ಒರಿಸ್ಸಾ ಮೂಲದ ಮೀನುಗಾರ ನಾಪತ್ತೆ
ಮಂಗಳೂರು, ಜ.25: ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಮೀನುಗಾರ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಒಡಿಶಾ ಮೂಲದ ನರೇಂದ್ರ ಸಾಯಿ (32) ನಾಪತ್ತೆಯಾದವರು.
ಬೆಂಗರೆ ನಿವಾಸಿ ಕೇಶವ ಸಾಲ್ಯಾನ್ ಎಂಬವರಿಗೆ ಸೇರಿದ ಹನುಮಾನ್ ಬೋಟಿನಲ್ಲಿ ಜ.21ರಂದು ರಾತ್ರಿ 9 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಸುಮಾರು 40ನಾಟಿಕಲ್ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ನರೇಂದ್ರ ಎಂಬವರು ನಾಪತ್ತೆಯಾಗಿದ್ದಾರೆ. ವಿಷಯ ತಿಳಿದ ಬಳಿಕ ಎಲ್ಲಿ ಹುಡುಕಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬೋಟಿನ ಚಾಲಕ ಎಂ. ಪಾಂಡಿ ಎಂಬವರು ಪಾಂಡೇಶ್ವರ ಠಾಣೆಗೆ ಪೊಲೀಸ್ ನೀಡಿದ್ದಾರೆ.
Next Story