Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುಲ್ತಾನುಲ್ ಉಲಮಾ ಸೌಹಾರ್ದತೆಗೆ...

ಸುಲ್ತಾನುಲ್ ಉಲಮಾ ಸೌಹಾರ್ದತೆಗೆ ಶ್ರಮಿಸುತ್ತಿರುವ ನೈಜ ಆದರ್ಶ ಪ್ರಚಾರಕರು: ಡಾ.‌ಝೈನಿ ಸಖಾಫಿ

ಕಾಜೂರು ಉರೂಸ್

ವಾರ್ತಾಭಾರತಿವಾರ್ತಾಭಾರತಿ26 Feb 2021 10:56 PM IST
share
ಸುಲ್ತಾನುಲ್ ಉಲಮಾ ಸೌಹಾರ್ದತೆಗೆ ಶ್ರಮಿಸುತ್ತಿರುವ ನೈಜ ಆದರ್ಶ ಪ್ರಚಾರಕರು: ಡಾ.‌ಝೈನಿ ಸಖಾಫಿ

ಬೆಳ್ತಂಗಡಿ : ಬಹುವಿಧ ಸಂಸ್ಕೃತಿಗಳ ಸಮನ್ವಯ ನಾಡು, ಸರ್ವ ಜಾತಿ ಧರ್ಮಗಳ ಜನರು ಜೀವಿಸುವ ಭವ್ಯ ಭಾರತದಲ್ಲಿ ಸೌಹಾರ್ದತೆಗಾಗಿ ತಮ್ಮದೇ ಶೈಲಿಯ ವಿಶಿಷ್ಟ ನಾಯಕತ್ವದ ಮೂಲಕ‌ ಗುರುತಿಸುತ್ತಾ, ಭಾರತೀಯ ಮುಸಲ್ಮಾನರ ಅಧಿಕೃತ ಧ್ವನಿಯಾಗಿ ನೈಜ ಆದರ್ಶ ಪ್ರಚಾರಕರಾಗಿದ್ದಾರೆ. ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ಎಂದು ಖ್ಯಾತ ದಾರ್ಮಿಕ ವಿದ್ವಾಂಸ ಡಾ.‌ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.

ಕಾಜೂರು  ಉರೂಸ್ ಸಂಭ್ರಮದಂಗವಾಗಿ ಫೆ. 25 ರಂದು ನಡೆದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ‌ದಲ್ಲಿ ಅವರು,‌ಸುಲ್ತಾನುಲ್ ಉಲಮಾ  ಎ.ಪಿ ಉಸ್ತಾದ್ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಸಮಾರಂಭವನ್ನು ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಖಾಝಿ ಶೈಖುನಾ‌ ಮಾಣಿ‌ ಉಸ್ತಾದ್ ಉದ್ಘಾಟಿಸಿ ಮಾತನಾಡಿ, ಇಂದು ವಿಶ್ವಾದ್ಯಂತ ಸುನ್ನತ್ ಜಮಾಅತ್ ನ ವ್ಯಾಪಕತೆಗೆ ಸುಲ್ತಾನುಲ್ ಉಲಮಾ ಕಾರಣಕರ್ತರಾಗಿದ್ದಾರೆ‌. ಅವರ ಜೀವಿತಾವಧಿಯಲ್ಲಿ ಅವರು ನಿರ್ಮಿಸಿದ 3ಸಾವಿರದಷ್ಟು ಮಸೀದಿಗಳು, 4 ಸಾವಿರಕ್ಕೂ ಅಧಿಕ ಕುಡಿಯುವ ನೀರಿಗಾಗಿನ‌ಕೊಳವೆ ಬಾವಿಗಳು ಐತಿಹಾಸಿಕ‌ ಕೊಡುಗೆಗಳಾಗಿವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು‌ ಉರೂಸ್‌ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು. ಉರೂಸ್ ಸಮಿತಿ ವತಿಯಿಂದ ಶೈಖುನಾ ಕಾಂತಪುರಂ ಉಸ್ತಾದ್ ಮತ್ತು ಶೈಖುನಾ‌ ಮಾಣಿ ಉಸ್ತಾದ್ ಅವರನ್ನು ನಿಲುವಂಗಿ ತೊಡಿಸಿ ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ  ಕಾಜೂರಿನಲ್ಲಿ‌ ನಿರ್ಮಾಣವಾಗಲಿರುವ ಹಿಫ್ಲುಲ್ ಕುರ್‌ಆನ್ ಕಾಲೇಜು ಕಟ್ಟಡ, ಯಾತ್ರಾರ್ಥಿ ಮಹಿಳಾ ನಮಾಝ್ ಕಟ್ಟಡಕ್ಕೆ  ಶಿಲಾನ್ಯಾಸ ನೆರವೇರಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್  ಕೆ.ಎಂ ಶಾಫಿ ಸಾದಿ, ಸಯ್ಯಿದ್ ಮುರ‌ ತಂಙಳ್, ಸಯ್ಯಿದ್ ಸಲಾಂ ತಂಙಳ್, ಸಯ್ಯಿದ್ ತೀರ್ಥಹಳ್ಳಿ ತಂಙಳ್, ಮುಮ್ತಾಝ್‌ಅಲಿ‌‌‌‌ ಕೃಷ್ಣಾಪುರ, ಯೂಸುಫ್‌ಹಾಜಿ‌ ಉಪ್ಪಳ್ಳಿ, ಅಬ್ದುಲ್ ರಹಿಮಾನ್ ನೊಗರ್ಪಣೆ, ಅಶ್ರಫ್ ಕಿನಾರ, ಕಿಲ್ಲೂರು ಖತೀಬ್ ರಫೀಕ್ ಸ‌ಅದಿ, ಅಬ್ದುಲ್ ಅಝೀಝ್, ಸತ್ತಾರ್ ಹಾಜಿ ಚಿಕ್ಕಮಗಳೂರು, ಉರೂಸ್ ಸಮಿತಿ ಉಪಾಧ್ಯಕ್ಷ ಕೆ‌ ಮುಹಮ್ಮದ್ ಕಿಲ್ಲೂರು,  ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು, ಜೊತೆ ಕಾದ್ಯದರ್ಶಿ ಎಂ.ಎ ಕಾಸಿಂ‌ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಮ್‌ ಕಮಾಲ್ ಕಾಜೂರು, ಎಂ ಅಬೂಬಕ್ಕರ್, ಕಾಜೂರು ಮುದರ್ರಿಸ್ ಸಿರಾಜುದ್ದೀನ್ ಝುಹುರಿ ಉಪಸ್ಥಿತರಿದ್ದರು.

ಸಯ್ಯಿದ್ ಗುಲ್‌ರೇಝ್ ಅಹಮ್ಮದ್ ರಝ್ವಿ ನ‌ಅತೇ ಶರೀಫ್, ಮಸ್‌ಊದ್ ಸ‌ಅದಿ ನೇತೃತ್ವದಲ್ಲಿ ಮುಹ್ಯುದ್ದೀನ್ ಮಾಲಾ ಆಲಾಪನೆ ನಡೆಯಿತು. ಎಸ್ಸೆಸ್ಸೆಫ್ ಕರ್ನಾಟಕ ನೂತನ ಅಧ್ಯಕ್ಷರಾಗಿರುವ ಅಬ್ದುಲ್ಲತೀಫ್ ಸ‌ಅದಿ ಇಂದಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ಕಾಜೂರು‌ ತಂಙಳ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸಲಾಂ‌ ಮದನಿ ಅಳಕೆ ಕಾರ್ಯಕ್ರಮ‌ ನಿರೂಪಿಸಿ, ಅಶ್ರಫ್ ಆಲಿಕುಂಞಿ  ವಂದಿಸಿದರು.

ಮದ್ದಡ್ಕದಿಂದ ವಾಹನ‌ಜಾಥಾ;

ಕಾಂತಪುರಂ ಉಸ್ತಾದ್ ಅವರನ್ನು ಮದ್ದಡ್ಕದಿಂದ ಕಾಜೂರುವರೆಗೆ ವಿಶೇಷ ವಾಹನಗಳ ಜಾಥಾದ ಮೂಲಕ ಕರೆತರಲಾಯಿತು. ತಮ್ಮದೇ ಸಂಸ್ಥೆ ಮರ್ಕಝ್‌ನ ಆರ್‌ಸಿಎಫ್ ಅನುದಾನದಲ್ಲಿ ನಿರ್ಮಿಸಿದ ಪೆರ್ದಾಡಿ ಮಸ್ಜಿದ್ ಬಳಿ ಕಾಂತಪುರಂ ಉಸ್ತಾದ್ ದುಆ ನೆರವೇರಿಸಿದರು. ದಪ್ಫ್ ಸಾಂಸ್ಕೃತಿಕ ಪ್ರದರ್ಶನದ  ಮೂಲಕ ಅವರನ್ನು ಸ್ವಾಗತಿಸಲಾಯಿತು.

''ಉಮರ್ ಇಬ್‌ನಿ ಖತ್ತಾಬ್ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹರಡಿದಾಗ ಪ್ರವಾದಿ ಯವರು,  ಯಾರೂ ಮನೆಬಿಟ್ಟು ಹೋಗದಂತೆ ಅದೇಶಿದ್ದರು. ಅಂತೆಯೇ ಈ ಕೊರೋನ ಸೋಂಕು ಕಾಲದಲ್ಲಿ ಪ್ರವಾದಿಯವರು ಅಂದೇ ಸಂದೇಶ ಸಾರಿದ ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕು. ಅಲ್ಲಾಹು ಉದ್ದೇಶಿದ್ದನ್ನು ತಡೆಯಲು‌ ಮನುಷ್ಯ ಶಕ್ತಿಗಳಿಂದ ಅಸಾಧ್ಯವಾಗಿರುವುದರಿಂದ ಇಂತಹಾ ಅನಾಹುತಗಳು ಕಣ್ಣ ಮುಂದೆ ಬರುವಾಗ ದೇವರಲ್ಲಿ ಪ್ರಾರ್ಥಿಸಬೇಕು''.

- ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X