Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ‘ಗೋಮಾತಾ ಇಲ್ಲಿ ಸೇಫು, ಆಗ್ಲಿ ಬಿಡು...

‘ಗೋಮಾತಾ ಇಲ್ಲಿ ಸೇಫು, ಆಗ್ಲಿ ಬಿಡು ರೇಪು..': ಕನ್ನಡದ ರ‍್ಯಾಪ್ ಸಿಂಗರ್ ಹರೀಶ್ ಕಾಂಬಳೆ ಹೊಸಹಾಡು 'ರಾಜನೀತಿ' ಬಿಡುಗಡೆ

ಹಾಡಿನ ಮೂಲಕವೇ ಜನಪ್ರತಿನಿಧಿಗಳಿಗೆ ಪ್ರಶ್ನೆಗಳ ಸುರಿಮಳೆ

ವಾರ್ತಾಭಾರತಿವಾರ್ತಾಭಾರತಿ1 Feb 2021 1:12 PM IST
share
‘ಗೋಮಾತಾ ಇಲ್ಲಿ ಸೇಫು, ಆಗ್ಲಿ ಬಿಡು ರೇಪು..: ಕನ್ನಡದ ರ‍್ಯಾಪ್ ಸಿಂಗರ್ ಹರೀಶ್ ಕಾಂಬಳೆ ಹೊಸಹಾಡು ರಾಜನೀತಿ ಬಿಡುಗಡೆ

ಬೆಂಗಳೂರು, ಜ. 30: ‘ನೀ ಬಿಟ್ಟು ಬಿಡು ಜಾತಿ, ನಾ ಬಿಡುವೆ ಮೀಸಲಾತಿ' ಎಂಬ ಕನ್ನಡದ ಪ್ರಪ್ರಥಮ ‘ಜಾತಿ' ವಿರೋಧಿ ‘ರ್‍ಯಾಪ್' ಹಾಡಿನ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರ ಮನಗೆದ್ದ ಗಾಯಕ ಹರೀಶ್ ಕಾಂಬಳೆ ‘ರಾಜನೀತಿ' ಎಂಬ ಹೊಸ ರ್‍ಯಾಪ್ ಹಾಡೊಂದನ್ನು ಯೂಟ್ಯೂಬ್‍ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹುಟ್ಟುಹಬ್ಬದ ನೆನಪಿನಲ್ಲಿ ರಾಜನೀತಿ ರ್‍ಯಾಪ್ ಹಾಡನ್ನು ಬಿಡುಗಡೆ ಮಾಡಿರುವ ಹರೀಶ್ ಕಾಂಬಳೆ, ‘ಗೋ ಮಾತಾ ಇಲ್ಲಿ ಸೇಫು ಆಗ್ಲಿ ಬಿಡು ರೇಪು, ಇಲ್ಲಿ ಮಾರ್ಡರ್ ಕೂಡ ಆಚರಣೆ, ಕತ್ತರಿಸಿ ಕೇಕು, ಇದ್ಕೆಲ್ಲ ಯಾರೂ ಕಾರಣ, ಹೇಳಿ ಇದು ಎಂಥ ರಾಜಕಾರಣ' ಎಂದು ಆಳುವ ಜನಪ್ರತಿನಿಧಿಗಳಿಗೆ ಹಾಡಿನ ಮೂಲಕವೇ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಕೇಳಿ ನನ್ನ ಸ್ಟೋರಿ: ‘ಯಾಕೆ ರಾಜನೀತಿ ಎಲ್ಲಿ ಹಣ ಎಲ್ಲಕ್ಕಿಂತ ಜಾಸ್ತಿ, ಕಪ್ಪುಹಣದಿಂದ ಮಾಡಿದ್ದಾರೆ ಇವ್ರು ಆಸ್ತಿ. ಎಲೆಕ್ಷನ್ ಟೈಮಲಿ ಸ್ವಲ್ಪ ತೋರಿಸತಾರೆ ಪ್ರೀತಿ, ಆಮೇಲೆ ಕಾಣ್ಸಲ್ಲ ಇವ್ರು ನಿಮ್ಗೆ ವರ್ಷಪೂರ್ತಿ. ಹಿಪ್‍ಹಾಪ್(ರ್‍ಯಾಪ್) ಕನ್ನಡದಲ್ಲಿ ಕೇಳು ಹೇಳ್ತಿನ್ ನನ್ನ ಸ್ಟೋರಿ' ಎಂದು ಕಾಂಬಳೆ ಹಾಡಿದ್ದಾರೆ.

‘ಸಮಸ್ಯೆ ಭಯಂಕರ ನಿರಂತರ, ನಮ್ಮಲ್ಲಿ ನಿಮ್ಮಲ್ಲಿ ಅಂತರ, ಆಕಾಶದಷ್ಟು ಎತ್ತರ ನೀವು ಇರುವ ಕಟ್ಟಡ, ಲೂಟಿ ಮಾಡಿ ಪಟ್ಟಣ. ಇಂತ ನೂರೆಂಟು ಪ್ರಕರಣ, ಪ್ರಗತಿ ಇಲ್ಲಿ ಕಡಿಮೆ. ಮಾಡೋದೇ ಜಾಸ್ತಿ ಹಗರಣ... ಹಾ... ಇಕೆಲ್ಲ ಯಾರು ಕಾರಣ...ಹೇಳಿ.. ಇದು ಎಂತ ರಾಜಕಾರಣ...' ಎಂದು ಕಾಂಬಳೆ ಆಡಳಿತ ವ್ಯವಸ್ಥೆಯನ್ನು ಹಾಡಿನ ಮೂಲಕವೇ ಪ್ರಶ್ನಿಸಿದ್ದಾರೆ

ಜನ ಜಾಗೃತಿ: ‘ಮಾಡಿ ನೀವೇ ಸ್ವಲ್ಪ ಯೋಚನೆ, ಇಲ್ಲಾಂದ್ರೆ ಎನ್ ಪ್ರಯೋಜನೆ, ಚುನಾವಣೆ, ನಿಮ್ಮ ಮತ ಚಲಾವಣೆ ಮಾಡುವ ಮುಂಚನೆ, ಚಿಂತನೆ ಮಾಡೋ ವೇಳೆಯಲ್ಲಿ ವಂದೇ ಮಾತು ಇರಲಿ ಈಗ ನಿಮ್ಮ ಗಮನದಲ್ಲಿ ಮಾರಾಟ ನೀವು ಮಾಡಬೇಡಿ ನೋಟಿಗಾಗಿ ವೋಟು, ಹೀಗೆ ಮಾಡಿ ಹೋಗಿದೆ, ಪೂರ್ತಿ ಸಿಸ್ಟಮ್(ವ್ಯವಸ್ಥೆ) ಹದಗೆಟ್ಟು ಇಲ್ಲಿ ಇರಲು ಮನೆ ಇಲ್ಲ, ಆದ್ರೆ ಸಿಟಿ ಹೈಟೆಕು, ಎದ್ದೇಳಿ ನಿಮ್ಮ ಹಕ್ಕಿಗಾಗಿ ಮಾಡಿ ನೋವು ಪೈಟು (ಹೋರಾಟ)' ಎಂದು ಹರೀಶ್ ಕಾಂಬಳೆ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಪ್ರಂಪಚವೇ ಕೊರೋನ ಸೋಂಕಿನ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಬಡಕೂಲಿ ಕಾರ್ಮಿಕರು ಅನುಭವಿಸಿದ ನೋವಿಗೆ ಹರೀಶ್ ಕಾಂಬಳೆ, ‘ಮಹಾಮಾರಿ ಕಥೆ' ಎನ್ನುವ ರ್‍ಯಾಪ್ ಹಾಡಿನ ಮೂಲಕವೇ ಮಿಡಿದಿದ್ದು, ಆಡಳಿತ ವ್ಯವಸ್ಥೆಯಲ್ಲಿ ಲೋಪ-ದೋಷಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದರು. ಇದೀಗ ‘ರಾಜನೀತಿ' ರ್‍ಯಾಪ್ ಹಾಡಿನ ಮೂಲಕ ವ್ಯವಸ್ಥೆ ಸುಧಾರಣೆ ಅವರ ಹೊಸ ಪ್ರಯತ್ನಿಸಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಸರಕಾರಿ, ಕೆಲ್ಸ ತುಂಬಾ ದುಬಾರಿ, ಎಲ್ಲಿ ಹೋದ್ರು ನಾಳೆ ಬಾ ಅಂತಾರೆ ಅಧಿಕಾರಿ, ನೋಟಿಗಾಗಿ ಬಾಯಿ ತೆರಿತಾರೆ ಭ್ರಷ್ಟಾಚಾರಿ. ಅತ್ಯಾಚಾರಿಗಳಿಗೆ ಇಲ್ಲಿ ಇಲ್ಲ ಯಾವ ಶಿಕ್ಷೆ, ಕಾನೂನಿನವರೆ ನೀಡುತ್ತಾರೆ ಇವರಿಗೆ ಸುರಕ್ಷೆ. ಪ್ರತೀಕ್ಷೆ, ನಿರೀಕ್ಷೆ, ಮಾಡ್ಬೇಕು ಕೇಳ್ಬೇಕು ನ್ಯಾಯಕ್ಕಾಗಿ ಭಿಕ್ಷೆ'

(ಹರೀಶ್ ಕಾಂಬಳೆ ರ್‍ಯಾಪ್ ಹಾಡಿನ ಝಲಕ್)

ಬೆದರಿಕೆ ಕರೆಗಳು

‘ರಾಜನೀತಿ ಹೊಸ ರ್‍ಯಾಪ್ ಹಾಡಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಮಧ್ಯೆ ನನ್ನ ಹಾಡಿನ ‘ಗೋ ಮಾತಾ ಇಲ್ಲಿ ಸೇಫು ಆಗ್ಲಿ ಬಿಡು ರೇಪು' ಎಂಬ ಸಾಲಿಗೆ ಕೆಲವರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ‘ನೀವು ಯೂಟ್ಯೂಬ್‍ನಲ್ಲಿ ಹಾಕಿರುವ ವಿಡಿಯೋ ಡಿಲೀಟ್ ಮಾಡಿ' ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ನಾನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವದಲ್ಲಿ ನಂಬಿಕೆ ಇಟ್ಟಿರುವವನು. ಗೋಹತ್ಯೆ ನಿಷೇಧಕ್ಕೂ ಮೊದಲು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿ ಏಕೆ ತಂದಿಲ್ಲ ಎಂಬುದು ನನ್ನ ಪ್ರಶ್ನೆ'

-ಹರೀಶ್ ಕಾಂಬಳೆ, ರ್‍ಯಾಪ್ ಗಾಯಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X