನಡೆಸುತ್ತಿರುವ 'ಕೌಂಟ್ 20' ಶಿಬಿರದ ದ.ಕ. ಜಿಲ್ಲಾ ಮಟ್ಟದ ಸಮಾವೇಶವು ಜ.27ರಂದು ಬೆಳಗ್ಗೆ ಎಸ್ ಎಸ್ ಆಡಿಟೋರಿಯಂ ಮೆಲ್ಕಾರ್ ನಲ್ಲಿ ನಡೆಯಲಿದೆ.
ಜಿಲ್ಲಾಧ್ಯಕ್ಷ ಸಿಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ಅಧ್ಯಕ್ಷತೆ ವಹಿಸುವರು. ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಉದ್ಘಾಟನೆ ಮಾಡುವರು.
ಟಿಎಂ ಮೊಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆಕೆಎಂ ಕಾಮಿಲ್ ಸಖಾಫಿ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನಾರ, ಹನೀಫ್ ಹಾಜಿ ಉಳ್ಳಾಲ, ಎನ್ ಎಸ್ ಉಮರ್ ಮಾಸ್ಟರ್, ಅಬ್ದುಲ್ ಹಮೀದ್ ಬಜ್ಪೆ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story