Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಿಹಾನ್ನಾ, ಗ್ರೆಟಾ ಟ್ವೀಟ್‌ ಬೆನ್ನಲ್ಲೆ...

ರಿಹಾನ್ನಾ, ಗ್ರೆಟಾ ಟ್ವೀಟ್‌ ಬೆನ್ನಲ್ಲೆ ಸರಕಾರವನ್ನು ಬೆಂಬಲಿಸಿ ಅಕ್ಷಯ್‌ ಕುಮಾರ್‌ ಸಹಿತ ಬಾಲಿವುಡ್‌ ತಾರೆಯರ ಟ್ವೀಟ್

"ನಿಮ್ಮೆಲ್ಲರ ಖಾತೆಗೆ 2ರೂ. ಸಂದಾಯವಾಯಿತು" ಎಂದ ನೆಟ್ಟಿಗರು

ವಾರ್ತಾಭಾರತಿವಾರ್ತಾಭಾರತಿ3 Feb 2021 6:20 PM IST
share
ರಿಹಾನ್ನಾ, ಗ್ರೆಟಾ ಟ್ವೀಟ್‌ ಬೆನ್ನಲ್ಲೆ ಸರಕಾರವನ್ನು ಬೆಂಬಲಿಸಿ ಅಕ್ಷಯ್‌ ಕುಮಾರ್‌ ಸಹಿತ ಬಾಲಿವುಡ್‌ ತಾರೆಯರ ಟ್ವೀಟ್

ಹೊಸದಿಲ್ಲಿ : ಪಾಪ್ ತಾರೆ ರಿಹಾನ್ನ, ಪರಿಸರ ಹೊರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸಹಿತ ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ನಂತರ ಈ ಟ್ವೀಟ್‍ಗಳಿಗೆ ಆಕ್ಷೇಪಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ. ಇದೀಗ ಅದರ ಬೆನ್ನಿಗೇ ಕೇಂದ್ರ ಸಚಿವರು ಹಾಗೂ ನಟ ಅಕ್ಷಯ್ ಕುಮಾರ್ ಸಹಿತ ಹಲವು ಬಾಲಿವುಡ್ ಸೆಲೆಬ್ರಿಟಿಗಳು #ಇಂಡಿಯಾಅಗೇನ್ಸ್ಟ್ ಪ್ರೊಪಗಾಂಡ ಹಾಗೂ #ಇಂಡಿಯಾಟುಗೆದರ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲು ಪ್ರಾರಂಭಿಸಿದ್ದಾರೆ. "ಅರ್ಧಸತ್ಯಗಳ ಬದಲು ರೈತರ ಬಿಕ್ಕಟ್ಟನ್ನು ಶಮನಗೊಳಿಸಲು ಸರಕಾರ ನಡೆಸುತ್ತಿರುವ ಪ್ರಯತ್ನಗಳತ್ತ ಜನರು ಗಮನ ಹರಿಸಬೇಕು" ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್‍ಗಳು ʼದುರದೃಷ್ಟಕರʼ ಎಂದು ಬಣ್ಣಿಸಿ ಹಾಗೂ ಅವುಗಳಿಗೆ ಆಕ್ಷೇಪ ಸೂಚಿಸಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆಗೊಳಿಸಿದ ಹೇಳಿಕೆಯನ್ನೂ ಪೋಸ್ಟ್ ಮಾಡಿರುವ ನಟ ಅಕ್ಷಯ್ ಕುಮಾರ್, ಅದರ ಜತೆಗೆ ಮಾಡಿರುವ ಟ್ವೀಟ್‍ನಲ್ಲಿ "ರೈತರು ಈ ದೇಶದ ಅತ್ಯಂತ ಪ್ರಮುಖ ಭಾಗವಾಗಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ನಡೆಸುತ್ತಿರುವ ಪ್ರಯತ್ನಗಳು ನಮ್ಮ ಮುಂದಿವೆ. ಭಿನ್ನಾಭಿಪ್ರಾಯಗಳನ್ನು ಮೂಡಿಸುವವರಿಗೆ ಗಮನ ನೀಡುವ ಬದಲು ಈ ಸಮಸ್ಯೆಗೆ ಸೌಹಾರ್ದಯುತ  ಪರಿಹಾರವನ್ನು ಬೆಂಬಲಿಸೋಣ" ಎಂದು ಬರೆದಿದ್ದಾರೆ.

ಅಕ್ಷಯ್ ಹೊರತಾಗಿ ಚಿತ್ರ ನಿರ್ಮಾಪಕ ಕರಣ್ ಜೋಹರ್, ನಟರಾದ ಅಜಯ್ ದೇವಗನ್ ಹಾಗೂ ಸುನಿಲ್ ಶೆಟ್ಟಿ ಕೂಡ ಟ್ವೀಟ್ ಮಾಡಿ ಸರಕಾರದ ಬೆಂಬಲಕ್ಕೆ ನಿಂತಿದ್ದಾರೆ. "ಭಾರತ ಮತ್ತು ಭಾರತದ ನೀತಿಗಳ ವಿರುದ್ಧ ಸುಳ್ಳು ಪ್ರಚಾರಗಳಿಗೆ ಬಲಿ ಬೀಳಬೇಡಿ. ಯಾವುದೇ ಒಳಜಗಳವಿಲ್ಲದೆ ಈ ಸಮಯ ನಾವು ಒಗ್ಗಟ್ಟಿನಿಂದಿರಬೇಕಿದೆ" ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

"ಈ ಸಮಯ ನಾವು ತಾಳ್ಮೆಯಿಂದಿರುವುದು ಅಗತ್ಯ. ಎಲ್ಲರಿಗೂ ಸಮಾಧಾನ ತರುವಂತಹ ಪರಿಹಾರಕ್ಕಾಗಿ ನಾವು ಶ್ರಮಿಸೋಣ. ರೈತರು ನಮ್ಮ ದೇಶದ ಬೆನ್ನೆಲುಬು, ನಮ್ಮನ್ನು ವಿಭಜಿಸಲು ಯತ್ನಿಸಲು ಯಾರಿಗೂ ಆಸ್ಪದ ನೀಡದೇ ಇರೋಣ" ಎಂದು ಕರಣ್ ಜೋಹರ್ ಬರೆದಿದ್ದಾರೆ.

"ನಾವು ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು, ಅರ್ಧ ಸತ್ಯಕ್ಕಿಂತ ಹೆಚ್ಚು ಅಪಾಯಕಾರಿ ಬೇರೆ ಯಾವುದೂ ಇಲ್ಲ" ಎಂದು ಸುನೀಲ್ ಶೆಟ್ಟಿ ಬರೆದಿದ್ದಾರೆ. ಈ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಹಿತ ಹಲವು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.

"ಅರಾಜಕತೆ ಪ್ರಿಯ ಅಂತಾರಾಷ್ಟ್ರೀಯ ಗ್ಯಾಂಗ್‍ನಿಂದ ನಾವು  ಬೆದರುವುದಿಲ್ಲ. ಗಣರಾಜ್ಯೊತ್ಸವ ದಿನದಂದು ಅವರು ಹೀಗೆ ಹಿಂಸೆ ನಡೆಸಿದರು ಹಾಗೂ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನಿಸಿದರು ಎಂದು ನೋಡಿದ್ದೇವೆ.  ನಾವೀಗ ಒಗ್ಗಟ್ಟಾಗಿ ಈ ಶಕ್ತಿಗಳನ್ನು ಸೋಲಿಸೋಣ" ಎಂದು ಕೇಂದ್ರ ಗೃಹ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಬರೆದಿದ್ದಾರೆ.

ಇದುವರೆಗೂ ರೈತರ ಕುರಿತಾದಂತೆ ಒಂದೂ ಮಾತನ್ನಾಡದ ಭಾರತೀಯ ಚಿತ್ರರಂಗದ ಗಣ್ಯರು ಏಕಾಏಕಿ ಸರಕಾರದ ಪರ ಮಾತನಾಡುತ್ತಿರುವುದು ವ್ಯಾಪಕ ವ್ಯಂಗ್ಯಕ್ಕೆ ಕಾರಣವಾಗಿದೆ. "ಅಕ್ಷಯ್‌ ಕುಮಾರ್‌, ಸುನೀಲ್‌ ಶೆಟ್ಟಿ ಮತ್ತು ಅಜಯ್‌ ದೇವಗನ್‌ ರಿಗೆ ಧನ್ಯವಾದಗಳು, ನಿಮ್ಮ ಖಾತೆಗೆ 2ರೂ. ಜಮೆಯಾಗಿದೆ" ಎಂದು ಸಾಮಾಜಿಕ ಕಾರ್ಯಕರ್ತ ಧ್ರುವ್‌ ರಾಠೀ ಟ್ವೀಟ್‌ ಮಾಡಿದ್ದಾರೆ. "ಇದು ಸರಕಾರದ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಒಂದು ಪ್ರಯತ್ನವಷ್ಟೇ ಎಂದು ಇನ್ನೋರ್ವ ಬಳಕೆದಾರರು ತಿಳಿಸಿದ್ದಾರೆ.

Farmers constitute an extremely important part of our country. And the efforts being undertaken to resolve their issues are evident. Let’s support an amicable resolution, rather than paying attention to anyone creating differences. #IndiaTogether #IndiaAgainstPropaganda https://t.co/LgAn6tIwWp

— Akshay Kumar (@akshaykumar) February 3, 2021

“Before rushing to comment on such matters, we would urge that the facts be ascertained, and a proper understanding of the issues at hand be undertaken.”#IndiaTogether #IndiaAgainstPropagandahttps://t.co/rGJiPvlM4D

— Nirmala Sitharaman (@nsitharaman) February 3, 2021

The reformist legislation relating to agricultural sector were passed by India's parliament after full debate & discussion. The govt has already held 11 rounds of talks with some farmers who expressed their reservations about the laws.#IndiaTogether#IndiaAgainstPropaganda pic.twitter.com/RRdjyQUfLz

— Hardeep Singh Puri (@HardeepSPuri) February 3, 2021

Times are changing. Influencers on the digital media platforms have immense power when they talk to their followers. One must be mindful of that power and the responsibility that comes with it.#IndiaTogether #IndiaAgainstPropaganda #GenerallySaying pic.twitter.com/WCyMDO2vQa

— Vijay Kumar Singh (@Gen_VKSingh) February 3, 2021

We must always take a comprehensive view of things, as there is nothing more dangerous than half truth. #IndiaTogether #IndiaAgainstPropaganda @hiteshjain33 https://t.co/7rNZ683ZAU

— Suniel Shetty (@SunielVShetty) February 3, 2021

We live in turbulent times and the need of the hour is prudence and patience at every turn. Let us together, make every effort we can to find solutions that work for everyone—our farmers are the backbone of India. Let us not let anyone divide us. #IndiaTogether

— Karan Johar (@karanjohar) February 3, 2021

Don’t fall for any false propaganda against India or Indian policies. Its important to stand united at this hour w/o any infighting#IndiaTogether #IndiaAgainstPropaganda

— Ajay Devgn (@ajaydevgn) February 3, 2021

Thank you Akshay Kumar, Sunil Shetty, Ajay Devgn for your co-ordinated tweets.

Your A/C has been credited with ₹2 /-

Ref Number: PHHATIPADIHAI

N̶a̶t̶i̶o̶n̶ BJP thanks you for your support! https://t.co/rUzAwI5X1P

— Dhruv Rathee (@dhruv_rathee) February 3, 2021

So Akshay Kumar and Ajay Devgun are just a refined version of Kangana Ranaut.

— Sakshi Joshi (@sakshijoshii) February 3, 2021

Spineless Akshay kumar today #shameonbollywood pic.twitter.com/B01o6TqmKp

— Ex Bhakt (@tadipaar_hun) February 3, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X