Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಪ್ಯಾನ್ ಇಂಡಿಯಾ ಚಿತ್ರವೆಂದು ನಮ್ಮ ಸೊಗಡು...

ಪ್ಯಾನ್ ಇಂಡಿಯಾ ಚಿತ್ರವೆಂದು ನಮ್ಮ ಸೊಗಡು ಮರೆಯಬಾರದು: ಜೀತು ಜೋಸೆಫ್

ಸಂದರ್ಶನ: ಶಶಿಕರ ಪಾತೂರುಸಂದರ್ಶನ: ಶಶಿಕರ ಪಾತೂರು14 Feb 2021 12:10 AM IST
share
ಪ್ಯಾನ್ ಇಂಡಿಯಾ ಚಿತ್ರವೆಂದು ನಮ್ಮ ಸೊಗಡು ಮರೆಯಬಾರದು: ಜೀತು ಜೋಸೆಫ್

ಮಲಯಾಳಂನ ‘ದೃಶ್ಯಂ’ ಸಿನೆಮಾ ಹಲವಾರು ಭಾಷೆಗಳಿಗೆ ರಿಮೇಕ್ ಆಗಿದೆ. ಕನ್ನಡದಲ್ಲಿಯೂ ‘ದೃಶ್ಯ’ ಹೆಸರಿನಲ್ಲಿ ರಿಮೇಕ್ ಆಗಿ ಯಶಸ್ಸಾಗಿತ್ತು. ಈ ವಾರ ಮಲಯಾಳಂ ‘ದೃಶ್ಯಂ’ ಸಿನೆಮಾದ ಎರಡನೇ ಭಾಗ ಅಮೆಝಾನ್ ಮೂಲಕ ಬಿಡುಗಡೆಯಾಗುತ್ತಿದೆ. ‘ದೃಶ್ಯಂ’ ಬಿಡುಗಡೆಯಾದಾಗ ಕೇರಳದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಸಿನೆಮಾ ಎನ್ನುವ ದಾಖಲೆ ಮೂಡಿಸಿತ್ತು. ಅಂತಹದ್ದೊಂದು ಸಿನೆಮಾದ ಎರಡನೇ ಭಾಗ ಎನ್ನುವ ಕಾರಣಕ್ಕೆ ಎಲ್ಲೆಡೆಯೂ ಚಿತ್ರದ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಹಾಗಾಗಿ ಎಲ್ಲ ಭಾಷೆಯ ಎಲ್ಲ ವರ್ಗದ ಜನರನ್ನು ತೃಪ್ತಿಪಡಿಸಬೇಕು ಎನ್ನುವ ಪ್ರಯತ್ನ ನಿರ್ದೇಶಕರಲ್ಲಿದೆ ಎಂದು ನೀವು ಅಂದುಕೊಂಡರೆ ಅದು ತಪ್ಪು! ಅವರದೇನಿದ್ದರೂ ಕತೆಗೆ ನ್ಯಾಯ ಸಲ್ಲಿಸುವ ದೃಶ್ಯಗಳ ಸಂಯೋಜನೆಯಂತೆ. ಇಂತಹದ್ದೊಂದು ಆಸಕ್ತಿಕರವಾದ ಉತ್ತರವನ್ನು ಸ್ವತಃ ನಿರ್ದೇಶಕ ಜೀತು ಜೋಸೆಫ್ ಅವರು ‘ವಾರ್ತಾಭಾರತಿ’ಗೆ ನೀಡಿದ್ದಾರೆ. ನಮ್ಮಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ಎನ್ನುವ ಕಾರಣಕ್ಕಾಗಿ ಎಲ್ಲ ಭಾಷೆಗಳ ಮಂದಿಯನ್ನು ಗಮನದಲ್ಲಿರಿಸಿಕೊಂಡು ಚಿತ್ರ ಮಾಡುವವರು ಹೇಗೆ ಕನ್ನಡದ ಸೊಗಡನ್ನು ಮರೆಯಬಾರದು ಎನ್ನುವುದಕ್ಕೆ ಉತ್ತರ ನೀಡುವಂತಹ ಈ ಸಂದರ್ಶನದಲ್ಲಿ ಚಿತ್ರದ ಕುರಿತಾದ ಒಂದಷ್ಟು ವಿಶೇಷ ಮಾಹಿತಿಗಳಿವೆ.


ವಾ.ಭಾ.: ‘ದೃಶ್ಯಂ’ ಸಿನೆಮಾ ಎರಡನೇ ಭಾಗ ಮಾಡಬೇಕು ಅನಿಸಿದ್ದೇಕೆ?

ಜೀ.ಜೋ.: ನಿಜ ಹೇಳಬೇಕೆಂದರೆ ಅಂಥದೊಂದು ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಹಲವಾರು ಮಂದಿ ತಾವು ಅದರ ಎರಡನೇ ಭಾಗ ಮಾಡಲು ಕತೆ ಬರೆಯುವುದಾಗಿ ಹೇಳುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ನನ್ನಲ್ಲಿಯೂ ಅದಕ್ಕೊಂದು ಎರಡನೇ ಭಾಗದ ಕತೆ ಮೂಡುತ್ತಾ ಬಂತು. ಮಾತ್ರವಲ್ಲ, ಮುಚ್ಚಿರುವ ಚಿತ್ರಮಂದಿರಕ್ಕೆ ಮತ್ತೆ ಪ್ರೇಕ್ಷಕರನ್ನು ಆಕರ್ಷಿಸಲು ಒಂದು ಕುತೂಹಲಕಾರಿ ಯಶಸ್ವಿ ಚಿತ್ರದ ಎರಡನೇ ಭಾಗಕ್ಕೆ ಸಾಧ್ಯ ಎಂದು ಯೋಜನೆ ಹಾಕಿದ್ದೆ. ಆದರೆ ಸಿನೆಮಾ ಪೂರ್ತಿಯಾದರೂ ಚಿತ್ರಮಂದಿರಗಳು ತೆರೆದಿರದ ಕಾರಣ ಅನಿವಾರ್ಯವಾಗಿ ಒಟಿಟಿ ಮೂಲಕ ತೆರೆಗೆ ಬರುತ್ತಿದೆ.

ವಾ.ಭಾ.: ಎರಡನೇ ಭಾಗದಲ್ಲಿ ಆಕರ್ಷಕವೆನಿಸಬಹುದಾದ ಪ್ರಮುಖ ಅಂಶಗಳೇನು?
 ಜೀ.ಜೋ.: ಇದರಲ್ಲಿ ಕ್ರೈಮ್ ಇರುವುದಿಲ್ಲ. ಇದು ಸಂಪೂರ್ಣವಾಗಿ ಕುಟುಂಬಕ್ಕೆ ಸಂಬಂಧಿಸಿದ ಕತೆ. ಆದರೆ ‘ದೃಶ್ಯಂ’ನಲ್ಲಿ ನಡೆದ ಕೆಲವು ಘಟನೆಗಳು ಹೇಗೆ ಆರು ವರ್ಷಗಳ ಬಳಿಕ ಕೂಡ ಆ ಕುಟುಂಬವನ್ನು ಕಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ನಾಯಕನ ಪಾತ್ರ ಇಷ್ಟು ವರ್ಷಗಳಲ್ಲಿ ಶ್ರೀಮಂತಗೊಂಡಿರುತ್ತದೆ. ಕೇಬಲ್ ಟಿವಿ ಸರ್ವಿಸ್ ಮಾಡುತ್ತಿದ್ದ ಆತ ಇದೀಗ ಥಿಯೇಟರ್ ಮಾಲಕ ಆಗಿರುತ್ತಾನೆ. ಶ್ರೀಮಂತಿಕೆ ಆತನಲ್ಲಿನ ಆತ್ಮವಿಶ್ವಾಸ ಹೆಚ್ಚು ಮಾಡಿರುತ್ತದೆ. ಆದರೆ ಈ ಹಿಂದೆ ಆತನ ಬೆಂಬಲಕ್ಕೆ ನಿಂತಿದ್ದ ಊರಿನ ಜನತೆಗೆ ಆತನ ಶ್ರೀಮಂತಿಕೆ ಮತ್ತು ಓವರ್ ಕಾನ್ಫಿಡೆನ್ಸ್ ಇರುವ ಆತನ ಸ್ವಭಾವ ಇಷ್ಟವಾಗುವುದಿಲ್ಲ. ಮನೆಯಲ್ಲಿ ಪತ್ನಿ ಮತ್ತು ಮದುವೆಯ ವಯಸ್ಸಿಗೆ ಬಂದಿರುವ ಪುತ್ರಿಗೆ ಕೂಡ ಹಳೆಯ ಘಟನೆ ಕಾಡುವಂಥ ಸಂದರ್ಭ ಎದುರಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಕುತೂಹಲಕ್ಕಾಗಿ ಚಿತ್ರ ನೋಡಬಹುದು.

ವಾ.ಭಾ.: ಈ ಎರಡನೇ ಭಾಗವನ್ನು ನೀವು ಕನ್ನಡದಲ್ಲಿ ನಿರ್ದೇಶಿಸುವ ಸಾಧ್ಯತೆ ಇದೆಯೇ?
ಜೀ.ಜೋ.: ನನಗೆ ಸಿನೆಮಾ ರಿಮೇಕ್ ಮಾಡುವುದು ಎಂದರೆ ಅಷ್ಟು ಆಸಕ್ತಿಕರ ವಿಚಾರವಲ್ಲ. ಆದರೂ ನಾನು ದೃಶ್ಯ ಸಿನೆಮಾವನ್ನು ತಮಿಳಲ್ಲಿಯೂ ನಿರ್ದೇಶಿಸಿದ್ದೆ. ಅಲ್ಲಿ ಕಮಲಹಾಸನ್ ನಾಯಕರಾಗಿದ್ದರು. ಹಾಗಾಗಿ ತಮಿಳು ಮತ್ತು ಹಿಂದಿ ರಿಮೇಕ್‌ಗಳನ್ನು ಮಾತ್ರ ನೋಡಿದ್ದೇನೆ. ಯಾಕೆಂದರೆ ಆ ಎರಡು ಭಾಷೆಗಳು ನನಗೆ ಅರ್ಥವಾಗುತ್ತವೆ. ಆದರೆ ಹಿಂದಿ ಚಿತ್ರದ ನಿರ್ದೇಶಕ ನಾನಲ್ಲ. ಕನ್ನಡದಲ್ಲಿಯೂ ‘ದೃಶ್ಯ’ ನಿರ್ದೇಶಿಸಿದ್ದು ನಾನಲ್ಲ. ಮಾತ್ರವಲ್ಲ, ಕನ್ನಡ, ತೆಲುಗು ಭಾಷೆಗಳು ಗೊತ್ತಿರದ ಕಾರಣ ಆ ರಿಮೇಕ್ ಸಿನೆಮಾಗಳನ್ನು ನಾನು ನೋಡಿಲ್ಲ. ಆದರೆ ಕನ್ನಡ ರಿಮೇಕ್‌ನಲ್ಲಿ ರವಿಚಂದ್ರನ್ ಅವರು ನಟಿಸಿದ್ದಾರೆ ಎನ್ನುವುದು ನನಗೆ ಗೊತ್ತು. ಮೊದಲು ‘ದೃಶ್ಯಂ 2’ ಮಲಯಾಳಂನಲ್ಲಿ ಬಿಡುಗಡೆಯಾಗಲಿ. ಬಳಿಕ ನನ್ನ ಮತ್ತೊಂದು ಪ್ರಾಜೆಕ್ಟ್ ಮೋಹನ್‌ಲಾಲ್ ಅವರ ಜೊತೆಗೆ ಮುಂದುವರಿದಿದೆ. ಅದು ಮುಗಿಯಬೇಕು. ಹಾಗೆ ಒಪ್ಪಿಕೊಂಡಿರುವ ಕೆಲಸಗಳು ಮುಗಿದ ಮೇಲೆ ಅವಕಾಶ ಮತ್ತು ಸಂದರ್ಭ ಎರಡೂ ಕೈಗೂಡಿ ಬಂದರೆ ಖಂಡಿತವಾಗಿಯೂ ಕನ್ನಡ ಸಿನೆಮಾ ಮಾಡುವುದು ನನಗೆ ಖುಷಿ ವಿಚಾರವೇ.

 ವಾ.ಭಾ.: ಇದೀಗ ನಿಮ್ಮ ಸಿನೆಮಾದತ್ತ ಎಲ್ಲ ಭಾಷೆಯವರ ಕಣ್ಣು ಬಿದ್ದಿದೆ. ಹಾಗಾಗಿ ಹಿಂದಿನ ಗ್ರಾಮೀಣ ಸೊಗಡು ಬಿಟ್ಟು, ಹೆಚ್ಚು ಮಂದಿಗೆ ತಲುಪಿಸುವಂಥ ದೃಶ್ಯದತ್ತ ಪ್ರಯತ್ನ ಮಾಡಿದ್ದೀರ?
  ಜೀ.ಜೋ.: ಖಂಡಿತವಾಗಿ ಇಲ್ಲ! ಯಾಕೆಂದರೆ ನಾನು ಹಾಗೆ ಮಾಡಿದರೆ ಅದು ನಾಯಕನ ಪಾತ್ರಕ್ಕೆ ಮಾಡುವ ಮೋಸವಾದೀತು. ದೃಶ್ಯದಲ್ಲಿ ಇದ್ದ ಗ್ರಾಮೀಣ ಸೊಗಡೇ ಎಲ್ಲ ಭಾಷೆಯ ಮಂದಿಗೂ ಇಷ್ಟವಾಗಿತ್ತು. ಉದಾಹರಣೆಗೆ ಚೀನಾದಂತಹ ವಿದೇಶದ ಮಂದಿ ಕೂಡ ನಮ್ಮಿಂದ ಚಿತ್ರದ ರೈಟ್ಸ್ ಪಡೆದು ರಿಮೇಕ್ ಮಾಡಿದ್ದರು. ನಾವು ಎಲ್ಲಿಯ ಕತೆ ಹೇಳುತ್ತೇವೆಯೋ ಅಲ್ಲಿನ ಸೊಗಡನ್ನು ನೈಜವಾಗಿಯೇ ತೆರೆದಿಟ್ಟರೆ ಮಾತ್ರ ಅದು ಕತೆಗೆ ಸಲ್ಲಿಸುವ ನ್ಯಾಯವಾಗುತ್ತದೆ. ಪ್ಯಾನ್ ಇಂಡಿಯಾ ಜನತೆ ನೋಡುತ್ತಾರೆ ಎನ್ನುವ ಕಾರಣಕ್ಕೆ ಇಂತಹ ಚಿತ್ರದಲ್ಲಿ ಅವರಿಗೆ ತಕ್ಕಂತೆ ಸಂದರ್ಭಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮೊದಲು ನಾವು ನಮ್ಮ ಕತೆಗೆ ಬದ್ಧತೆಯಿಂದ ಕೆಲಸ ಮಾಡಬೇಕು. ಆ ಸಿನ್ಸಿಯಾರಿಟಿಯೇ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅದು ನಮ್ಮ ಸಿನೆಮಾದ ಮೂಲಕ ನಮ್ಮ ಆಚಾರ, ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇತರ ಭಾಷಿಕರನ್ನು ಕೂಡ ಪ್ರೇರೇಪಿಸುತ್ತದೆ.

share
ಸಂದರ್ಶನ: ಶಶಿಕರ ಪಾತೂರು
ಸಂದರ್ಶನ: ಶಶಿಕರ ಪಾತೂರು
Next Story
X