Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಏನಿದು ಅಲರ್ಜಿಕ್ ರಿನಿಟಿಸ್?

ಏನಿದು ಅಲರ್ಜಿಕ್ ರಿನಿಟಿಸ್?

ವಾರ್ತಾಭಾರತಿವಾರ್ತಾಭಾರತಿ28 Feb 2021 12:15 AM IST
share

ಅಲರ್ಜಿಕ್ ರಿನಿಟಿಸ್ ಅಥವಾ ಅಲರ್ಜಿಗಳಿಂದ ಮೂಗಿನೊಳಗೆ ಉರಿಯೂತ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಲಕ್ಷಣಗಳು ಇಂದು ಮಾನವ ಜನಾಂಗವನ್ನು ಕಾಡುತ್ತಿರುವ ಮೂರನೇ ಅತ್ಯಂತ ಸಾಮಾನ್ಯ ರೋಗವಾಗಿದೆ. ಅಲರ್ಜಿಕ್ ರಿನಿಟಿಸ್ ಯಾವುದೇ ಬಾಹ್ಯ ಪ್ರೋಟಿನ್‌ಗೆ ರೋಗ ನಿರೋಧಕ ಶಕ್ತಿಯ ಅತಿಸಂವೇದನಾಶೀಲತೆಯಾಗಿದೆ ಮತ್ತು ಇದು ಹಿಸ್ಟಾಮೈನ್‌ಗಳೆಂಬ ರಾಸಾಯನಿಕಗಳ ಬಿಡುಗಡೆಗೆ ಕಾರಣವಾಗುತ್ತದೆ. ಈ ರಾಸಾಯನಿಕಗಳು ಮೂಗಿನಲ್ಲಿ ತಡೆ,ಸೀನುವಿಕೆ,ಕಣ್ಣಿನಲ್ಲಿ ನೀರು,ಅಲರ್ಜಿ ಕೆಮ್ಮು ಮತ್ತು ಕೆಲವರಲ್ಲಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಇದೇ ಕಾರಣದಿಂದ ಅಲರ್ಜಿ ರೋಗಿಗಳು ಸೀನುತ್ತಿರುವುದನ್ನು ಮತ್ತು ಕೆಮ್ಮುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಅಲರ್ಜಿಯು ಆಹಾರಕ್ಕೆ ಸಂಬಂಧಿಸಿದ್ದಾದರೆ ರೋಗಿಗೆ ಹೊಟ್ಟೆ ಸರಿಯಿರುವುದಿಲ್ಲ ಮತ್ತು ವಾಂತಿಯನ್ನೂ ಮಾಡಿಕೊಳ್ಳಬಹುದು. ಆಹಾರದ ಅಲರ್ಜಿಗಳು ತೀವ್ರ ಸ್ವರೂಪವನ್ನು ಹೊಂದಿರುತ್ತವೆ ಮತ್ತು ಸೂಕ್ತ ಚಿಕಿತ್ಸೆ ಅಗತ್ಯವಾಗುತ್ತದೆ.

ಹಲವಾರು ವರ್ಷಗಳವರೆಗೂ ವಿಜ್ಞಾನಿಗಳು ವ್ಯಕ್ತಿಗಳಲ್ಲಿ ಅಲರ್ಜಿಗಳಿಗೆ ಮತ್ತು ಮಾರಣಾಂತಿಕ ಅಲರ್ಜಿಗಳಿಗೆ ಕೆಲವು ಕಾರಣಗಳನ್ನು ನಂಬಿಕೊಂಡಿದ್ದರು. ಆದರೆ ವರ್ಷಗಳ ಸಂಶೋಧನೆ ಮತ್ತು ಟ್ರಯಲ್‌ಗಳ ಬಳಿಕ ಅಲರ್ಜಿಯು ಆನುವಂಶಿಕ ಪ್ರವೃತ್ತಿಯನ್ನು ಅವಲಂಬಿಸಿರುತ್ತದೆ ಎನ್ನುವುದು ಬೆಳಕಿಗೆ ಬಂದಿದೆ. ಅಲರ್ಜಿ ಕುಟುಂಬದಲ್ಲಿಯೇ ಹರಿದುಬಂದಿರುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ ಬಾಲ್ಯದಲ್ಲಿ ಪರಿಸರದಲ್ಲಿನ ಅಲರ್ಜಿಕಾರಕಗಳಿಗೆ ಕಡಮೆ ಒಡ್ಡಿಕೊಳ್ಳುವಿಕೆಯಿದ್ದರೆ ಮಗು ಹರೆಯಕ್ಕೆ ಕಾಲಿಡುವಾಗ ಅಲರ್ಜಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಟಾಮಿನ್ ಡಿ ಹೆಚ್ಚಾಗಿ ಅಲಕ್ಷಿಸಲ್ಪಟ್ಟಿರುವ ಇನ್ನೊಂದು ಅಂಶವಾಗಿದೆ. ವಿಟಾಮಿನ್ ಡಿ ಕೊರತೆಯು ಅಲರ್ಜಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಲರ್ಜಿಗಳಲ್ಲಿ ಹಲವು ವಿಧಗಳಿವೆ. ಗಾಳಿ,ಆಹಾರ,ಔಷಧಿಗಳು ಮತ್ತು ಹಾಲು ಉತ್ಪನ್ನಗಳಿಗೆ ವ್ಯಕ್ತಿಯು ಅಲರ್ಜಿಯನ್ನು ಹೊಂದಿರಬಹುದು ಮತ್ತು ಪ್ರತಿಯೊಂದು ವಿಧದ ಅಲರ್ಜಿಗೂ ಚಿಕಿತ್ಸೆಯು ಭಿನ್ನವಾಗಿರುತ್ತದೆ.

  ಅತಿಯಾದ ಸೀನುವಿಕೆ,ಕಣ್ಣುಗಳಲ್ಲಿ ನಿರಂತರ ತುರಿಕೆ,ಒಂದು ಋತುವಿನುದ್ದಕ್ಕೂ ಕೆಮ್ಮುವಿಕೆ,ಆಹಾರ ಸೇವನೆಯ ಬಳಿಕ ಮೈಯಲ್ಲಿ ದದ್ದುಗಳ ಏಳುವಿಕೆ,ಮುಖ ಬಾತುಕೊಳ್ಳುವುದು,ಅಸ್ತಮಾ (ಅಲರ್ಜಿ) ಇವುಗಳು ಬಾಧಿಸುತ್ತಿದ್ದರೆ ಸಕಾಲದಲ್ಲಿ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

ನೀವು ಅಲರ್ಜಿಯನ್ನು ಲಘುವಾಗಿ ಪರಿಗಣಿಸುವವರಲ್ಲಿ ಸೇರಿದ್ದರೆ ನೀವು ಆ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿದೆ. ಸೂಕ್ತ ಚಿಕಿತ್ಸೆಯ ಬಗ್ಗೆ ನಿರ್ಧರಿಸಲು ಅಲರ್ಜಿಯ ರೋಗನಿರ್ಧಾರವನ್ನು ಮೊದಲು ಮಾಡಬೇಕಾಗುತ್ತದೆ. ಹೀಗಾಗಿ ಸೂಕ್ತ ರೋಗನಿರ್ಧಾರಕ್ಕಾಗಿ ತಜ್ಞವೈದ್ಯರನ್ನು ಭೇಟಿಯಾಗಬೇಕು. ಅಲರ್ಜಿ ಎನ್ನುವುದು ದೃಢಪಟ್ಟರೆ ಸೂಕ್ತ ಚಿಕಿತ್ಸಾ ವಿಧಾನವನ್ನು ವೈದ್ಯರು ಆಯ್ದುಕೊಳ್ಳುತ್ತಾರೆ.

ಫಾರ್ಮಾಕೊಥೆರಪಿ: ಫೆಕ್ಸೊಫೆನಡೈನ್ ಅಲರ್ಜಿ ಪ್ರಕರಣಗಳಲ್ಲಿ ಬಳಕೆಯಾಗುವ ಅತ್ಯುತ್ತಮ ಔಷಧಿಗಳಲ್ಲೊಂದಾಗಿದೆ ಮತ್ತು ಇದನ್ನು ಹೆಚ್ಚಿನ ಡೋಸ್‌ಗಳಲ್ಲಿ ಸುರಕ್ಷಿತವಾಗಿ ಬಳಸಬಹುದು. ಫ್ಲುಟಿಕಾಸೋನ್ ಫರೇಟ್ ಮೂಗಿನಲ್ಲಿ ಸಿಂಪಡಿಸುವ ಸ್ಪ್ರೇ ರೂಪದಲ್ಲಿ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಅಲರ್ಜಿಗಳ ಲಕ್ಷಣಗಳನ್ನು ಶಮನಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.

ಅವಾಯ್ಡನ್ಸ್: ಫಾರ್ಮಾಕೊಥೆರಪಿಗೆ ಪೂರಕವಾಗಿ ಅವಾಯ್ಡನ್ಸ್ ಮೆಷರ್ಸ್‌ ಅಥವಾ ರೋಗವನ್ನು ತಪ್ಪಿಸುವ ಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸ್ಕಿನ್ ಪ್ರಿಕ್ ಟೆಸ್ಟ್‌ನ ಮೂಲಕ ಅಲರ್ಜಿಯು ಪತ್ತೆಯಾದಾಗ ಮಾತ್ರ ಈ ಚಿಕಿತ್ಸಾ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಇಮ್ಯುನೊಥೆರಪಿ: ಎಲ್ಲ ಚಿಕಿತ್ಸೆ ಸಾಧ್ಯತೆಗಳು ಮುಗಿದ,ಮಧ್ಯಮ ಮತ್ತು ತೀವ್ರ ಅಲರ್ಜಿ ರೋಗಿಗಳ ಪ್ರಕರಣಗಳಲ್ಲಿ ಇಮ್ಯುನೊಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯ ಕನಿಷ್ಠ ಅವಧಿ ಒಂದು ವರ್ಷವಾಗಿದ್ದು,ಐದು ವರ್ಷದವರೆಗೂ ವಿಸ್ತರಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X