ಟಿ.ವಿ ಚರ್ಚಾ ಕಾರ್ಯಕ್ರಮದ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಚಪ್ಪಲಿ ಎಸೆದ ವ್ಯಕ್ತಿ!
photo: ANI
ಹೈದರಾಬಾದ್: ಆಂಧ್ರ ಪ್ರದೇಶದ ತೆಲುಗು ಸುದ್ದಿ ವಾಹಿನಿಯೊಂದರ ನೇರ ಚರ್ಚಾ ಕಾರ್ಯಕ್ರಮದ ವೇಳೆ ಸಿಟ್ಟುಗೊಂಡ ಚರ್ಚೆಯಲ್ಲಿ ಭಾಗವಹಿಸಿದವರೊಬ್ಬರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಅವರತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ.
ಅಮರಾವತಿ ಪರಿರಕ್ಷಣಾ ಸಮಿತಿ ಜಂಟಿ ಕ್ರಿಯಾ ಸಮಿತಿ ಸದಸ್ಯ ಕೆ ಶ್ರೀನಿವಾಸ ರಾವ್ ಹಾಗೂ ರೆಡ್ಡಿ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚರ್ಚೆಯ ನಡುವೆ ಶ್ರೀನಿವಾಸ ರಾವ್ ಅವರಿಗೆ ಟಿಡಿಪಿ ಜತೆಗೆ ನಂಟು ಇದೆ ಎಂದು ರೆಡ್ಡಿ ಆರೋಪಿಸಿದ್ದು ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಯಿತು. ರಾವ್ ಅವರನ್ನು ರೆಡ್ಡಿ ಹಂಗಿಸುವುದನ್ನು ಮುಂದುವರಿಸಿದಾಗ ಸಿಟ್ಟುಗೊಂಡ ರಾವ್ ತಮ್ಮ ಪಾದರಕ್ಷೆ ತೆಗೆದು ಬಿಜೆಪಿ ನಾಯಕನತ್ತ ಎಸೆದರು.
ಈ ಹಂತದಲ್ಲಿ ಅನಿವಾರ್ಯವಾಗಿ ಟಿವಿ ವಾಹಿನಿ ಒಂದು ಬ್ರೇಕ್ ಪಡೆದುಕೊಳ್ಳಬೇಕಾಯಿತು.
ವೈ ಎಸ್ ಜಗನ್ ರೆಡ್ಡಿ ಸರಕಾರ ಅಧಿಕಾರಕ್ಕೆ ಬಂದ ಮೂರು ಪ್ರಾದೇಶಿಕ ರಾಜಧಾನಿ ಹೊಂದುವ ನಿರ್ಧಾರದ ವಿರುದ್ಧ ಶ್ರೀನಿವಾಸ ರಾವ್ ಅವರು ಅಮರಾವತಿ ರಾಜಧಾನಿ ಆಂದೋಲನದಲ್ಲಿ ಸಕ್ರಿಯರಾಗಿದ್ದರು.
Slipper shot to Vishnuvardhan reddy from Kollikapudi Srinivas Rao garu! This will next happen to our government who are not paying heed to our farmers who are protesting since #434DaysOfAmaravatiProtests @BJP4Andhra @SVishnuReddy @BJP4India pic.twitter.com/BIKEN0Eejn
— Vineela Paladugu (@PaladuguVineela) February 24, 2021