Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಭಾರತದ ಇಬ್ಬರು ಬಾಕ್ಸರ್‌ಗಳಿಗೆ ಚಿನ್ನ

ಭಾರತದ ಇಬ್ಬರು ಬಾಕ್ಸರ್‌ಗಳಿಗೆ ಚಿನ್ನ

ವಾರ್ತಾಭಾರತಿವಾರ್ತಾಭಾರತಿ22 Feb 2021 10:34 AM IST
share
ಭಾರತದ ಇಬ್ಬರು ಬಾಕ್ಸರ್‌ಗಳಿಗೆ ಚಿನ್ನ

 ಬುಡ್ವಾ,: ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30ನೇ ಆಡ್ರಿಯಾಟಿಕ್ ಪರ್ಲ್ ಟೂರ್ನ ಮೆಂಟ್‌ನಲ್ಲಿ ಭಾರತದ ಯುವ ಬಾಕ್ಸರ್‌ಗಳಾದ ವಿಂಕಾ (60 ಕೆ.ಜಿ.) ಮತ್ತು ಟಿ. ಸನಾಮಾಚಾ ಚಾನು (75 ಕೆ.ಜಿ.) ಚಿನ್ನದ ಪದಕ ಗೆದ್ದಿದ್ದಾರೆ.

 ಎರಡು ಚಿನ್ನದ ಪದಕಗಳ ಹೊರತಾಗಿಯೂ ಸ್ಪರ್ಧೆಯ ಅಂತಿಮ ದಿನದಂದು ಭಾರತದ ಬಾಕ್ಸರ್‌ಗಳು ಎರಡು ಬೆಳ್ಳಿ ಮತ್ತು ಮೂರು ಕಂಚುಗಳನ್ನು ಬಾಚಿಕೊಂಡರು.

ಇದಕ್ಕೂ ಮುನ್ನ ಪಂದ್ಯಾವಳಿ ಯಲ್ಲಿ ಅಲ್ಫಿಯಾ ಪಠಾಣ್(+ 81 ಕೆ.ಜಿ.) ದೇಶದ ಪರ ಮೊದಲ ಚಿನ್ನ ಜಯಿಸಿದ್ದರು.

 ಫೈನಲ್‌ನಲ್ಲಿ ರೋಹ್ಟಕ್‌ನ ವಿಂಕಾ ತನ್ನ ಎದುರಾಳಿ ಮೊಲ್ಡೊವಾ ಕ್ರಿಸ್ಟಿನಾ ಕ್ರಿಪ್ಪರ್‌ರನ್ನು 5-0 ಅಂತರದಿಂದ ಮಣಿಸಿದರು. 75 ಕೆ.ಜಿ. ವಿಭಾಗದಲ್ಲಿ ಮಣಿಪುರಿ ಹುಡುಗಿ ಸನಾಮಾಚಾ ಅವರು 5-0 ಅಂತರದಿಂದ ರಾಜ್ ಸಾಹಿಬಾ ಅವರನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಟ್ಟರು.

 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಗೀತಿಕಾ ಅವರು ಉಜ್ಬೇಕಿಸ್ತಾನ್‌ನ ಫರ್ಜೋನಾ ಫೊಜಿಲೋವಾ ವಿರುದ್ಧ 1-4 ಅಂತರದಲ್ಲಿ ಸೋತು ಬೆಳ್ಳಿ ಪಡೆದರು.

 ಮಹಿಳೆಯರ 57 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಪ್ರೀತಿ 1-4ರಿಂದ ಮಾಂಟೆನೆಗ್ರೊದ ಬೊಜಾನಾ ಗೊಜ್ಕೊವಿಕ್ ಎದುರು ಸೋತು ಕಂಚು ಪಡೆದರು. ಇದೇ ವೇಳೆ ಪ್ರಿಯಾಂಶು ದಬಾಸ್ (49ಕೆ.ಜಿ.) ಮತ್ತು ಜುಗ್ನೂ ಪುರುಷರ ತಂಡಕ್ಕೆ ಕಂಚು ತಂದುಕೊಟ್ಟರು. ಇಬ್ಬರೂ ತಮ್ಮ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಪ್ರಿಯಾಂಶು ಉಜ್ಬೇಕಿಸ್ತಾನ್‌ನ ಇಶ್ಜೊನೊವ್ ಇಬ್ರೊಖಿಮ್ ವಿರುದ್ಧ 2-3 ಅಂತರದಲ್ಲಿ ಸೋಲು ಕಂಡರೆ, ಜುಗ್ನೂ +91 ಕೆ.ಜಿ. ವಿಭಾಗದಲ್ಲಿ ಉಕ್ರೇನ್‌ನ ವಾಸಿಲ್ ಟಕಾಚುಕ್‌ಗೆ 0-5 ಅಂತರದಲ್ಲಿ ಶರಣಾದರು.

64 ಕೆ.ಜಿ. ಮಹಿಳೆಯರ ಕೊನೆಯ ನಾಲ್ಕು ಸ್ಪರ್ಧೆಗಳಲ್ಲಿ ಲಕ್ಕಿ ರಾಣಾ ಉಜ್ಬೇಕಿಸ್ತಾನ್‌ನ ಗುಲ್ಶೋಡಾ ಇಸ್ತಮೋವಾ ವಿರುದ್ಧ 3-0 ಅಂತರದಲ್ಲಿಜಯ ಸಾಧಿಸಿದರು. ಫೈನಲ್‌ನಲ್ಲಿ ಲಕ್ಕಿ ರಾಣಾ ಅವರು ಫಿನ್‌ಲ್ಯಾಂಡ್‌ನ ಲಿಯಾ ಪುಕ್ಕಿಲಾ ಅವರನ್ನು ಎದುರಿಸಲಿದ್ದಾರೆ.

 ಲಕ್ಕಿ ಅವರಲ್ಲದೆ ಭಾರತದ ಇಬ್ಬರು ಮಹಿಳಾ ಬಾಕ್ಸರ್‌ಗಳು ಅಂತಿಮ ದಿನ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ, ಬಾಬಿರೋಜಿಸಾನಾ ಚಾನು (51 ಕೆ.ಜಿ.) ಮತ್ತು ಅರುಂಧತಿ ಚೌಧರಿ(69 ಕೆ.ಜಿ.) ಚಿನ್ನದ ಪದಕಕ್ಕಾಗಿ ಬೇಟೆ ನಡೆಸಲಿದ್ದಾರೆ. ಚಾನು ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಲಿದ್ದರೆ, ಅರುಂಧತಿ ಉಕ್ರೇನ್‌ನ ಮರಿಯಾನಾ ಸ್ಟೊಯಿಕೊ ವಿರುದ್ಧ ಹೋರಾಡಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X