ಪರ್ಲಿಯ: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಬಂಟ್ವಾಳ ಜ.31: ನಮ್ಮ ನಾಡ ಒಕ್ಕೂಟದ ಬಂಟ್ವಾಳ ಘಟಕ ಮತ್ತು ಮೆಲ್ಕಾರ್ನ ವಿಶನ್ ಎಜ್ಯುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸೆಸೆಲ್ಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಪ್ರೇರಣಾ ಶಿಬಿರವು ಬಿ.ಸಿ.ರೋಡಿನ ಪರ್ಲಿಯ ಮದ್ರಸದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಯಾಸರ್ ಅರಾಫತ್, ಮಸೀದಿ ಕಾರ್ಯದರ್ಶಿ ಮುಹಮ್ಮದ್ ಫಾರೂಕ್, ನಮ್ಮ ನಾಡ ಒಕ್ಕೂಟದ ಬಂಟ್ವಾಳ ಘಟಕ ಅಧ್ಯಕ್ಷ ಪಿ.ಎ.ರಹೀಂ ಮತ್ತು ವಿಶನ್ ಎಜಕೇಶನ್ ಎಂಡ್ ಡೆವಲಪ್ಮೆಂಟ್ ಅಧ್ಯಕ್ಷ ಮಹಮದ್ ಬ್ಯಾರಿ ಉಪಸ್ಥಿತರಿದ್ದರು.
Next Story





