Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಗುಂಡೇಟಿನ ಗಾಯ ನೋಡಿದ್ದೇನೆ, ನಾನೇನೂ...

"ಗುಂಡೇಟಿನ ಗಾಯ ನೋಡಿದ್ದೇನೆ, ನಾನೇನೂ ಮಾಡುವಂತಿಲ್ಲ" ಎಂದು ಕುಟುಂಬಕ್ಕೆ ಹೇಳಿದ್ದ ಪೋಸ್ಟ್ ಮಾರ್ಟಂ ನಡೆಸಿದ್ದ ವೈದ್ಯ

ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭ ನಡೆದ ಸಾವಿನ ಕುರಿತು ಕುಟುಂಬದವರ ಆರೋಪ

ವಾರ್ತಾಭಾರತಿವಾರ್ತಾಭಾರತಿ30 Jan 2021 6:20 PM IST
share
ಗುಂಡೇಟಿನ ಗಾಯ ನೋಡಿದ್ದೇನೆ, ನಾನೇನೂ ಮಾಡುವಂತಿಲ್ಲ ಎಂದು ಕುಟುಂಬಕ್ಕೆ ಹೇಳಿದ್ದ ಪೋಸ್ಟ್ ಮಾರ್ಟಂ ನಡೆಸಿದ್ದ ವೈದ್ಯ

ಹೊಸದಿಲ್ಲಿ,ಜ.30: ಜನವರಿ 26ರಂದು ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಉರುಳಿ ನವ್ರೀತ್ ಸಿಂಗ್ ಎಂಬ ಯುವಕ ಮೃತಪಟ್ಟಿದ್ದಾಗಿ ದಿಲ್ಲಿ ಪೊಲೀಸರ ಹೇಳಿಕೆಯನ್ನು  ನವ್ರೀತ್  ಕುಟುಂಬ ಒಪ್ಪುತ್ತಿಲ್ಲ ಬದಲು  ಆತ ಗುಂಡೇಟಿನಿಂದಾಗಿಯೇ ಮೃತಪಟ್ಟಿದ್ದಾನೆಂದು ವಾದಿಸುತ್ತಿದೆ. ಘಟನೆ ನಡೆದ ಐಟಿಒ ಸಮೀಪವಿದ್ದ ಹಲವು ರೈತರು ಕೂಡ ಆರಂಭದಲ್ಲಿ ಇಂತಹುದೇ ಮಾತುಗಳನ್ನಾಡಿದ್ದರು ಎಂದು thewire.in ವರದಿ ಮಾಡಿದೆ.

ನವ್ರೀತ್ ಸಿಂಗ್ ಸಾವು ಗುಂಡೇಟಿನಿಂದ ಸಂಭವಿಸಿದೆ ಎಂದು ಮೊದಲು ಟ್ವೀಟ್ ಮಾಡಿದ್ದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಕಾಂಗ್ರೆಸ್ ಸಂಸದ  ಶಶಿ ತರೂರ್ ಸಹಿತ ಹಲವರ ವಿರುದ್ಧ ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನವ್ರೀತ್ ಟ್ರ್ಯಾಕ್ಟರ್ ಉರುಳಿ ಸಾವನ್ನಪ್ಪಿದ್ದಾನೆಂದು ಹೇಳಿ ದಿಲ್ಲಿ ಪೊಲೀಸರು ವೀಡಿಯೋ ಕೂಡ ಬಿಡುಗಡೆ ಮಾಡಿದ್ದರು. ಮರಣೋತ್ತರ ಪರೀಕ್ಷೆಯನ್ನು ಮರುದಿನ ಮುಂಜಾನೆ 2 ಗಂಟೆಗೆ ರಾಮಪುರ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ನಡೆಸಿ ನೀಡಿದ್ದ ವರದಿಯಲ್ಲಿ `ತಲೆಗೆ ಉಂಟಾದ ಗಾಯದಿಂದಾಗಿ ಆಘಾತ ಮತ್ತು ರಕ್ತಸ್ರಾವ'ದಿಂದಾಗಿ ಸಾವು ಸಂಭವಿಸಿತ್ತು ಎಂದು ಬರೆಯಲಾಗಿತ್ತು ಎಂದು ವರದಿ ತಿಳಿಸಿದೆ.

ಆದರೆ ಆತನ ಕುಟುಂಬ  ಮಾತ್ರ ಇದನ್ನು ಒಪ್ಪುತ್ತಿಲ್ಲ. "ಗುಂಡೇಟಿನಿಂದಾದ ಗಾಯವನ್ನು ಸ್ಪಷ್ಟವಾಗಿ ನೋಡಿದ್ದಾಗಿ ವೈದ್ಯರು ಹೇಳಿದ್ದರು. ಆದುದರಿಂದ ನಾವು ಅಂತ್ಯಕ್ರಿಯೆ ನೆರವೇರಿಸಿದೆವು. ಆದರೆ   ಮರಣೋತ್ತರ ವರದಿಯಲ್ಲಿ ಗುಂಡೇಟಿನ ಕುರಿತು ವರದಿಯಿಲ್ಲ.  ಗುಂಡೇಟಿನ ಗಾಯ ನೋಡಿದ್ದರೂ ತಾವೇನೂ ಮಾಡುವಂತಿಲ್ಲ, ತಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ" ಎಂದು ನವ್ರೀತ್  ಅಜ್ಜ ಹರ್ದೀಪ್ ಸಿಂಗ್ ದಿಬ್‍ ದಿಬಾ ಆರೋಪಿಸಿದ್ದಾರೆ.

ಪೋಸ್ಟ್ ಮಾರ್ಟಂ ವರದಿಯಲ್ಲಿ ಎರಡು ʼಲೇಸರೇಟೆಡ್' ಗಾಯಗಳು- ಒಂದು ಗಲ್ಲದಲ್ಲಿ ಹಾಗೂ ಇನ್ನೊಂದು ಕಿವಿಯ ಹಿಂಭಾಗದಲ್ಲಿದ್ದುದು ಉಲ್ಲೇಖವಾಗಿರುವ ಕುರಿತು ಹೇಳಿದ ಅವರು  ಮುಂದೆ ಕೋರ್ಟ್ ಈ ವಿಚಾರ ತೀರ್ಮಾನಿಸಬೇಕಿದೆ ಎಂದರು.

"ಆತನ ಮೃತದೇಹ ನೋಡಿದವರೆಲ್ಲರೂ ಅದು ಗುಂಡೇಟಿನ ಗಾಯವೆಂದು ತಿಳಿದಿದ್ದಾರೆ. ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರೂ ಹಾಗೆಯೇ ಹೇಳಿದ್ದಾರೆ ಆದರೆ ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ" ಎಂದು ನವ್ರೀತ್ ತಂದೆ ವಿಕ್ರಂಜೀತ್ ಸಿಂಗ್ ಹೇಳಿದ್ದಾರೆ.

ಆದರೆ ಕುಟುಂಬದ ವಾದವನ್ನು ಬರೇಲಿ ಎಡಿಜಿ ಅವಿನಾಶ್ ಚಂದ್ರ ನಿರಾಕರಿಸಿತ್ತಾರೆ. ಸತ್ಯ ಮರೆಮಾಚಲು ಅಥವಾ ತಿರುಚಲು ನಮಗೆ ಯಾವುದೇ ಕಾರಣವಿಲ್ಲ,  ಎಂದು ಅವರು ಹೇಳುತ್ತಾರೆ.

 ಹುಬ್ಬಿನ ಮೇಲೆ, ಗಲ್ಲ, ತಲೆ, ಕಿವಿಯ ಹಿಂಭಾಗ, ಎದೆ ಹಾಗೂ  ತೊಡೆಯಲ್ಲಿ, ಹೀಗೆ ಆರು  ಕಡೆಗಳಲ್ಲಿ ಗಾಯಗಳಿವೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಉಲ್ಲೇಖಗೊಂಡಿದೆ.

ಈ ಕುರಿತು ಏಮ್ಸ್‌ ನ ಹಿರಿಯ ವೈದ್ಯರೊಬ್ಬರು ಪ್ರತಿಕ್ರಿಯಿಸಿ "ನವ್ರೀತ್ ಗಲ್ಲ ಹಾಗೂ ಕಿವಿಯ ಹಿಂದುಗಡೆಯಾಗಿರುವ ಲೇಸರೇಟೆಡ್ ಗಾಯ ಗುಂಡಿನ ಗಾಯವೂ ಆಗಿರಬಹುದು. ಗುಂಡು ಒಂದು ಕಡೆಯಿಂದ ಪ್ರವೇಶಿಸಿ ಇನ್ನೊಂದು ಕಡೆಯಿಂದ ಹೊರಬಂದಿರಬಹುದು" ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಎಕ್ಸ್-ರೇ ಕೂಡ ತೆಗೆಯಲಾಗುತ್ತದೆ. ಎಕ್ಸ್-ರೇಯಲ್ಲಿ ಗುಂಡೇಟಿನ ಗಾಯಗಳು ಕಾಣಿಸುತ್ತವೆ ಎಂದು ವೈದ್ಯರು ಹೇಳಿದ್ದರೂ ಅದನ್ನು ತೋರಿಸಿಲ್ಲ ಎಂದು ನವ್ರೀತ್ ತಂದೆ ಹೇಳಿದ್ದಾರೆ.

ಎಕ್ಸ್-ರೇ ತೆಗೆಯಲಾಗಿದೆ ಎಂದು ಪೋಸ್ಟ್ ಮಾರ್ಟಂ ನಡೆಸಲಾದ ರಾಮಪುರ್ ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಮನೋಜ್ ಶುಕ್ಲಾ ಕೂಡ ದೃಢೀಕರಿಸಿದ್ದಾರೆ ಆದರೆ ಪೋಸ್ಟ್ ಮಾರ್ಟಂ ವರದಿಯಲ್ಲಿ ಎಕ್ಸ್-ರೇ ಉಲ್ಲೇಖವಿಲ್ಲ. ಈ ಕುರಿತು ಸ್ವತಂತ್ರ ತನಿಖೆಯಿಂದ ನಿಜಾಂಶ ಹೊರಬರಬಹುದು ಎಂದು ನವ್ರೀತ್ ಕುಟುಂಬ ಆಶಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Hardeep Singh Dibdiba, grandfather of the youth killed in tractor parade, levels a sensational charge—that a doctor who was part of the autopsy told him a bullet caused the injuries “but my hands are tied”. @IsmatAraa has the story https://t.co/ulMIDPbLPq via @thewire_in

— Siddharth (@svaradarajan) January 30, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X