ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
ಶಿವಮೊಗ್ಗ, ಫೆ.22: 'ಕೌನ್ ಬನೇಗಾ ಕರೋಡ್ ಪತಿ' ಹೆಸರಲ್ಲಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂ. ವಂಚಿಸಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯ ಅನಂತ ಕುಮಾರ್ ಎಂಬವರಿಗೆ ಕರೆ ಮಾಡಿದ ಅಪರಿಚಿತರು, ಕೆಬಿಸಿ ಕಂಪನಿಯಿಂದ ಲಕ್ಕಿ ಡ್ರಾ ಬಂದಿದೆ ಎಂದು ನಂಬಿಸಿದ್ದಾರೆ. ನಿಮಗೆ 25 ಲಕ್ಷ ರೂ. ಲಕ್ಕಿ ಡ್ರಾ ಬಂದಿದೆ. ಹಣ ಬೇಕಿದ್ದರೆ ಕೆಲವು ಚಾರ್ಜ್ ಕಟ್ಟಬೇಕು ಎಂದಿದ್ದಾರೆ.
ಇದನ್ನು ನಂಬಿದ ಅನಂತ ಕುಮಾರ್ ಹಂತ ಹಂತವಾಗಿ ನಾಲ್ಕು ಬಾರಿ, ನಾಲ್ಕು ಬ್ಯಾಂಕ್ ಖಾತೆಗಳಿಗೆ ಒಟ್ಟು 1.43 ಲಕ್ಷ ರೂ. ಹಣ ಹಾಕಿದ್ದಾರೆ. ಬಳಿಕ ಮೋಸ ಹೋಗಿರುವುದು ಅರಿವಿಗೆ ಬಂದಿದ್ದು, ಈ ಬಗ್ಗೆ ಅನಂತ ಕುಮಾರ್ ಅವರು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Next Story