ಮಂಗಳೂರು: ಕೈಲಾಶ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ಮಂಗಳೂರು, ಫೆ.14: ಭಾರ್ಗವಿ ಬಿಲ್ಡರ್ಸ್ ಮತ್ತು ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ನಗರದ ಕೊಟ್ಟಾರ ಜಂಕ್ಷನ್ ನಲ್ಲಿ ನಿರ್ಮಾಣಗೊಳ್ಳಲಿರುವ 'ಕೈಲಾಶ್ ವಸತಿ ಸಮುಚ್ಚಯ'ಕ್ಕೆ ರವಿವಾರ ಶಿಲಾನ್ಯಾಸ ನೆರವೇರಿತು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ರವೀಂದ್ರ ಪೈ, ದೇಶದ ಜಿಡಿಪಿಗೆ ಕೃಷಿ ಕ್ಷೇತ್ರದ ಬಳಿಕ ದೊಡ್ಡ ಕೊಡುಗೆ ನೀಡುತ್ತಿರುವ ಕ್ಷೇತ್ರ ರಿಯಲ್ ಎಸ್ಟೇಟ್ ಉದ್ಯಮ. ದೇಶದ ಜಿಡಿಪಿಗೆ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರ ಪ್ರತಿವರ್ಷ ಶೇ.14ರಷ್ಟು ಕೊಡುಗೆ ನೀಡುತ್ತಿದೆ. ಅಂದರೆ ಕೃಷಿ ಕ್ಷೇತ್ರವನ್ನು ಬಿಟ್ಟರೆ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಈ ಕ್ಷೇತ್ರದಿಂದ ಆಗುತ್ತಿದೆ. ವಿದೇಶಿ ವಿನಿಮಯದ ಕೊಡುಗೆಯೂ ದೊರೆಯುತ್ತಿದೆ. ಆದುದರಿಂದ ಕೊರೋನ ಸಂಕಷ್ಟದ ಬಳಿಕವೂ ಮುಂದಿನ ದಿನಗಳಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರ ದೇಶದ ಪ್ರಮುಖ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದರು.
ಕೈಲಾಶ್ ವಸತಿ ಸಮುಚ್ಚಯ ನಗರಕ್ಕೆ ಒಂದು ಕೊಡುಗೆಯಾಗಿದೆ ಎಂದು ಅವರು ಶುಭ ಹಾರೈಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಕಾರ್ಪೊರೇಟರ್ ಶಶಿಧರ ಹೆಗ್ಡೆ, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾತನಾಡಿ ಯೋಜನೆಗೆ ಶುಭ ಹಾರೈಸಿದರು.
ನಿರ್ಮಾಣ್ ಹೋಮ್ಸ್ ನ ಪಾಲುದಾರರಾದ ಗುರುದತ್ತ ಶೆಣೈ ಮಾತನಾಡಿ, ಕೈಲಾಶ್ ವಸತಿ ಸಮುಚ್ಚಯ ಯೋಜನೆಯು ಮಿನಿ ಥಿಯೇಟರ್, ಹವಾನಿಯಂತ್ರಿತ ಜಿಮ್ನೇಶಿಯಂ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ಮಕ್ಕಳ ಆಟದ ತಾಣ, ಗ್ರಂಥಾಲಯ, ಯೋಗ ಪೆವಿಲಿಯನ್, ವಿಶಾಲವಾದ ಡಬಲ್ ಹೈಟ್ ಹೊಂದಿರುವ ವಿಸಿಟರ್ಸ್ ಲಾಬಿ, ಇಂಟರ್ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್, ಸೋಲಾರ್ ಪ್ಯಾನೆಲ್ಸ್, ರೆಗ್ಯುಲೇಟೆಡ್ ಗ್ಯಾಸ್ ಸಂಪರ್ಕ, 2 ಸ್ವಯಂಚಾಲಿತ ಲಿಫ್ಟ್ ಕಾರು ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆಯನ್ನು ಹೊಂದಿರಲಿದೆ ಎಂದರು.
ನೂತನ ವಸತಿ ಸಮುಚ್ಚಯದಲ್ಲಿ 1,105 ಚ. ಅ. ಮತ್ತು 1,200 ಚ. ಅಡಿ ವಿಸ್ತೀರ್ಣದ 2 ಬಿಎಚ್ಕೆ ಅಪಾರ್ಟ್ಮೆಂಟ್ಗಳು, 1,400 ಚ.ಅ. ಮತ್ತು 1,950 ಚದರ ಅಡಿಯ 3 ಬಿಎಚ್ಕೆ ಅಪಾರ್ಟ್ಮೆಂಟ್ಗಳು ಹಾಗೂ ವಸತಿ ಸಂಕೀರ್ಣದ 13 ಮತ್ತು 14ನೇ ಮಹಡಿಯಲ್ಲಿ 2,200 ಚದರ ಅಡಿ ಮತ್ತು 2,720 ಚ. ಅಡಿಯ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ಗಳು ಲಭ್ಯವಿವೆ ಎಂದು ಗುರುದತ್ತ ಶೆಣೈ ತಿಳಿಸಿದ್ದಾರೆ.
ಒಂದು ಎಕರೆ 9 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗುವ ಕೈಲಾಶ್ ವಸತಿ ಸಮುಚ್ಚಯದಲ್ಲಿ ಉನ್ನತ ಜೀವನ ಶೈಲಿಗೆ ಪೂರಕವಾದ ಲಕ್ಸುರಿ ಅಪಾರ್ಟ್ಮೆಂಟ್ಗಳು 36 ತಿಂಗಳಲ್ಲಿ ನಿರ್ಮಾಣಗೊಂಡು 2023ರ ಡಿಸೆಂಬರ್ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿವೆ. ಎಂಫಾರ್ ಕನ್ಸ್ಟ್ರಕ್ಷನ್ಸ್ ಸಮುಚ್ಚಯದ ಕಾಂಟ್ರಾಕ್ಟರ್ ಆಗಿದ್ದು, ಮೆಸರ್ಸ್ ನಾಯಕ್ ಪೈ ಆ್ಯಂಡ್ ಅಸೋಸಿಯೇಟ್ಸ್ನ ಸುರೇಶ್ ಪೈ ಯೋಜನೆಯ ಆರ್ಕಿಟೆಕ್ಟ್. ಬಾಬು ನಾರಾಯಣ್ ಸ್ಟ್ರಕ್ಚರಲ್ ಇಂಜಿನಿಯರ್ ಆಗಿದ್ದಾರೆ ಎಂದರು.
ನಿರ್ಮಾಣ್ ಹೋಮ್ ಸಂಸ್ಥೆಯು ‘ಎಫರ್ಡೇಬಲ್ ಲಕ್ಸುರಿ’ ಹಾಗೂ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು ‘ಹೈ ಲಿವಿಂಗ್ ಲಕ್ಷುರಿ ಹೋಮ್ಸ್’ ಎಂಬ ಧ್ಯೇಯದೊಂದಿಗೆ ಅತ್ಯಂತ ಸುಸಜ್ಜಿತ ಅಪಾರ್ಟ್ ಮೆಂಟ್ಗಳನ್ನು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ನೀಡಲಿದೆ ಎಂದು ಹೇಳಿದರು.
ಕೈಲಾಶ್ ವಸತಿ ಸಮುಚ್ಚಯದ ತಾರಸಿಯಲ್ಲಿ ಅತ್ಯಂತ ಸುಸಜ್ಜಿತ ಈಜುಕೊಳವನ್ನು ಸಕಲ ಸುರಕ್ಷಾ ವ್ಯವಸ್ಥೆಗಳೊಂದಿಗೆ ನಿರ್ಮಾಣ ಮಾಡಲಾಗುವುದು. ಇದು ಈ ವಸತಿ ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿದೆ. ಅಪಾರ್ಟ್ಮೆಂಟ್ 15 ಅಂತಸ್ತುಗಳನ್ನು ಹೊಂದಿರಲಿದ್ದು, 131 ಅಪಾರ್ಟ್ ಮೆಂಟ್ಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಾಣ ಮಾಡಲಾಗುವುದು. ಪ್ರೀ ಲಾಂಚ್ ಆಫರ್ ಆಗಿ 2 ಬಿಎಚ್ಕೆ ಫ್ಲ್ಯಾಟ್ ಕೇವಲ 50 ಲಕ್ಷ ರೂ.ಗೆ ಎಲ್ಲ ರೀತಿಯ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ ಎಂದವರು ಹೇಳಿದರು.
ಕೈಲಾಶ್ ವಸತಿ ಸಮುಚ್ಚಯದ ಬ್ರಾಂಡ್ ಅಂಬಾಸಿಡರ್ ಹಾಗೂ ತುಳು ಚಿತ್ರನಟ ಅರವಿಂದ ಬೋಳಾರ್, ಭಾರ್ಗವಿ ಬಿಲ್ಡರ್ಸ್ ನ ಪಾಲುದಾರರಾದ ಭಾರ್ಗವಿ, ಮಂಗಲ್, ಮಹೇಶ್, ಆರ್ಕಿಟೆಕ್ಟ್ ಸುರೇಶ್ ಪೈ, ಇಂಜಿನಿಯರ್ ಬಾಬು ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.
ಭಾರ್ಗವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಪಾಲುದಾರರಾದ ಭಾಸ್ಕರ ಗಡಿಯಾರ್ ಸ್ವಾಗತಿಸಿದರು. ಭೂ ಮಾಲಕರು ಮತ್ತು ಯೋಜನೆಯ ಸಹ ಪ್ರಾಯೋಜಕರಾದ ಶ್ರೀವತ್ಸ ಕೊಜಪಾಡಿ ವಂದಿಸಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಶಿಲಾನ್ಯಾಸಕ್ಕೆ ಮೊದಲು ಬೆಳಗ್ಗೆ 6:15ಕ್ಕೆ ಭೂಮಿಪೂಜೆ ನೆರವೇರಿತು.
ಕೈಲಾಶ್ ಅಪಾರ್ಟ್ಮೆಂಟ್ನ ಬುಕ್ಕಿಂಗ್ಗಾಗಿ ಗ್ರಾಹಕರು ನಗರದ ಕಾಪಿಕಾಡ್ನ ಸುಪ್ರಭಾತ್ ಬಿಲ್ಡಿಂಗ್ ನಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.nirmaanhomes.comಗೆ ಲಾಗಾನ್ ಮಾಡಬಹುದು ಅಥವಾ ಮೊ.ಸಂ.: 9611730555/7090933900ಗೆ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.






.gif)
.gif)
.gif)
.gif)
.gif)
.gif)
.gif)
.gif)
.gif)
.gif)

