Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರವೇಶ ನಿರ್ಬಂಧ ಸರಿಯಲ್ಲ

ಪ್ರವೇಶ ನಿರ್ಬಂಧ ಸರಿಯಲ್ಲ

-ಡಾ. ರಾಮಚಂದ್ರ ಕೆ., ಕನ್ಯಾನ-ಡಾ. ರಾಮಚಂದ್ರ ಕೆ., ಕನ್ಯಾನ24 Feb 2021 11:32 PM IST
share

ಮಾನ್ಯರೇ.

ಕೇರಳದಲ್ಲಿ ಕೊರೋನ ಹೆಚ್ಚುತ್ತಿರುವ ಕಾರಣ ನೀಡಿ ದ.ಕ. ಜಿಲ್ಲಾಡಳಿತ ತರಾತುರಿಯಿಂದ ಕೇರಳಿಗರ ಪ್ರವೇಶ ನಿರ್ಬಂಧಿಸಿದೆ. ಪ್ರಾಕಿನ ತುಳುನಾಡಿನ ಅವಿಭಾಜ್ಯ ಪ್ರದೇಶವಾದ ಕಾಸರಗೋಡಿನ ಗಡಿ ಪ್ರದೇಶದ ಲಕ್ಷಾಂತರ ಜನರು ತಲ್ಲಣಿಸಿದ್ದಾರೆ. ಇಂತಹ ನಿರ್ಣಯವನ್ನು ವೈರಾಣು ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆದು ಪುನರ್ ಪರಿಶೀಲನೆ ಮಾಡದಿದ್ದರೆ ಆಡಳಿತ ಮುಂದೆ ಜನಾಕ್ರೋಶಕ್ಕೆ ಕಾರಣವಾದೀತು.

ಸೀಮಿತ ಜನಸಂಖ್ಯೆಯ ಮುಂದುವರಿದ ನಾಗರಿಕ ಸಮಾಜದ ಪಾಶ್ಚಾತ್ಯ ರಾಷ್ಟ್ರಗಳ ಕೊರೋನ ನಿಯಮಾವಳಿಗಳನ್ನು ಭಾರತದಂತಹ ದೇಶದಲ್ಲಿ ಕಣ್ಮುಚ್ಚಿ ಅಳವಡಿಸುವುದು ಸಾಧುವಲ್ಲ. ಐಸೋಲೇಶನ್‌ನ ಏಕಾಂಗಿತನ, ಪ್ರಯೋಗ ಮಾಡಿದ ಔಷಧಗಳ ಅಡ್ಡಪರಿಣಾಮ, ರೋಗಿಗೆ ಮೊದಲೇ ಇದ್ದ ಪ್ರಾಣಾಂತಿಕ ಕಾಯಿಲೆಗಳ ಕಡೆಗಣನೆ ಮೊದಲಾದ ಕಾರಣಗಳಿಂದ ಶೇಕಡಾ ಒಂದಕ್ಕಿಂತಲೂ ಕಡಿಮೆ ಮಾರಣಾಂತಿಕತೆಯನ್ನು ಈ ವರೆಗೆ ದಾಖಲಿಸಿದ ಕೊರೋನ ವ್ಯಾಧಿಗೆ ಈ ಪರಿಯ ಉತ್ಸವ ಮಾಡುವ ಅಧಿಕಾರಿಗಳ ಆದೇಶ ಪ್ರಳಯಾಂತಕ. ವಿದೇಶಗಳಿಂದಲೂ ಬೇಡಿಕೆ ಕಂಡಿರುವ ಕೈಗೆಟಕುವ ಭಾರತೀಯ ಲಸಿಕೆ ಇರುವಾಗ, ಮನೆಯಲ್ಲಿದ್ದುಕೊಂಡೇ ತೆಗೆದುಕೊಳ್ಳುವ ಸಾಮಾನ್ಯ ಔಷಧಗಳಿಂದಲೇ ಶೇ. 99 ಕೊರೋನ ರೋಗಿಗಳು ಗುಣಮುಖರಾಗುತ್ತಿರುವಾಗ ಇಂತಹ ಕಠಿಣ ಕ್ರಮಗಳು ವ್ಯವಸ್ಥೆಯನ್ನು ಮತ್ತಷ್ಟು ಭ್ರಷ್ಟಗೊಳಿಸುವುದಕ್ಕೆ ಸೀಮಿತ.

ಈ ಹಿಂದಿನ ಲಾಕ್‌ಡೌನ್ ಕಾರಣದಿಂದ ಕುಸಿತಕಂಡ ಆರ್ಥಿಕತೆಯನ್ನು ಸರಿದೂಗಿಸುವ ಸರಕಾರದ ಪ್ರಯತ್ನದ ಪರಿಣಾಮವಾದ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಜನತೆಯ ಬದುಕು ಇನ್ನೂ ಸುಟ್ಟು ಹೋದೀತು. ಇಂದು ಸಾಮಾಜಿಕ ಮಾಧ್ಯಮಗಳಿಂದ ಕ್ಷಣಮಾತ್ರದಲ್ಲಿ ಜನಾಭಿಪ್ರಾಯ ಪಡೆದುಕೊಳ್ಳಬಹುದಾದ ತಂತ್ರಜ್ಞಾನ ಕೈಯಲ್ಲಿರುವಾಗ ಆತುರದ ನಿರ್ಧಾರಗಳಿಂದ ಹಾಸ್ಯಾಸ್ಪದಗೊಳ್ಳುವುದು ಯಾಕೆ? ಇನ್ನಾದರೂ ಅಧಿಕಾರದ ಅಮಲು, ತೆವಲು ಬದಲಾಗದಿದ್ದರೆ ಜನತೆಗೆ ಒಳ್ಳೆಯ ದಿನಗಳು ಎಂಬ ಪ್ರಧಾನಿ ಮೋದಿಯವರ ಆಶಯ ಕನ್ನಡಿಯೊಳಗಿನ ಗಂಟು.

share
-ಡಾ. ರಾಮಚಂದ್ರ ಕೆ., ಕನ್ಯಾನ
-ಡಾ. ರಾಮಚಂದ್ರ ಕೆ., ಕನ್ಯಾನ
Next Story
X