ಕುಟುಂಬದಿಂದ ತ್ಯಜಿಸಲ್ಪಟ್ಟ ಕೇರಳದ ಬಾಲನ್ ರನ್ನು ಮತ್ತೆ ಕುಟುಂಬದೊಂದಿಗೆ ಒಂದುಗೂಡಿಸಿದ ಟೀಮ್ ಬಿ ಹ್ಯೂಮನ್
ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ವ್ಯಕ್ತಿ

ಮಂಗಳೂರು : ಕುಟುಂಬದಿಂದ ತ್ಯಜಿಸಲ್ಪಟ್ಟು, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ 69 ವರ್ಷದ ಕೇರಳದ ಬಾಲನ್ ಅವರನ್ನು 'ಟೀಮ್ ಬಿ ಹ್ಯೂಮನ್' ಮತ್ತೆ ಕುಟುಂಬದೊಂದಿಗೆ ಒಂದುಗೂಡಿಸಿದ ಘಟನೆ ನಡೆದಿದೆ.
ಪಯ್ಯನ್ನೂರು ಕಾವಂಚಲ್ ಎಂಬಲ್ಲಿನ 69 ವರ್ಷ ಪ್ರಾಯದ ದಿನ ಕೂಲಿ ಕಾರ್ಮಿಕ ಬಾಲನ್ ಅವರ ಕಥೆ. ಬಾಲನ್ ತನ್ನ ಪತ್ನಿ ಪಾರ್ವತಿ ಮತ್ತು ಪುತ್ರಿ ಶೀಬಾ ಅವರ ಜೊತೆಗೆ ಜೀವಿಸುತ್ತಿದ್ದರು. ಒಂದು ದಿನ ತನ್ನ ಕುಟುಂಬದೊಂದಿಗೆ ಜಗಳ ಮಾಡಿ ಬಾಲನ್ ಕೇರಳದಿಂದ ಮಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದರು. ಅದು ಕೊರೋನದ ಲಾಕ್ ಡೌನ್ ಸಮಯ. ಮಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಬಾಲನ್ ರಿಗೆ ಊರಿಗೆ ಹಿಂತಿರುಗಲು ವಾಹನದ ವ್ಯವಸ್ಥೆ ಇರಲಿಲ್ಲ ಮತ್ತು ಖರ್ಚಿಗೆ ಕೈಯಲ್ಲಿ ಹಣವೂ ಇರಲಿಲ್ಲ. ಹೀಗಿರುವಾಗ ಒಂದು ದಿನ ಬಾಲನ್ ರಸ್ತೆ ಕ್ರಾಸ್ ಮಾಡುತ್ತಿರುವ ಸಂದರ್ಭ ಅಪಘಾತಕ್ಕೊಳಗಾಗಿ ಕಾಲನ್ನು ಕಳೆದುಕೊಂಡರು. ಶಸ್ತ್ರ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಅವರು ಹಂಪನ್ ಕಟ್ಟೆಯ ಮಸ್ಜಿದುನ್ನೂರ್ ಸಮೀಪದ ಫುಟ್ ಪಾತಲ್ಲಿ ಆಶ್ರಯ ಪಡೆಯುತ್ತಿದ್ದರು.
ಇವರ ಅಸಹಾಯಕ ಪರಿಸ್ಥಿತಿಯನ್ನು ಕಂಡ ಮಸ್ಜಿದುನ್ನೂರ್ ಖತೀಬ್ ಪ್ರತಿದಿನ ಅವರಿಗೆ ಆಹಾರವನ್ನು ನೀಡುತ್ತಿದ್ದರು. ಅವರ ಈ ದಾರುಣ ಸ್ಥಿತಿಯನ್ನು 'ಟೀಮ್ ಬಿ ಹ್ಯೂಮನ್' ಗೆ ತಿಳಿಸುತ್ತಾರೆ. ತಕ್ಷಣ ಸ್ಪಂದಿಸಿದ ಟೀಮ್ ಬಿ ಹ್ಯೂಮನ್ ಬಾಲನ್ ರನ್ನು ಅವರ ಆಶ್ರಯ ಕೇಂದ್ರಕ್ಕೆ ವರ್ಗಾಯಿಸಿ ಎಲ್ಲಾ ಅಗತ್ಯ ಆರೈಕೆಗಳನ್ನು ಮಾಡುತ್ತಾರೆ. ಬಾಲನ್ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಾರೆ.
ಮೊದಲಿಗೆ ಕುಟುಂಬದವರು ಬಾಲನ್ ರನ್ನು ಸ್ವೀಕರಿಸಲು ನಿರಾಕರಿಸಿದರು ಎನ್ನಲಾಗಿದ್ದು, ನಂತರ ಟೀಮ್ ಬಿ ಹ್ಯೂಮನ್ ಅಲ್ಲಿಯ ಪೊಲೀಸ್ ಇನ್ಸ್ ಪೆಕ್ಟರನ್ನು ಮತ್ತು ನೆರೆಕರೆಯವರನ್ನು ಕಂಡು ಬಾಲನ್ ಮನೆಯವರಿಗೆ ಮನವರಿಕೆ ಮಾಡಿಸುವಂತೆ ವಿನಂತಿಸುತ್ತಾರೆ. ಈ ಎಲ್ಲಾ ಪ್ರಯತ್ನಗಳ ಫಲಶೃತಿಯಾಗಿ ಒಂದು ತಿಂಗಳ ನಂತರ ಬಾಲನ್ ಕುಟುಂಬ ಅವರನ್ನು ಸ್ವೀಕರಿಸಲು ಒಪ್ಪಿಕೊಳ್ಳುತ್ತದೆ. ಕೊನೆಗೂ ಬಾಲನ್ ತಮ್ಮ ಕುಟುಂಬವನ್ನು ಸೇರಿಕೊಂಡರು. ಇಂದರಿಂದ ಟೀಮ್ ಬಿ ಹ್ಯೂಮನ್ ನ ಪ್ರಯತ್ನ ಸಾರ್ಥಕವಾಯಿತು
ಟೀಮ್ ಬಿ ಹ್ಯೂಮನ್ : https://b-human.in, https://www.facebook.com/B.Human88
Contact: +91 9880232388, +91 9880012388, phonepe / BHIM: 9880232388, GOOGLEPAY/PAYTM/WhatsAppPAY: 9880232388@YBL
B HUMAN
AC.No-510101006627935
BANK: UNION BANK OF INDIA
IFSC: UBIN0900788
BRANCH: KANKANADY, MANGALORE






.jpeg)
.jpeg)

.jpeg)
.jpeg)
.jpeg)


