Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದ ರೈತರ ಪ್ರತಿಭಟನೆಯ ಪರ...

ಭಾರತದ ರೈತರ ಪ್ರತಿಭಟನೆಯ ಪರ ಧ್ವನಿಯೆತ್ತಿದ ಅಮೆರಿಕದ ರೈತ ಸಂಘಟನೆಗಳು

‘ನಮ್ಮಲ್ಲಿಯೂ 40 ವರ್ಷಗಳ ಹಿಂದೆ ಹೀಗೆಯೇ ಆಗಿತ್ತು’

ವಾರ್ತಾಭಾರತಿವಾರ್ತಾಭಾರತಿ21 Feb 2021 10:05 PM IST
share
ಭಾರತದ ರೈತರ ಪ್ರತಿಭಟನೆಯ ಪರ ಧ್ವನಿಯೆತ್ತಿದ ಅಮೆರಿಕದ ರೈತ ಸಂಘಟನೆಗಳು

 ಹೊಸದಿಲ್ಲಿ,ಫೆ.21: ಅಮೆರಿಕದ ರೈತರಿಗೆ ಸರಿಪಡಿಸಲಾಗದಷ್ಟು ಹಾನಿಗೆ ಕಾರಣವಾಗಿದ್ದ ರೇಗನ್ ಆಡಳಿತದ ಖಂಡನೀಯ ನಿದರ್ಶನಗಳನ್ನು ಉಲ್ಲೇಖಿಸಿರುವ ಆ ರಾಷ್ಟ್ರದ 87 ರೈತ ಒಕ್ಕೂಟಗಳು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತಿಯ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

 
 ತೀಕ್ಷ್ಣ ಪತ್ರವೊಂದರಲ್ಲಿ ಈ ಒಕ್ಕೂಟಗಳು ಭಾರತ ಮತ್ತು ಅಮೆರಿಕದಲ್ಲಿ ನವ ಉದಾರೀಕರಣದ ಶಕ್ತಿಗಳು ಕೃಷಿಯ ಮೇಲೆ ಬೀರಿರುವ ದುಷ್ಪರಿಣಾಮಗಳ ನಡುವಿನ ನಿಕಟ ಸಾಮ್ಯತೆಗಳನ್ನು ಬೆಟ್ಟು ಮಾಡಿವೆ. ‘ಕೃಷಿಯು ನಿಧಾನ ವಿಷವಾಗಿ ಪರಿಣಮಿಸಿದೆ,ಇಲ್ಲಿ ಹೋರಾಟ ಮಾಡುತ್ತಲೇ ಸಾಯುವುದೇ ಒಳ್ಳೆಯದು ’ಎಂಬ ಘಾಝಿಪುರದಲ್ಲಿ ಪ್ರತಿಭಟನಾನಿರತ ರೈತ ರಿಂಘು ಯಶಪಾಲ್ ಅವರ ಹೇಳಿಕೆಯ ಉಲ್ಲೇಖದೊಡನೆ ಅಮೆರಿಕದ ಕಾರ್ಮಿಕ ಒಕ್ಕೂಟಗಳ ಪತ್ರವು ಆರಂಭಗೊಂಡಿದೆ. ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇತಿಹಾಸದಲ್ಲಿಯ ಅತ್ಯಂತ ಪ್ರಬಲ ಪ್ರತಿಭಟನೆಗಳಲ್ಲೊಂದಾಗಿದೆ ಎಂದು ಈ ಒಕ್ಕೂಟಗಳು ಬಣ್ಣಿಸಿವೆ.

 ಈಗ ಕೆಲವೇ ಬೆಳೆಗಳಿಗೆ ದೊರೆಯುತ್ತಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಎಲ್ಲ ಬೆಳೆಗಳಿಗೆ ವಿಸ್ತರಿಸಬೇಕು ಎನ್ನುವುದು ಪ್ರತಿಭಟನಾನಿರತ ರೈತರ ಪ್ರಮುಖ ಬೇಡಿಕೆಯಾಗಿದೆ ಎಂದು ಬೆಟ್ಟು ಮಾಡಿರುವ ಪತ್ರವು,ಅದು ಇತರ ವ್ಯಾಪಾರಿಗಳಿಗೆ ಮುಖ್ಯ ಬೆಲೆ ಸಂಕೇತವಾಗಿದೆ ಮತ್ತು ರೈತರು ತಮ್ಮ ಬೆಳೆಗಳಿಗೆ ನ್ಯಾಯೋಚಿತ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಪ್ರಶಂಸಿಸಿದೆ. ಪ್ರಚಲಿತ ಬಿಕ್ಕಟ್ಟಿನ ಸೃಷ್ಟಿಯಲ್ಲಿ ಅಮೆರಿಕ ಸರಕಾರದ ಪಾತ್ರವಿದೆ ಎನ್ನುವುದನ್ನು ಪತ್ರದಲ್ಲಿ ಈ ರೈತ ಒಕ್ಕೂಟಗಳು ಬೆಟ್ಟು ಮಾಡಿರುವುದು ಗಮನಾರ್ಹವಾಗಿದೆ.

 ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ)ಯಲ್ಲಿ ಅಮೆರಿಕವು ಭಾರತದಿಂದ ಎಂಎಸ್ಪಿಯ ಸೀಮಿತ ಬಳಕೆಗೆ ಮುಖ್ಯ ವಿರೋಧಿಯಾಗಿದೆ. ಭಾರತದ ಎಂಎಸ್ಪಿ ವ್ಯಾಪಾರವನ್ನು ತಿರುಚುತ್ತಿದೆ ಎಂದು ಆಸ್ಟ್ರೇಲಿಯಾ,ಕೆನಡಾ ಮತ್ತು ಐರೋಪ್ಯ ಮಿತ್ರರಾಷ್ಟಗಳೊಂದಿಗೆ ಅಮೆರಿಕವು ಪ್ರತಿಪಾದಿಸುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
 ಕೃಷಿ ನೀತಿಗಳು ರೈತರಿಗೆ ಪೂರಕವಾಗಿ ಮಾಡುವಂತೆ ಬೈಡೆನ್ ಆಡಳಿತವನ್ನೂ ರೈತ ಒಕ್ಕೂಟಗಳು ಆಗ್ರಹಿಸಿವೆ.

 ಭಾರತದಲ್ಲಿಯ ಪ್ರಚಲಿತ ಕೃಷಿ ಬಿಕ್ಕಟ್ಟು ಹೆಚ್ಚುಕಡಿಮೆ ನಾಲ್ಕು ದಶಕಗಳ ಹಿಂದೆ ಅಮೆರಿಕದಲ್ಲಿಯೂ ಉಂಟಾಗಿತ್ತು ಎಂದು ಹೇಳಿರುವ ಒಕ್ಕೂಟಗಳು,ರೇಗನ್ ಸರಕಾರವು ಬೆಲೆಗಳಲ್ಲಿಯ ಸಾಮ್ಯತೆಯನ್ನು ತಗ್ಗಿಸುವ ಜೊತೆಗೆ ಇತರ ನಿಯಂತ್ರಣ ಮುಕ್ತ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳೊಂದಿಗೆ ಉದ್ದೇಶಪೂರ್ವಕ ನೀತಿ ಬದಲಾವಣೆಗಳ ಮೂಲಕ ಕೃಷಿಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿತ್ತು ಎಂದು ನೆನಪಿಸಿವೆ.
ಸ್ವಂತಂತ್ರ ರೈತರನ್ನು ಮತ್ತು ಸ್ಥಳೀಯ ಆಹಾರ ವ್ಯವಸ್ಥೆಗಳನ್ನು ಬೆಂಬಲಿಸುವಂತೆ ಅವು ಅಮೆರಿಕ ಮತ್ತು ಭಾರತ ಸರಕಾರಗಳನ್ನು ಆಗ್ರಹಿಸಿವೆ.

 ಸಂಯುಕ್ತ ಕಿಸಾನ ಮೋರ್ಚಾದ ರೈತರು ಮತ್ತು ಕೃಷಿ ಕಾರ್ಮಿಕರು ಸಂಘಟಿಸಿರುವ ಏಕೀಕೃತ ಹೋರಾಟಗಳನ್ನು ನಾವು ಬಹುವಾಗಿ ಗೌರವಿಸುತ್ತೇವೆ ಮತ್ತು ನಾವು ಅವರೊಂದಿಗಿದ್ದೇವೆ ಎಂದು ಅಮೆರಿಕದ ರೈತ ಒಕ್ಕೂಟಗಳು ಪ್ರಕಟಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X