ಉಜಿರೆ ಬಾಲಕನ ಅಪಹರಣ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಣೆ
ಮಂಗಳೂರು, ಜ.28: ಉಜಿರೆಯಲ್ಲಿ 8 ವರ್ಷದ ಬಾಲಕನ ಅಪರಹಣಕ್ಕೆ ಸಂಬಂಧಿಸಿ ಬಂಧಿತ ಆರು ಮಂದಿ ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಜ.17ರಂದು ಉಜಿರೆ ರಥಬೀದಿಯ ಬಾಲಕನನ್ನು ಅಪಹರಿಸಿದ ತಂಡ 17 ಕೋಟಿ ರೂ. ಬೇಡಿಕೆ ಇರಿಸಿತ್ತು. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ಅಪಹರಣವಾದ 48 ಗಂಟೆಗೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದರು.
ಬಂಧಿತ ಆರೋಪಿಗಳಾದ ಮಂಡ್ಯದ ರಂಜಿತ್, ಹನುಮಂತು, ಮೈಸೂರಿನ ಗಂಗಾಧರ, ಬೆಂಗಳೂರಿನ ಕಮಲ್, ಮಂಜುನಾಥ ಹಾಗೂ ಮಹೇಶ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ, ಜಾಮೀನು ನಿರಾಕರಿಸಿದೆ.
Next Story