'ಸಿಪಿಎಂಟಿಎ' ಸಂಘದಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ
ಮಂಗಳೂರು : ಕೆನರಾ ಪ್ಲಾಸ್ಟಿಕ್ ತಯಾರಕರು ಮತ್ತು ವರ್ತಕರ ಸಂಘದ ( ಸಿಪಿಎಂಟಿಎ) ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ ರನ್ನು ಭೇಟಿ ಮಾಡಿ, ಮಂಗಳೂರು ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರದಿಂದ ಅನುಮತಿ ದೊರಕಿಸಿಕೊಟ್ಟಿದ್ದ ಕ್ಕಾಗಿ ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿಎ ನಝೀರ್, ಉಪಾಧ್ಯಕ್ಷ ಆಸ್ಕರ್ ಅಲಿ, ಪ್ರ. ಕಾರ್ಯದರ್ಶಿ ಬಿಎ ಇಕ್ಬಾಲ್ ಕಾರ್ಯದರ್ಶಿ ಸುರೇಶ್ ಕರ್ಕೇರ, ರೋಷನ್ ಬಾಳಿಗ, ಹರೀಶ್ ಕರ್ಕೇರ, ಅಝೀಝ್ ಕೃಷ್ಣಾಪುರ ಹಾಗು ಇತರರು ಉಪಸ್ಥಿತರಿದ್ದರು.
Next Story