ಹಾಸನ: ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನೇ ಕೊಂದ ವ್ಯಕ್ತಿ
ಹಾಸನ, ಫೆ.23: ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನೇ ವ್ಯಕ್ತಿಯೊಬ್ಬರು ಕೊಂದಿದ್ದಾರೆನ್ನಲಾದ ಘಟನೆ ಅರಸೀಕೆರೆ ಬೆಂಡೇಕೆರೆ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ರಾಜಗೋಪಾಲ್ ನಾಯಕ್ ಎಂಬವರು ಪ್ರಾಣ ರಕ್ಷಣೆಗಾಗಿ ಚಿರತೆಯನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಬಾಣವರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿಳಿಚೌಡಯ್ಯ ರವರ ತೋಟದ ಮನೆಯ ಹತ್ತಿರ ಈ ಘಟನೆ ನಡೆದಿದೆ.
ರಾಜಗೋಪಾಲ್ ನಾಯಕ್ ಬೈಕ್ನಲ್ಲಿ ಹೆಂಡತಿ ಮಗಳೊಂದಿಗೆ ಹೋಗುವಾಗ ಅವರ ವಾಹನಕ್ಕೆ ಚಿರತೆಯೊಂದು ಅಡ್ಡಬಂದಿದ್ದು, ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಬೈಕ್ನಿಂದ ಕೆಳಗೆ ಬಿದ್ದ ರಾಜಗೋಪಾಲ್ ಮತ್ತು ಕುಟುಂಬದವರ ಮೇಲೆ ಚಿರತೆ ದಾಳಿ ಮಾಡಿದ್ದು, ಈ ಸಂದರ್ಭ ನಾಯಕ್ ಚಿರತೆಯೊಂದಿಗೆ ಸೆಣಸಾಡಿ, ಕುತ್ತಿಗೆಯನ್ನು ಬಲವಾಗಿ ಹಿಡಿದು ಸಾಯಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
Next Story