ಅಡ್ಯಾರ್ ಕಣ್ಣೂರು: ಮದುಮಗಳು ಹೃದಯಾಘಾತದಿಂದ ನಿಧನ
ಮಂಗಳೂರು, ಮಾ.1: ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಸೋಮವಾರ ಮುಂಜಾವ ಹೃದಯಾಘಾತದಿಂದ ನಿಧನರಾದರು.
ರವಿವಾರವಷ್ಟೇ ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್ ಎಂಬವರೊಂದಿಗೆ ನೆರವೇರಿತ್ತು. ಅಡ್ಯಾರ್ ಕಣ್ಣೂರು ಜುಮಾ ಮಸ್ಜಿದ್ನಲ್ಲಿ ನಿಖಾಹ್ ನಡೆದಿತ್ತು. ಅಡ್ಯಾರ್ ಗಾರ್ಡನ್ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಆ ಬಳಿಕ ಮದುಮಗ ಮುಬಾರಕ್ ಅತ್ತೆಯ ಮನೆಗೆ ಆಗಮಿಸಿದ್ದರು. ನವಜೋಡಿಯು ಅತ್ಯಂತ ಲವಲವಿಕೆಯಿಂದಿತ್ತು. ಸೋಮವಾರ ಮುಂಜಾವ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸಂತಸ, ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ದುಃಖ ಮಡುಗಟ್ಟಿದೆ.
ಇಂದು ಲುಹರ್ ನಮಾಝ್ ನಂತರ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story