ಫೆ.23 ರಂದು ಪೆರಿಂಜೆಯಲ್ಲಿ 17ನೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಬೆಳ್ತಂಗಡಿ: ದ.ಕ ಜಿಲ್ಲಾ ಕನ್ನಡ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಇದರ ವತಿಯಿಂದ ಬೆಳ್ತಂಗಡಿ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.23 ರಂದು ಪೆರಿಂಜೆ ಪಡ್ಯಾರಬೆಟ್ಟ ಸಂತೃಪ್ತಿ ಸಭಾಭವನದಲ್ಲಿ ಬಿ. ರಾಮನಾಧ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಬಿ.ರಾಮನಾಥ ಭಟ್ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಶಾಸಕ ಹರೀಶ್ ಪೂಂಜಾ ಚಾರುಮುಡಿ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಹಿರಿಯ ಸಾಹಿತಿ, 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ ಮಚ್ಚಿನ, ಸಮ್ಮೇಳನ ಸಂಯೋಜನಾ ಸಮಿತಿಯ ಎ. ಜೀವಂಧರ ಕುಮಾರ್ ಪಡ್ಯೋಡಿಗುತ್ತು, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯ ಓಬಯ್ಯ ಉಪಸ್ಥಿತರಿರಲಿದ್ದಾರೆ.
ಬೆಳಗ್ಗೆ ಹೊಸಂಗಡಿ ಗ್ರಾ.ಪಂ ಅಧ್ಯಕ್ಷ ಕರುಣಾಕರ ಪೂಜಾರಿ (ರಾಷ್ಟ್ರಧ್ವಜ), ಕ.ಸಾ.ಪ.ದ.ಕ ಜಿಲ್ಲಾ ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ (ಪರಿಷತ್ತು ಧ್ವಜ) ಹಾಗೂ ಕ.ಸಾ.ಪ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ. ಬಿ. ಯಶೋವರ್ಮ (ಸಮ್ಮೇಳನ ಧ್ವಜ) ಧ್ವಜಾರೋಹಣ ಮಾಡಲಿದ್ದಾರೆ.
ಮೊದಲ ಉಪನ್ಯಾಸದಲ್ಲಿ ಬೆಳಗ್ಗೆ 11.30ರಿಂದ 11.50ರವರೆಗೆ ಪ್ರೊ. ಗಣಪತಿ ಭಟ ಕುಳವರ್ಮರವರಿಂದ ಡಾ. ಹೆಚ್.ಎಸ್ ವೆಂಕಟೇಶ ಮೂರ್ತಿ ಅವರ ಸಾಹಿತ್ಯದ ಬಗ್ಗೆ ಹಾಗೂ ಎ. ಕೃಷ್ಣಪ್ಪ ಪೂಜಾರಿರವರಿಂದ ದೈವಾರಾಧನೆ ನಂಬಿಕೆ, ನಡವಳಿಕೆ ಬಗ್ಗೆ, ಮಧ್ಯಾಹ್ನ ಖ್ಯಾತ ಜಲತಜ್ಞ ಶ್ರೀಪಡ್ರೆ ಅವರಿಂದ ಜಲ ಸಂಸ್ಕೃತಿ-ಜನಜೀವ ಬಗ್ಗೆ, ಡಾ.ಯೋಗೀಶ್ ಕೈರೋಡಿರವರಿಂದ ಶಿಕ್ಷಣದಲ್ಲಿ ಸಾಹಿತ್ಯ ಅಭಿರುಚಿ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯ ನಡೆಯಲಿದೆ.
ಅಪರಾಹ್ನ 3.15 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕ.ಸಾ.ಪ. ದ.ಕ ಜಿಲ್ಲಾ ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದು, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ| ನಾ ಮೊಗಸಾಲೆ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿ. ರಾಮನಾಥ ಭಟ್ ಸಮ್ಮೇಳನಾಧ್ಯಕ್ಷತೆ ಭಾಷಣ ಮಾಡಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪ್ಸಿಂಹ ನಾಯಕ್, ಸಂಘಟನಾ ಸಮಿತಿ ಅಧ್ಯಕ್ಷ ಪಿ ಜಯರಾಜ ಕಂಬಳಿ, ಕಾರ್ಯಾಧ್ಯಕ್ಷ ಪಿ ಧರಣೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಇದೇ ಸಂಧರ್ಭದಲ್ಲಿ ದೇವಿಪ್ರಸಾದ್ (ಪತ್ರಿಕೋದ್ಯಮ), ಡಾ| ರಾಮಕೃಷ್ಣ ಭಟ್, ಬೆದ್ರಡ್ಕ ಪೆರಿಂಜೆ (ವೈದ್ಯಕೀಯ), ಬಿ. ರಾಮಚಂದ್ರ ಶೆಟ್ಟಿ ಉಜಿರೆ(ಸಮಾಜ ಸೇವೆ), ಎಂ. ಕಮಲಾಜಿ ಎಸ್ ಜೈನ್, ಮುಖ್ಯಶಿಕ್ಷಕಿ ಬಜಿರೆ(ಶಿಕ್ಷಣ), ಗೋವಿಂದ ಭಟ್ ನಿಡ್ಲೆ (ಯಕ್ಷಗಾನ)ಡಿ.ಎ ರಹಿಮಾನ್ ತೋಟತ್ತಾಡಿ(ಸಾಮಾಜಿಕ ಜಾಗೃತಿ), ರವಿ ಅಳದಂಗಡಿ(ಕಂಬಳ)ದೇವು ಮರೋಡಿ(ಜಾನಪದ), ಕೊರಗಪ್ಪ ಶೆಟ್ಟಿ ಮದಕುಡೆ ಪೆರಿಂಜೆ(ಉದ್ಯಮ), ಜೆರೋಮಿ ಎಸ್ ಮೋರಸ್ ಪೆರಿಂಜೆ (ಹೈನುಗಾರಿಕೆ), ಅನಿಲ್ ಬಳಂಜ (ಕೃಷಿ), ಬದುಕು ಕಟ್ಟೋಣ ಬನ್ನಿ ಸಂಘಟನೆ ಉಜಿರೆ(ಸೇವೆ)ಪ್ರವೀಣ ಜೈನ್ ಪೆರಿಂಜೆ (ಪ್ರತಿಭಾ ಪುರಸ್ಕಾರ), ದಿವ್ಯ ಸಂಚನ್ ಗುಂಡೂರಿ (ಪ್ರತಿಭಾ ಪುರಸ್ಕಾರ)ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.







